Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಸರಳತೆ ಹಾಗೂ ಸೌಜನ್ಯತೆಗೆ 'ಇದೇ' ಸಾಕ್ಷಿ.!
Recommended Video
'ಅಭಿಮಾನಿಗಳೇ ದೇವರು' ಅಂತ ಅಣ್ಣಾವ್ರು ಹೇಳ್ತಿದ್ರು. ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕೂಡ ಅದನ್ನೇ ನಂಬಿ, ಪಾಲಿಸಿಕೊಂಡು ಬರುತ್ತಿದ್ದಾರೆ.
ಅಭಿಮಾನಿಗಳ ಮನಸ್ಸನ್ನ ದೊಡ್ಮನೆ ಕುಟುಂಬ ಎಂದೂ ನೋಯಿಸಲ್ಲ. ಅಭಿಮಾನಿಗಳನ್ನ ಸದಾ ಆರಾಧಿಸುವ ದೊಡ್ಮನೆ ಮಕ್ಕಳ ಸರಳತೆಗೆ ತಾಜಾ ಉದಾಹರಣೆ ಇಲ್ಲಿದೆ ನೋಡಿರಿ...
ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಕಾರಿನಲ್ಲಿ ಅಪ್ಪು ಹೋಗುತ್ತಿರುವುದನ್ನು ಗಮನಿಸಿದ ಓರ್ವ ವ್ಯಕ್ತಿ, ಪುನೀತ್ ಕಾರನ್ನೇ ಆರು ಕಿಲೋಮೀಟರ್ ವರೆಗೂ ಫಾಲೋ ಮಾಡಿದ್ದಾರೆ.
ಪುನೀತ್ 'ಫೇಕ್ ಅಕೌಂಟ್' ಬಗ್ಗೆ ಅಭಿಮಾನಿಗಳಿಂದ ಜಾಗೃತಿ
ಇದನ್ನ ಗಮನಿಸಿದ ಅಪ್ಪು ಕಾರು ನಿಲ್ಲಿಸಿ, ಆ ವ್ಯಕ್ತಿಯನ್ನ ಕರೆದು ಫೋಟೋ ತೆಗೆಸಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ರವರ ಈ ಸರಳತೆ ಹಾಗೂ ಸೌಜನ್ಯತೆಯನ್ನು ಕಂಡು ಆ ಅಭಿಮಾನಿ ಖುಷಿ ಆಗಿದ್ದಾರೆ.
'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!
''ಪುನೀತ್ ರಾಜ್ ಕುಮಾರ್ ರವರ ಸರಳತೆ ಹಾಗೂ ಸೌಜನ್ಯತೆಗೆ ನಾನು ನಿಜಕ್ಕೂ ಮೂಕನಾದೆ. ಪುನೀತ್ ರವರ ಕಾರನ್ನ ನಾನು ಸುಮಾರು ಆರು ಕಿ.ಮಿವರೆಗೂ ಫಾಲೋ ಮಾಡಿದೆ. ನನ್ನನ್ನ ಮಿರರ್ ನಲ್ಲಿ ನೋಡಿ ರಸ್ತೆ ಬದಿ ತಮ್ಮ ಕಾರು ನಿಲ್ಲಿಸಿ, ''ಪ್ರಾಣ ಮುಖ್ಯ.. ನಾನು ಮತ್ತೆ ಸಿಗುತ್ತೇನೆ... ಫೋಟೋ ತೆಗೆದುಕೊಳ್ಳಿ'' ಎಂದು ಬುದ್ಧಿವಾದ ಹೇಳಿ ಫೋಟೋ ತೆಗೆಸಿಕೊಂಡರು'' ಎಂದು ಕೀರ್ತಿ ರಾಜಾಹುಲಿ ಎಂಬ ಆ ವ್ಯಕ್ತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.