ಚುನಾವಣಾಗೆ ಸ್ಪರ್ಧಿಸಿರುವ ನಟ, ನಟಿಯರ ವಿರುದ್ಧ ಆಯೋಗಕ್ಕೆ ದೂರು!
Recommended Video

ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಅನೇಕರು ಚುನಾವಣೆಯ ಕಣದಲ್ಲಿ ಸ್ಪರ್ಧಿಗಳಾಗಿ ಭರ್ಜರಿ ಪ್ರಚಾರ ಆರಂಭ ಮಾಡಿದ್ದಾರೆ. ಚುನಾವಣಾ ಅಖಾಡಕ್ಕೆ ಧುಮುಕಿರುವ ನಟ, ನಟಿಯರು ತಮ್ಮ ಪ್ರಖ್ಯಾತಿಯನ್ನ ಬಳಸಿಕೊಂಡು ಪ್ರಚಾರ ಮಾಡುತ್ತಿದ್ದರು ಆದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಿನಿಮಾ ಕಲಾವಿದರ ಚಿತ್ರಗಳ ಪ್ರಸಾರಕ್ಕೂ ಇದೀಗ ಕುತ್ತು ಬರುತ್ತಿದೆ.
ಯಶವಂತಪುರ ಕ್ಷೇತ್ರದ ಅಭ್ಯರ್ಥಿಯಾಗಿರುವ ನಟ ಜಗ್ಗೇಶ್ ಅವರ ಕಾರ್ಯಕ್ರಮವನ್ನು ಟಿವಿ ವಾಹಿನಿಯಲ್ಲಿ ಪ್ರಸಾರ ಮಾಡಬಾರದು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಇದೇ ರೀತಿ ಹಲವು ಅಭ್ಯರ್ಥಿಗಳ ಸಿನಿಮಾ, ಧಾರಾವಾಹಿ ವಿರುದ್ದವೂ ದೃಶ್ಯ ಪ್ರಸಾರ ಸ್ಥಗಿತಗೊಳಿಸುವಂತೆ ದೂರು ಸಲ್ಲಿಸೋದಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ.

ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಪ್ರಾಚರದ ವೇದಿಕೆಗಳಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ಅವರೇ ಅಭಿನಯಿಸಿರುವ ಅಶ್ವಮೇಧ ಚಿತ್ರದ 'ಹೃದಯ ಸಮುದ್ರ ಕಲಕಿ' ಹಾಡನ್ನು ಹಾಡಿ ರಂಜಿಸುತ್ತಿದ್ದಾರೆ. ಇದು ಜನರ ಭಾವನೆಗಳ ಮೇಲೆ ಪೂರಕ ಪರಿಣಾಮ ಬೀರಲಿದ್ದು ಕುಮಾರ್ ಬಂಗಾರಪ್ಪ ಸಿನಿಮಾಗಳನ್ನು ಈ ಸಂದರ್ಭದಲ್ಲಿ ಪ್ರಸಾರ ಮಾಡಬೇಡಿ ಅಂತ ದೂರು ಸಲ್ಲಿಕೆಯಾಗಲಿದೆ.

ಇದೇ ರೀತಿ ನೆ.ಲ.ನರೇಂದ್ರಬಾಬು ನಟಿಸಿರುವ ಧಾರಾವಾಹಿಗೂ ಕುತ್ತು ಬರಲಿದೆ. ನಟ ಬಿ.ಸಿ.ಪಾಟೀಲ್, ನಟ ಶಶಿಕುಮಾರ್, ನಟಿ ಸಚಿವೆ ಉಮಾಶ್ರೀ ಸೇರಿದಂತೆ ಇನ್ನು ಅನೇಕರು ಅಭಿನಯ ಮಾಡಿರುವ ಸಿನಿಮಾನಗಳನ್ನು ಚುನಾವಣಾ ಸಮಯದಲ್ಲಿ ಪ್ರಸಾರ ಮಾಡದೇ ಇರುವಂತೆ ಕೋರಿ ಚುನಾವಣಾ ಆಯೋಗಕ್ಕೆ ದೂರುಗಳು ಸಲ್ಲಿಕಯಾಗುತ್ತಿವೆ.


Click it and Unblock the Notifications











