Don't Miss!
- News Congress Candidate List: ಟಿಕೆಟ್ ಹಂಚಿಕೆ ನಿರ್ಣಾಯಕ ಸಭೆ, ದೆಹಲಿಗೆ ಸಿದ್ದರಾಮಯ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Sports IPL 2024: ಮುಂಬೈ ಇಂಡಿಯನ್ಸ್ಗೆ ಆಘಾತದ ಮೇಲೆ ಆಘಾತ; ಸ್ಟಾರ್ ಬೌಲರ್ ಔಟ್
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಶಸ್ತಿ ಗೆದ್ದವರ ಮಾತು : ಪುನೀತ್, ಶೃತಿ, ತರುಣ್, ಧನಂಜಯ್ ಸಂತಸ
2018ರ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ ನಡೆದಿದೆ. ಈ ಬಾರಿ ನಟ ಪುನೀತ್ ರಾಜ್ ಕುಮಾರ್, ಶೃತಿ ಹರಿಹರನ್, ತರುಣ್ ಸುಧೀರ್, ಧನಂಜಯ್, ರವಿಶಂಕರ್, ಶ್ರದ್ಧಾ ಶ್ರೀನಾಥ್, ವಿ ನಾಗೇಂದ್ರ ಪ್ರಸಾದ್, ಅನುರಾಧ ಭಟ್, ಭವಾನಿ ಪ್ರಕಾಶ್, ಅರ್ಮನ್ ಮಲ್ಲಿಕ್, ಭರತ್ ಬಿಜೆ ಪ್ರಶಸ್ತಿ ಪಡೆದಿದ್ದಾರೆ.
ಇದರ ಜೊತೆಗೆ ರಾಜ್ ಬಿ ಶೆಟ್ಟಿ ನಿರ್ದೇಶನ ಹಾಗೂ ನಟನೆ ಮಾಡಿದ್ದ 'ಒಂದು ಮೊಟ್ಟೆಯ ಕಥೆ' ಸಿನಿಮಾ 2018ನೇ ಸಾಲಿನ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ.
65ನೇ ಸೌತ್ ಫಿಲ್ಮ್ ಫೇರ್: ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ
ಅಂದಹಾಗೆ, ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಪುನೀತ್ ರಾಜ್ ಕುಮಾರ್, ಶೃತಿಹರಿಹನ್, ಧನಂಜಯ್, ತುರುಣ್ ಸುಧೀರ್ ಹಾಗೂ ವಿ ನಾಗೇಂದ್ರ ಪ್ರಸಾದ್ ತಮ್ಮ ಸಂತಸವನ್ನು ಈ ರೀತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...
ಈ ಪ್ರಶಸ್ತಿಗೆ ಮೂವರು ಮುಖ್ಯ ಕಾರಣ- ಪುನೀತ್
''ಇಡೀ ಕರ್ನಾಟಕ 'ರಾಜಕುಮಾರ' ಸಿನಿಮಾವನ್ನು ಒಂದು ಹಬ್ಬ ಮಾಡಿದಂತೆ ಆಚರಿಸಿದ್ದರು. ಈಗ ಈ ಚಿತ್ರಕ್ಕಾಗಿ ಫಿಲ್ಮ್ ಫೇರ್ ಬಂದಿರುವುದು ಬಹಳ ಖುಷಿ ನೀಡಿದೆ. ಈ ಪ್ರಶಸ್ತಿಯನ್ನು ನಾನು ವಿಶೇಷವಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಡೇಡಿಕೇಟ್ ಮಾಡುತ್ತೇನೆ.''
ಕೆಲಸ ಮಾಡಲು ಸ್ಫೂರ್ತಿ ಕೊಟ್ಟಿದೆ - ಶೃತಿ ಹರಿಹರನ್
''ಈ ಪ್ರಶಸ್ತಿ ತುಂಬ ಉತ್ಸಾಹ ನೀಡಿದೆ. ಈ ಪ್ರಶಸ್ತಿ ನನ್ನ ಕೆಲಸವನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಲು ಹಾಗೂ ಇನ್ನು ಹೆಚ್ಚಿನ ಕೆಲಸ ಮಾಡಲು ಸ್ಫೂರ್ತಿ ಕೊಟ್ಟಿದೆ. ಒಬ್ಬ ನಟಿಯಾಗಿ ಇದನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟ. ಈ ಪ್ರಶಸ್ತಿ ಬಂದಿರುವುದಕ್ಕೆ 'ಬ್ಯೂಟಿಫುಲ್ ಮನಸುಗಳು' ಚಿತ್ರತಂಡಕ್ಕೆ ಹಾಗೂ ಫಿಲ್ಮ್ ಫೇರ್ ಗೆ ಧನ್ಯವಾದ ತಿಳಿಸುತ್ತೇನೆ.''
5ನೇ ಬಾರಿ ಅಪ್ಪುಗೆ ಫಿಲ್ಮ್ ಫೇರ್ : ಈ ಮೂವರಿಗೆ ಪ್ರಶಸ್ತಿ ಸಮರ್ಪಣೆ
ಯಾವಾಗಲು ನನ್ನ ನೆನಪಿನಲ್ಲಿ ಉಳಿಯುತ್ತದೆ - ವಿ ನಾಗೇಂದ್ರ ಪ್ರಸಾದ್
''ಅಪ್ಪ ಐ ಲವ್ ಯೂ..' ಹಾಡಿಗೆ ಪ್ರಶಸ್ತಿ ಸಿಕ್ಕಿದೆ. ಈ ಹಾಡನ್ನು ಆರು ಕೋಟಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಪ್ರಶಸ್ತಿ ನಿಜಕ್ಕೂ ಖುಷಿ ನೀಡಿದೆ. ಯಾಕೆಂದ್ರೆ, ಎಲ್ಲರೂ ಈ ಹಾಡಿಗೆ ಭಾವನಾತ್ಮಕವಾಗಿ ಹತ್ತಿರ ಆಗಿದ್ದರು. ಇಂತಹ ಪ್ರಶಸ್ತಿ ಯಾವಾಗಲು ನನ್ನ ನೆನಪಿನಲ್ಲಿ ಉಳಿಯುತ್ತದೆ. ಈ ಹಾಡಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ.''
ಇದು ನನ್ನ ಮೊದಲನೇ ಫಿಲ್ಮ್ ಫೇರ್ - ಧನಂಜಯ್
''ಇದು ನನ್ನ ಮೊದಲನೇ ಫಿಲ್ಮ್ ಫೇರ್. 'ಅಲ್ಲಮ' ರೀತಿಯ ಪಾತ್ರವನ್ನು ಗುರುತಿಸಿದ್ದಕ್ಕೆ ಧನ್ಯವಾದ ಈ ಪಾತ್ರವನ್ನು ನೀಡಿದ್ದ 'ಅಲ್ಲಮ' ಚಿತ್ರತಂಡಕ್ಕೆ, ನಿರ್ದೇಶಕರಾದ ನಾಗಭರಣ ಅವರಿಗೆ, ನಿರ್ಮಾಪಕರಿಗೆ ಧನ್ಯವಾದ. ಎಲ್ಲದಕ್ಕೂ ಹೆಚ್ಚಾಗಿ ಇವತ್ತು ಡಾಲಿ ಅಂತ ಕರ್ನಾಟಕದಲ್ಲಿ ಅಪ್ಪಿಕೊಂಡಿರುವ ಕನ್ನಡಿಗರಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ.''
ಇದು ಇಡೀ ತಂಡದ ಶ್ರಮ - ತರುಣ್ ಸುಧೀರ್
''ಚೌಕ' ಸಿನಿಮಾಗೆ ಪ್ರಶಸ್ತಿ ಬಂದಿದೆ. ಈ ಸಿನಿಮಾ ನೀಡಿದ್ದ ದ್ವಾರಕೀಶ್ ಚಿತ್ರಕ್ಕೆ ಧನ್ಯವಾದ. ಚಿತ್ರದ ಇಡೀ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ, ಕಾಶೀನಾಥ್ ಸರ್, ದರ್ಶನ್ ಸರ್ ಎಲ್ಲರೂ ನಂಬಿಕೆ ಇಟ್ಟು ನನ್ನ ಮೊದಲ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಇದೆಲ್ಲ ಅವರ ಶ್ರಮ.''