Don't Miss!
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- News Heatwave: ಈ ರಾಜ್ಯದ 8 ಜಿಲ್ಲೆಗಳಿಗೆ ಹೀಟ್ವೇವ್ ಎಚ್ಚರಿಕೆ; ಮಳೆ ಸಾಧ್ಯತೆ!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊದಲ ಬಾರಿಗೆ ಪುನೀತ್ ಗೆ ಧ್ವನಿ ನೀಡುತ್ತಿದ್ದಾರೆ ಲೆಜೆಂಡರಿ ಗಾಯಕ ಎಸ್ ಪಿ ಬಿ
Recommended Video
ಎಸ್ ಪಿ ಬಾಲಸುಭ್ರಮಣ್ಯಂ ಭಾರತೀಯ ಚಿತ್ರರಂಗದ ಖ್ಯಾತ ಗಾಯಕ. ದಕ್ಷಿಣ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ಜೊತೆಗೆ ಉತ್ತಮ ಭಾರತದ ಅನೇಕ ಭಾಷೆಗಳಲ್ಲಿ ದಾಖಲೆಯ ಹಾಡು ಹಾಡಿರುವ ಲೆಜೆಂಡರಿ ಗಾಯಕ ಎಸ್ ಪಿ ಬಿ. ವಿಶೇಷ ಅಂದರೆ ಎಸ್ ಪಿ ಬಿ ಇದುವರೆಗೂ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಧ್ವನಿ ನೀಡಿಲ್ಲ.
168ನೇ ಚಿತ್ರಕ್ಕೆ ಅದೃಷ್ಟದ ಗಾಯಕರನ್ನ ಆಯ್ಕೆ ಮಾಡಿದ ರಜನಿಕಾಂತ್!
ಆದರೀಗ ಅಪ್ಪು ಮತ್ತು ಎಸ್ ಪಿ ಬಿ ಕಾಂಬಿನೇಶನ್ ನೋಡುವ ಅವಕಾಶ ಅಭಿಮಾನಿಗಳ ಪಾಲಿಗೆ ಒಲಿದು ಬಂದಿದೆ. ಹೌದು, ಇದೆ ಮೊದಲ ಬಾರಿಗೆ ಪುನೀತ್ ಹೆಜ್ಜೆ ಹಾಕುವ ಹಾಡಿಗೆ ಎಸ್ ಪಿ ಬಾಲಸುಭ್ರಮಣ್ಯಂ ಹಾಡುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ತುಂಬಾ ವಿಶೇಷ.
ಮಾಯಾಬಜರ್ ಸಿನಿಮಾದಲ್ಲಿ ಪುನೀತ್ ಡ್ಯಾನ್ಸ್
ಎಸ್ ಪಿ ಬಿ ಹಾಡುತ್ತಿರುವುದು ಪುನೀತ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮಾಯಾಬಜಾರ್ ಚಿತ್ರಕ್ಕೆ. ನಿರ್ದೇಶಕ ರಾಧಕೃಷ್ಣ ರೆಡ್ಡಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಿದು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಒಂದು ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂ
ಯೋಗರಾಜ್ ಭಟ್ ಸಾಹಿತ್ಯ-ಎಸ್ ಪಿ ಬಿ ಗಾಯನ
ಪುನೀತ್ ಹೆಜ್ಜೆ ಹಾಕುತ್ತಿರುವ ಈ ಸಿನಿಮಾದ ಹಾಡಿಗೆ ಎಸ್ ಪಿ ಬಿ ಧ್ವನಿಯಾಗುತ್ತಿದ್ದಾರೆ. ಚಿತ್ರದ ಈ ಹಾಡು ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆಯಂತೆ. ಈ ಹಾಡಿಗೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬರುತ್ತಿದೆ.
ಜನವರಿಗೆ ಈ ಹಾಡು ರಿಲೀಸ್
ಎಸ್ ಪಿ ಬಿ ಮತ್ತು ಪುನೀತ್ ಕಾಂಬಿನೇಷನ್ ನ ಈ ಹಾಡಿನಲ್ಲಿ ಮೂಡಿ ಬಂದಿರುವ ಬಹುನಿರೀಕ್ಷೆಯ ಈ ಹಾಡಿನ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಹೌದು, ಚಿತ್ರದ ಲಿರಿಕಲ್ ವಿಡಿಯೋ ಇದೇ ತಿಂಗಳು 17ಕ್ಕೆ ಬಿಡುಗಡೆ ಆಗುತ್ತಿದೆ.
ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅಸಮಾಧಾನ ಹೊರಹಾಕಿದ ಎಸ್ ಪಿ ಬಿ
ಪಿ ಆರ್ ಕೆ ಬ್ಯಾನರ್ ನ ಎರಡನೆ ಸಿನಿಮಾ
ಮಾಯಾಬಜಾರ್ ಪುನೀತ್ ರಾಜ್ ಕುಮಾರ್ ಪಿ ಆರ್ ಕೆ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಎರಡನೆ ಸಿನಿಮಾ ಇದಾಗಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ವಿಸಿಷ್ಟ ಸಿಂಹ, ಪ್ರಕಾಶ್ ರಾಜ್, ಸುಧಾರಾಣಿ, ಚೈತ್ರಾ ರಾವ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಇದೆ. ಬಾರಿ ನಿರೀಕ್ಷೆ ಮೂಡಿಸಿರುವ ಮಾಯಾಬಜಾರ್ ಮುಂದಿನ ತಿಂಗಳು ತೆರೆ ಬರುತ್ತಿದೆ.