twitter
    For Quick Alerts
    ALLOW NOTIFICATIONS  
    For Daily Alerts

    ಸುಮಲತಾ ಪರ ನಿಂತಿರುವ ಸ್ಟಾರ್ ನಟರ ನಡೆ ಪ್ರಶ್ನಿಸಿದ ನಟ ಚೇತನ್

    |

    Recommended Video

    ದರ್ಶನ್, ಯಶ್ ಇಬ್ಬರನ್ನು ಟೀಕಿಸಿದ ಸ್ಟಾರ್ ನಟ..!? | FILMIBEAT KANNADA

    ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಟಿ ಸುಮಲತಾ ಅವರು ಸ್ಪರ್ಧೆ ಮಾಡುತ್ತಿರುವುದಕ್ಕೆ ಸಿನಿಮಾರಂಗ ಮತ್ತು ರಾಜಕೀಯ ವಲಯದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಲತಾ ಅವರು ಇಷ್ಟು ಬೇಗ ರಾಜಕೀಯಕ್ಕೆ ಬರಬಾರದಿತ್ತು ಎಂದು ಕೆಲವರು ಹೇಳುತ್ತಿದ್ದರೇ, ಅಂಬಿ ಆದರ್ಶಗಳನ್ನ ಮುಂದುವರಿಸಲು ಸುಮಲತಾ ರಾಜಕೀಯ ಪ್ರವೇಶ ಸ್ವಾಗತರ್ಹ ಎನ್ನುತ್ತಿದ್ದಾರೆ.

    ಈ ನಡುವೆ ಹಲವು ಸಿನಿಮಾ ಸ್ಟಾರ್ ಗಳು ಸುಮಲತಾ ಅವರ ಬೆಂಬಲಕ್ಕೆ ನಿಂತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಟ ದರ್ಶನ್ ಮತ್ತು ಯಶ್ ಜೊತೆಯಲ್ಲಿ ಸುದ್ದಿಗೋಷ್ಠಿ ಮಾಡಿದ ಸುಮಲತಾ, ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆಂದು ಘೋಷಿಸಿದರು.

    ನಿನ್ನೆಯ ಪ್ರೆಸ್ ಮೀಟ್ ಬಳಿಕ ಸುಮಲತಾ ಬಗ್ಗೆ ಸುದೀಪ್ ಟ್ವೀಟ್ನಿನ್ನೆಯ ಪ್ರೆಸ್ ಮೀಟ್ ಬಳಿಕ ಸುಮಲತಾ ಬಗ್ಗೆ ಸುದೀಪ್ ಟ್ವೀಟ್

    ಸುಮಲತಾ ಅವರ ಈ ನಿರ್ಧಾರ ಮತ್ತು ಸಿನಿಮಾ ನಟರ ನಡೆಯನ್ನ ಸಾಮಾಜಿಕ ಹೋರಾಟಗಾರ ಮತ್ತು ಸಿನಿಮಾ ನಟ ಚೇತನ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, ಸುಮಲತಾ ಯಾವುದರ ಪರ ಎಂದು ಕೇಳಿದ್ದಾರೆ. ಮುಂದೆ ಓದಿ.....

    ಮಂಡ್ಯ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು?

    ಮಂಡ್ಯ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು?

    ''ಸುಮಲತಾ ಅವರಿಗೆ ಬೆಂಬಲ ನೀಡಿರುವ ಸಿನಿಮಾ ಸ್ಟಾರ್ ಗಳು ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರ ನಡೆ ಕುತೂಹಲವಾಗಿದ್ದು, ಮಂಡ್ಯ ಅಭಿವೃದ್ದಿಗೆ ಏನೂ ಮಾಡದ ನಿಮ್ಮ ಈ ಹೆಜ್ಜೆ ಪ್ರಶ್ನಾರ್ಥಕವಾಗಿದೆ'' ಎಂದು ನಟ ಚೇತನ್ ಪರೋಕ್ಷವಾಗಿ ಸ್ಟಾರ್ ನಟರನ್ನ ಪ್ರಶ್ನಿಸಿದ್ದಾರೆ.

    ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

    ದರ್ಶನ್ ಮತ್ತು ಯಶ್ ಟಾರ್ಗೆಟ್?

    ದರ್ಶನ್ ಮತ್ತು ಯಶ್ ಟಾರ್ಗೆಟ್?

    ಹಾಗ್ನೋಡಿದ್ರೆ, ಸುಮಲತಾ ಅವರ ಜೊತೆಯಾಗಿ ಅವರ ಬೆಂಬಲಕ್ಕೆ ಬಹಿರಂಗವಾಗಿ ನಿಂತಿರುವುದು ನಟ ದರ್ಶನ್ ಮತ್ತು ಯಶ್. ಇವರ ಜೊತೆಗೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಇನ್ನು ಕೆಲವರು. ಇವರಲ್ಲಿ ಯಾರೂ ಕೂಡ ಮಂಡ್ಯದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ನಟ ಚೇತನ್ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

    'ಸುಮಲತಾ ಹಿಂದೆ ನಾನು' ಎಂದ ದರ್ಶನ್: ನಿಖಿಲ್ ಬಗ್ಗೆ ದಾಸ ಏನಂದ್ರು?'ಸುಮಲತಾ ಹಿಂದೆ ನಾನು' ಎಂದ ದರ್ಶನ್: ನಿಖಿಲ್ ಬಗ್ಗೆ ದಾಸ ಏನಂದ್ರು?

    ಸುಮಲತಾ ಯಾರ ಪರ-ಯಾರ ವಿರೋಧ

    ಸುಮಲತಾ ಯಾರ ಪರ-ಯಾರ ವಿರೋಧ

    ''ಸಾಮಾಜಿಕ ಸೇವೆ, ಭ್ರಷ್ಟಾಚಾರ ನಿರ್ಮೂಲನೆ ಅಥವಾ ಕೇವಲ ಸಿದ್ಧಾಂತಗಳು ಸುಮಲತಾ ಅವರ ಚುನಾವಣಾ ಸ್ಪರ್ಧೆಗೆ ಕಾರಣವೇ. ಹಾಗಿದ್ರೆ, ಸುಮಲತಾ ಅವರು ಯಾವುದರ ವಿರೋಧ ಮತ್ತು ಯಾವುದರ ಪರ ಎಂದು ಯಾರಿಗಾದರೂ ಗೊತ್ತಿದೆಯಾ'' ಎಂದು ನಟ ಚೇತನ್ ಅಂಬರೀಶ್ ಪತ್ನಿಯನ್ನ ಪ್ರಶ್ನಿಸಿದ್ದಾರೆ.

    ಅಂಬಿ ಏನು ಅಂತ ಮಂಡ್ಯಗೆ ಗೊತ್ತು, ಮಗನಾಗಿ ಅಮ್ಮನ ನಿರ್ಧಾರಕ್ಕೆ ಬದ್ಧ ಎಂದ ಯಶ್ಅಂಬಿ ಏನು ಅಂತ ಮಂಡ್ಯಗೆ ಗೊತ್ತು, ಮಗನಾಗಿ ಅಮ್ಮನ ನಿರ್ಧಾರಕ್ಕೆ ಬದ್ಧ ಎಂದ ಯಶ್

    ಮಾರ್ಚ್ 20ಕ್ಕೆ ನಾಮಪತ್ರ ಸಲ್ಲಿಕೆ

    ಮಾರ್ಚ್ 20ಕ್ಕೆ ನಾಮಪತ್ರ ಸಲ್ಲಿಕೆ

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು, ಮಾರ್ಚ್ 20 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ನಟ ದರ್ಶನ್, ಯಶ್, ಅಂಬರೀಶ್ ಪುತ್ರ ಅಭಿಷೇಕ್ ಸೇರಿದಂತೆ ಹಲವು ಸಿನಿಮಾ ತಾರೆಯರು ಮತ್ತು ಅಂಬರೀಶ್ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ.

    ಕೊನೆಗೂ ನಿರ್ಧಾರ ಘೋಷಿಸಿದ ಸುಮಲತಾ: ದರ್ಶನ್-ಯಶ್ ಗೆ ಗೆಲ್ಲಿಸುವ ಜವಾಬ್ದಾರಿಕೊನೆಗೂ ನಿರ್ಧಾರ ಘೋಷಿಸಿದ ಸುಮಲತಾ: ದರ್ಶನ್-ಯಶ್ ಗೆ ಗೆಲ್ಲಿಸುವ ಜವಾಬ್ದಾರಿ

    English summary
    'A Dinagalu' Fame Kannada actor chetan has questioned sumalatha and film stars who supports sumalatha in mandya.
    Wednesday, March 20, 2019, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X