Don't Miss!
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಶಂಕರ್, ಅರ್ಜುನ್ ಜನ್ಯ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಸುದೀಪ್
ನಟ ಸುದೀಪ್ ತಾವು ಬೆಳೆಯುವುದರ ಜೊತೆಗೆ ಅನೇಕರನ್ನು ಚಿತ್ರರಂಗದಲ್ಲಿ ಬೆಳೆಸಿದ್ದಾರೆ. ಆ ಪೈಕಿ ಪ್ರಮುಖರು ನಟ ರವಿಶಂಕರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ಈ ಇಬ್ಬರು ಪ್ರತಿಭಾವಂತರಿಗೆ ಮರು ಜೀವ ನೀಡಿದ್ದ ಸಿನಿಮಾ 'ಕೆಂಪೇಗೌಡ'. ಈ ಸಿನಿಮಾ ಸುದೀಪ್ ನಿರ್ದೇಶನ ಹಾಗೂ ನಟನೆಯಲ್ಲಿ ಬಂದಿತ್ತು. ಇಂತಹ ಸಿನಿಮಾ ಬಿಡುಗಡೆಯಾಗಿ ಇಂದಿಗೆ 8 ವರ್ಷ ತುಂಬಿದೆ. ಈ ಸಂತಸವನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೇಡಿ ರವಿಶಂಕರ್ ಅಸಲಿಯತ್ತು ಬಯಲು ಮಾಡಿದ ಕಿಚ್ಚ ಸುದೀಪ್.!
ಸಿನಿಮಾದ ಬಗ್ಗೆ ಬರೆದುಕೊಂಡಿರುವ ಸುದೀಪ್ ''ನನ್ನ 'ಕೆಂಪೇಗೌಡ' ಸಿನಿಮಾಗಿಂತ ನಟ ರವಿಶಂಕರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಬೆಳವಣಿಗೆ ನನಗೆ ಖುಷಿ ನೀಡಿದೆ. 'ಕೆಂಪೇಗೌಡ' ಸಿನಿಮಾದಿಂದ ಇಂದಿನವರೆಗೆ ಅವರ ಜರ್ನಿ ಮುಂದುವರೆದಿದೆ. ಜೀವನ ನೀಡಿದ್ದನ್ನು ಅವರು ನಿಷ್ಟೆಯಿಂದ ಮಾಡುತ್ತಿದ್ದಾರೆ. ಅವರನ್ನು ಒಪ್ಪಿಕೊಂಡು, ಪ್ರೀತಿ ನೀಡುತ್ತಿರುವ ಎಲ್ಲ ಸ್ನೇಹಿತರಿಗೆ ಧನ್ಯವಾದ'' ಎಂದಿದ್ದಾರೆ.
More than my film kempegowda,, Im very happy that @ArjunjanyaAJ n Ravishankar made there mark n there journey from then til today has been their sheer honesty towards what life has offered. Mch luv to all u frnzz for accepting them n for loving them.. 🤗🤗🤗🙏🥂
— Kichcha Sudeepa (@KicchaSudeep) March 10, 2019
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಟ ರವಿಶಂಕರ್ 'ಕೆಂಪೇಗೌಡ' ಸಿನಿಮಾಗೆ ಮುಂಚೆ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಆದರೆ, ಈ ಸಿನಿಮಾ ಅವರಿಬ್ಬರ ಕೆರಿಯರ್ ಗೆ ದೊಡ್ಡ ಬ್ರೇಕ್ ನೀಡಿತ್ತು. ಅಲ್ಲಿಂದ ಶುರುವಾಗಿ ಇವತ್ತಿನ ವರೆಗೂ ಈ ಇಬ್ಬರು ಕನ್ನಡ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.