Just In
- 10 hrs ago
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- 11 hrs ago
'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್
- 11 hrs ago
ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ
- 12 hrs ago
ಪವನ್ ಕಲ್ಯಾಣ್ ಮಗಳ ಕುರಿತು ಸಹನಟಿ ಅನನ್ಯಾ ಮಾತು
Don't Miss!
- Lifestyle
ಸೋಮವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- News
ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜಕುಮಾರನನ್ನ ನೋಡಲು '400 ಕಿ.ಮೀ'ನಿಂದ ಬಂದ ಅಭಿಮಾನಿ
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟುವವರು ಯಾರು?. ಅಭಿಮಾನಿಗಳನ್ನ ದೇವರೆಂದು ಪೂಜಿಸುವ ಅಣ್ಣಾವ್ರ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ರಾಜ್ಯದ ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಸಾಗರದ ರೀತಿಯಲ್ಲಿ ಬರುತ್ತಲೇ ಇದ್ದಾರೆ. ಸ್ಟಾರ್ ಗಳಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ.
ಒಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಪ್ರೀತಿಯನ್ನ ವ್ಯಕ್ತ ಪಡಿಸುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಪುನೀತ್ ಅವರನ್ನ ಭೇಟಿ ಮಾಡಲು ಸುಮಾರು ಐದು ವರ್ಷದಿಂದ ಹುಟ್ಟುಹಬ್ಬದಂದು ತಪ್ಪದೆ ಬರುತ್ತಾನೆ. ಸುಮಾರು 400ಕಿಲೋ ಮೀಟರ್ ನಿಂದ ಬಂದು ರಾಜರತ್ನನಿಗೆ ಶುಭಕೋರುತ್ತಾನೆ. ಅದರಲ್ಲಿ ಏನಿದೆ. ಸಾಕಷ್ಟು ಜನರು ದೂರದ ಊರಿನಿಂದ ಬರುತ್ತಾರೆ ಅಂತ ನೀವು ಯೋಚನೆ ಮಾಡಿದ್ರೆ ಅದು ತಪ್ಪು.
ಈತ ಎಲ್ಲರ ಅಭಿಮಾನಿಗಳ ಮಧ್ಯೆ ವಿಶೇಷವಾಗಿ ನಿಲ್ಲುವ ಅಭಿಮಾನಿ 400 ಕಿಲೋ ಮೀಟರ್ ನಿಂದ ಬರುವುದರ ಜೊತೆಯಲ್ಲಿ ಪ್ರತಿಯೊಬ್ಬರು ಈತನತ್ತ ನೋಡುವಂತೆ ಆಕರ್ಷಣೆ ಮಾಡುವುದೇ ಈತನ ಸಾಮಾರ್ಥ್ಯ. ಹಾಗಾದರೆ ಆತ ಯಾರು? ಎಲ್ಲಿಂದ ಬರುತ್ತಾನೆ? ಪವರ್ ಸ್ಟಾರ್ ಭೇಟಿ ಮಾಡಿದಾಗ ಅಪ್ಪು ಹೇಳಿದ್ದೇನು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಣೆಬೆನ್ನೂರಿನ ವಿಶೇಷ ಅಭಿಮಾನಿ
ಈತ ಸಿದ್ದು ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ನಿವಾಸಿ. ಪವರ್ ಸ್ಟಾರ್ ಎಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ಅಪ್ಪು ಹುಟ್ಟುಹಬ್ಬದ ದಿನ ರಾಣೆಬೆನ್ನೂರಿನಿಂದ ಬೆಂಗಳೂರಿಗೆ ಬರುತ್ತಾನೆ .

ಎದೆ ಮೇಲೆ ಪವರ್ ಸ್ಟಾರ್ ಚಿತ್ತಾರ
ಸಿದ್ದು ಪ್ರತಿ ವರ್ಷ ಬೆಂಗಳೂರಿಗೆ ಹುಟ್ಟುಹಬ್ಬಕ್ಕೆ ಒಂದು ದಿನ ಇದೆ ಎನ್ನುವ ಮುಂಚೆಯೇ ಬಂದು ತಮ್ಮ ದೇಹದ ಮೇಲೆ ಪುನೀತ್ ಅವರ ಬಾವಚಿತ್ರವನ್ನ ಬಣ್ಣದ ಮೂಲಕ ಬಿಡಿಸಿಕೊಳ್ಳುತ್ತಾನೆ. ಪ್ರತಿ ವರ್ಷ ಬೇರೆ ಬೇರೆ ಚಿತ್ತಾರ ಬಿಡಿಸಿಕೊಂಡು ಜನರನ್ನ ಆಕರ್ಷಣೆ ಮಾಡುತ್ತಾನೆ.

ಐದನೇ ಬಾರಿ ಅಪ್ಪು ಭೇಟಿ
ಪವರ್ ಸ್ಟಾರ್ ಹುಟ್ಟುಹಬ್ಬ ಮಾತ್ರವಲ್ಲದೆ ಅಪ್ಪು ಸಿನಿಮಾ ಬಿಡುಗಡೆ ಆಗುವ ಸಂದರ್ಭದಲ್ಲಿ, ಶಿವರಾಜ್ ಕುಮಾರ್ ಬರ್ತಡೇಯಲ್ಲಿ. ಹೀಗೆ ಸಾಕಷ್ಟು ಶುಭ ಸಮಾರಂಭದಲ್ಲಿ ಸಿದ್ದು ಪುನೀತ್ ಅವರನ್ನ ಭೇಟಿ ಮಾಡಿದ್ದಾರೆ. ಕಳೆದ ಐದು ವರ್ಷದಿಂದ ಇದೇ ರೀತಿಯಲ್ಲಿ ಜನರ ಜೊತೆ ಅಪ್ಪು ಅವರನ್ನು ಆಕರ್ಷಣೆ ಮಾಡುತ್ತಿದ್ದಾನೆ.

ಅಭಿಮಾನಿಯ ಅಭಿಮಾನಕ್ಕೆ ಖುಷಿಯಾದ ಅಪ್ಪು
ಪ್ರತಿ ಬಾರಿ ಸಿದ್ದು ಅವರನ್ನ ಭೇಟಿ ಆದಾಗ ಪುನೀತ್ ಖುಷಿಯನ್ನ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಸಮಾರಮಭದಲ್ಲಿಯೋ ಕಾಣಿಸಿಕೊಳ್ಳುತ್ತೀಯಾ ಅಂತ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ.