Don't Miss!
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶುರುವಾಗುವ ಮುನ್ನವೇ ಮುಗ್ಗರಿಸಿ ಬಿದ್ದ 'ರೋಬೋಟ್' ರಜನಿ!
ಸೂಪರ್ ಸ್ಟಾರ್ ರಜನಿಕಾಂತ್ ಕಂಗೆಟ್ಟಿದ್ದಾರೆ. 'ಲಿಂಗಾ' ಲಾಸ್ ಆಗಿದೆ. ವಿತರಕರು ಬೀದಿಗಿಳಿದಿದ್ದಾರೆ. ಸೋಲಿನ ಸುಳಿಯಿಂದ ಹೊರಬರುವುದಕ್ಕೆ ಮತ್ತೆ ರೋಬೋಟ್ ಚಿಟ್ಟಿಯಾಗಲು ರಜನಿ ನಿರ್ಧರಿಸಿದ್ದಾರೆ. ಅದಕ್ಕೆ ನಿರ್ದೇಶಕ ಶಂಕರ್ ಕೂಡ ಕೈ ಜೋಡಿಸಿದ್ದಾರೆ.
ಇಡೀ ದೇಶಾದ್ಯಂತ 'ಎಂದಿರನ್-2' ಸಿನಿಮಾ ಸುದ್ದಿ ಮಾಡಲಿ ಅನ್ನುವ ಕಾರಣಕ್ಕೆ ಬಾಲಿವುಡ್ ನ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಆಮೀರ್ ಖಾನ್ ರನ್ನ ವಿಶೇಷ ಪಾತ್ರಕ್ಕೆ ಕರೆತರಬೇಕು ಅಂತ ರಜನಿ ಮತ್ತು ಶಂಕರ್ ಪ್ರಯತ್ನ ಪಟ್ಟಿದ್ದರು.
ಹಿಂದೊಮ್ಮೆ ಸುದ್ದಿಯಾದಂತೆ ಆಮೀರ್ ಖಾನ್ ಜೊತೆ ಮಾತುಕತೆ ನಡೆಸುವುದಕ್ಕೆ ಶಂಕರ್ ಸಮಯ ಕೂಡ ನಿಗಧಿ ಮಾಡಿದ್ದರು. ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಆಮೀರ್ ಖಾನ್ ಜೊತೆ ಶಂಕರ್ ಮೀಟಿಂಗ್ ಮುಗಿದಿದೆ. ಫಲಿತಾಂಶ 'ನೆಗೆಟಿವ್' ಅನ್ನುವುದು ಬೇಸರದ ಸಂಗತಿ.
'ಎಂದಿರನ್-2' ಸಿನಿಮಾದಲ್ಲಿ ನಟಿಸುವುದಕ್ಕೆ ಆಮೀರ್ ಖಾನ್ ಒಪ್ಪಿಕೊಂಡಿಲ್ಲ. ಹಿಂದಿ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಕಾರಣ ಆಮೀರ್ ಡೇಟ್ಸ್ ಫ್ರೀ ಇಲ್ಲ. ಆದ ಕಾರಣ ಕಾಲಿವುಡ್ ಕಡೆ ಮುಖ ಮಾಡೋಕೆ ಕಷ್ಟ ಅಂತ ಆಮೀರ್ ಅಂದು ಬಿಟ್ಟಿದ್ದಾರೆ. [ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು... ]
ಆಮೀರ್ ಖಾನ್ ಹಿಂದೆ ಸರಿದಿರುವುದರಿಂದ ಅವರ ಜಾಗಕ್ಕೆ ಶಂಕರ್ ಯಾರನ್ನ ಕರೆ ತರುತ್ತಾರೆ ಅಂತ ಇನ್ನೂ ಡಿಸೈಡ್ ಮಾಡಿಲ್ಲ. ನಟಿ ಐಶ್ವರ್ಯ ರೈ ಕೂಡ ತಮ್ಮ ಕಾಲ್ ಶೀಟ್ ನ ಇನ್ನೂ ಕನ್ಫರ್ಮ್ ಮಾಡಿಲ್ಲ. ಮುಂದೇನಾಗುತ್ತೋ ಯಾರಿಗೂ ಗೊತ್ತಿಲ್ಲ!
ಈ ಬಾರಿ ಹಿಟ್ ಕೊಡಲೇಬೇಕು ಅಂತ ತೀರ್ಮಾನಿಸಿರುವ 'ತಲೈವಾ' ರಜನಿಕಾಂತ್ ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. (ಏಜೆನ್ಸೀಸ್)