Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯೋ! ಈ ಸಿನಿಮಾದ ರೀತಿಯೇ ಇದೆ ಅಭಿನಂದನ್ ಕಥೆ
ನೈಜ ಘಟನೆಯನ್ನು ಇಟ್ಟುಕೊಂಡು ಭಾರತ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಆದರೆ, ಇಲ್ಲಿ ಸಿನಿಮಾದ ಕಥೆಯೇ ನಿಜವಾಗಿ ನಡೆದು ಹೋಗಿದೆ.
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಪಿ ಪಾಕಿಸ್ತಾನದ ಸೈನ್ಯಕ್ಕೆ ಸೆರೆ ಸಿಕ್ಕಿದ್ದಾರೆ. ಇಡೀ ಭಾರತವೇ 'ನಮ್ಮ ಹೀರೋ ವಾಪಸ್ ಬರಬೇಕು' ಎಂದು ಪ್ರಾರ್ಥನೆ ಮಾಡಿದೆ. ಇದರ ನಡುವೆಯೇ ಅಭಿನಂದನ್ ಅವರ ಕಥೆ 'ಕಾಟ್ರು ವೆಲೆಯಾಡು' ಸಿನಿಮಾಗೆ ಹೊಂದುತ್ತಿದೆ.
ತಾನೇ ಕೆಲಸ ಮಾಡಿದ ಸಿನಿಮಾದ ಕತೆಯಂತೆ ಆಗಿದೆ ಮಗನ ಬದುಕು
'ಕಾಟ್ರು ವೆಲೆಯಾಡು' ಮಣಿರತ್ನಂ ನಿರ್ದೇಶನದಲ್ಲಿ 2017ರಲ್ಲಿ ಬಂದ ಸಿನಿಮಾ. ಈ ಸಿನಿಮಾದಲ್ಲಿಯೂ ನಾಯಕ ಪಾಕಿಸ್ತಾನದ ಸೈನ್ಯಕ್ಕೆ ಸೆರೆಯಾಗುತ್ತಾನೆ. ಅಚ್ಚರಿ ವಿಷಯ ಏನೆಂದರೆ, ಈ ಸಿನಿಮಾದ ಕಥೆಗೆ ಕೆಲಸ ಮಾಡಿದ್ದು, ಅಭಿನಂದನ್ ಅವರ ತಂದೆ ವಾರ್ತಮನ್.
ವಾರ್ತಮನ್ ಏರ್ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾರಣ 'ಕಾಟ್ರು ವೆಲೆಯಾಡು' ಸಿನಿಮಾದ ಕಥೆಗೆ ಅವರು ಸಹಾಯ ಮಾಡಿದ್ದರು. ವಿಪರ್ಯಾಸ ಅಂದರೆ, ಚಿತ್ರದ ಕಥೆಯ ರೀತಿಯೇ ಅವರ ಪುತ್ರ ಅಭಿನಂದನ್ ಪಾಕ್ ಸೆರೆಯಲ್ಲಿ ಇದ್ದಾರೆ.
ಅಭಿನಂದನ್ ಅವರ ತಂದೆ ವಾರ್ತಮನ್ ಅವರು ಭಾರತೀಯ ವಾಯು ಸೇನೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದವರು. ಏರ್ ಮಾರ್ಷಲ್ ಅಂತಹ ಉನ್ನತ ಹುದ್ದೆಗಳನ್ನು ನಿಭಾಯಿಸಿ ನಿವೃತ್ತರಾಗಿದ್ದಾರೆ. ಇನ್ನು, ಪಾಕ್ ಕಪಿಮುಷ್ಟಿಯಿಂದ ಭಾರತಾಂಬೆಯ ಈ ಹೆಮ್ಮೆಯ ಪುತ್ರ ಅದಷ್ಟು ಬೇಗ ತಾಯ್ನಾಡಿಗೆ ವಾಪನ್ ಬರಲಿ ಎಂದು ಪ್ರಾರ್ಥಿಸೊಣ.