Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಉಪೇಂದ್ರ
''ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಉಪೇಂದ್ರ'' ಈ ರೀತಿಯ ಟೈಟಲ್ ಕಾರ್ಡ್ ಯಾವಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಆದರೆ, ಅದು ಬಂದಾಗ ಮಾತ್ರ ಅದರ ಖದರ್ ಬೇರೆಯದೆ ಮಟ್ಟದಲ್ಲಿ ಇರುತ್ತದೆ.
'ಎ' ಸಿನಿಮಾದ ಒಂದು ದೃಶ್ಯದಲ್ಲಿ ನಟ ಉಪೇಂದ್ರ ಟೋಪಿಯನ್ನು ಎತ್ತಿಕೊಂಡು ಧೂಳು ಕೊಡವಿ ತಲೆ ಮೇಲೆ ಹಾಕಿಕೊಂಡು ಬರುತ್ತಾರೆ. ಆ ದೃಶ್ಯ ಅಭಿಮಾನಿಗಳಲ್ಲಿ ಇಂದಿಗೂ ರೋಮಾಂಚನ ಉಂಟು ಮಾಡುತ್ತದೆ.
ಫಸ್ಟ್ ಡೇ 'A' ಸಿನಿಮಾ ನೋಡಿದ್ದ ಸುದೀಪ್ ಏನ್ ಹೇಳಿದ್ರು ಕೇಳಿ !
'ಎ' ಸಿನಿಮಾದಲ್ಲಿ ಬಂದ ಹಾಗೆ ಈಗಲೂ ಉಪೇಂದ್ರ ಮೈ ಕೊಡವಿ ಎದ್ದು ಬರಬೇಕಿದೆ. ಉಪೇಂದ್ರ ಅಭಿಮಾನಿಗಳಿಗೆ ಮಾತ್ರವಲ್ಲ ಇಡೀ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಇರುವ ಆಸೆ ಉಪೇಂದ್ರ ನಿರ್ದೇಶನ ಮಾಡಬೇಕು. ಹೆಚ್ಚು ಹೆಚ್ಚು ಚಿತ್ರಗಳನ್ನು ನಿರ್ದೇಶಿಸುತ್ತಲೇ ಇರಬೇಕು.
ಉಪೇಂದ್ರ ಅವರ ಪ್ರತಿಭೆ ಬರೀ ಕರ್ನಾಟಕಕ್ಕೆ ಸೀಮಿತ ಆಗುವಂತದ್ದು ಅಲ್ಲ. ಕಾಲಿವುಡ್ ನಲ್ಲಿ ಶಂಕರ್, ಟಾಲಿವುಡ್ ನಲ್ಲಿ ರಾಜಮೌಳಿ ಬೆಳೆದ ರೀತಿ ಉಪೇಂದ್ರ ರಾಷ್ಟ್ರ ಮಟ್ಟದಲ್ಲಿ ನಿರ್ದೇಶಕನಾಗಿ ಹೆಸರು ಮಾಡಬೇಕಿತ್ತು.
20 ವರ್ಷದ ಹಿಂದಿನ 'ಎ' ಚಿತ್ರವನ್ನ ಉಪೇಂದ್ರ ಮತ್ತೆ ಮಾಡಿದ್ರೆ.?
ಉಪೇಂದ್ರ ಬರೀ ನಿರ್ದೇಶಕರಾಗಿ ಉಳಿದಿದ್ದರೆ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತೇನೋ ಗೊತ್ತಿಲ್ಲ. ಆದರೆ, ಉಪೇಂದ್ರ ಹೀರೋ ಆದ ಮೇಲೆ ಅವರ ಒಳಗೆ ಇದ್ದ ನಿರ್ದೇಶಕ ಹೆಚ್ಚು ಹೊರಗೆ ಬರಲಿಲ್ಲ. ಒಬ್ಬ ನಟನಾಗಿ ಬ್ಯುಸಿಯಾದ ಮೇಲೆ ಉಪೇಂದ್ರ ಮಾಡಿದ್ದು, 'ಸೂಪರ್' ಹಾಗೂ 'ಉಪ್ಪಿ 2' ಚಿತ್ರಗಳನ್ನು ಮಾತ್ರ. ಆದರೂ, ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾಗಳಲ್ಲಿ ಪ್ರಮುಖವಾಗಿವೆ.
ಕನ್ನಡ ಮಾತ್ರವಲ್ಲ ಇತರ ಚಿತ್ರರಂಗದಲ್ಲಿಯೂ ಉಪೇಂದ್ರ ಅವರಿಗೆ ಇಂದಿಗೂ ದೊಡ್ಡ ಗೌರವ ನೀಡುತ್ತಾರೆ. ಅದಕ್ಕೆ ಕಾರಣ ಅವರ ಡೈರೆಕ್ಷನ್. ಉಪೇಂದ್ರ ನಿರ್ದೇಶನದಿಂದ ಸ್ಫೂರ್ತಿ ಪಡೆದ ಅದೆಷ್ಟೋ ನಿರ್ದೇಶಕರು ಚಿತ್ರರಂಗದಲ್ಲಿ ಹುಟ್ಟಿಕೊಂಡಿದ್ದಾರೆ. ಆದರೆ, ಅಭಿಮಾನಿಗಳಿಗೆ ಈಗ ನಿಜವಾದ 'ರಿಯಲ್ ಸ್ಟಾರ್' ಬೇಕಿದೆ. ನಿರ್ದೇಶಕ ಸೂರಿ ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಹೇಳಿದೆ ಹಾಗೆ 'ನಮಗೆ 'ನಿರ್ದೇಶಕ ಉಪೇಂದ್ರ' ಅವರು ಬೇಕಾಗಿದ್ದಾರೆ.