Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ನೊಂದು ಕ್ರೌಡ್ ಫಂಡಿಂಗ್ ಚಿತ್ರ 'ಮರೆಯಲಾರೆ'
ಮೊದಲ ಸಿನಿಮಾ 'ಸ್ಯಾಂಡಲ್ ವುಡ್ ಸರಿಗಮ' ಚಿತ್ರದಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು (ಅತ್ಯುತ್ತಮ ಕಥೆ ಹಾಗೂ ಚಿತ್ರಕಥೆ (ನೋಯ್ಡಾ ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್) ಪಡೆದ ನಂತರ ಶರತ್ ಖಾದ್ರಿ ಅವರು ಈ ಹಿಂದೆ ಪ್ರಾರಂಭ ಮಾಡಿ ಸ್ಥಗಿತ ಗೊಳಿಸಿದ್ದ 'ಮರೆಯಲಾರೆ' ಚಿತ್ರವನ್ನು ಮತ್ತೆ ಪ್ರಾರಂಭಿಸಿದ್ದಾರೆ.
ಸುರಭಿ ಟಾಕಿಸ್ ಅಡಿಯಲ್ಲಿ ಪ್ರಾರಂಭ ಆಗುತ್ತಿರುವ 'ಮರೆಯಾಲಾರೆ' ಸಮೂಹದಿಂದ ಹಣ ಸಹಾಯ (ಕ್ರೌಡ್ ಫಂಡಿಂಗ್) ಪಡೆದು ತಯಾರು ಮಾಡಲಿರುವ ಚಿತ್ರ ಇದು. ಈ ಹಿಂದೆ ಇದೇ ರೀತಿ 'ಲೂಸಿಯಾ' ಚಿತ್ರ ನಿರ್ಮಾಣವಾಗಿತ್ತು. ಪ್ರೀತಿ, ಸಂಬಂಧ, ಕನಸುಗಳ ವಿಷಯಗಳ ಹೊಸ ವಿಚಾರವನ್ನು ಹೊತ್ತ ಚಿತ್ರ ಇದು ಎಂದು ಶರತ್ ಖಾದ್ರಿ ಅವರು ಹೇಳಿದ್ದಾರೆ. [ಲೂಸಿಯಾ : ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ]
ಅರ್ಜುನ್ ಜನ್ಯ ಅವರು 'ಮರೆಯಲಾರೆ' ಚಿತ್ರಕ್ಕೆ ಸಂಗೀತ ಒದಗಿಸಲಿದ್ದಾರೆ. ತಾಂಡವ್ ಚಿತ್ರದ ನಾಯಕ, ಪವಿತ್ರ ಬೆಳ್ಳಿಯಪ್ಪ ಈ ಚಿತ್ರದ ನಾಯಕಿ. ಒಂದು ತಿಂಗಳ ಅವಧಿಯಲ್ಲಿ ಶರತ್ ಖಾದ್ರಿ ಅವರು ಚಿತ್ರಕ್ಕೆ ಹಲವಾರು ಹೊಸ ಮುಖಗಳನ್ನು ಪರಿಚಯಿಸಲಿದ್ದಾರೆ. ಚಿತ್ರದ ಕಥೆ ಬಹಳ ಹೊಸದಾದ್ದರಿಂದ ಅದಕ್ಕೆ ಹೊಸ ಮುಖಗಳ ಪರಿಚಯ ಆಗಬೇಕು ಎಂದು ಶರತ್ ಖಾದ್ರಿ ತಿಳಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)