Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯೋ! ಈ ಸಿನಿಮಾದ ರೀತಿಯೇ ಇದೆ ಅಭಿನಂದನ್ ಕಥೆ
ನೈಜ ಘಟನೆಯನ್ನು ಇಟ್ಟುಕೊಂಡು ಭಾರತ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಆದರೆ, ಇಲ್ಲಿ ಸಿನಿಮಾದ ಕಥೆಯೇ ನಿಜವಾಗಿ ನಡೆದು ಹೋಗಿದೆ.
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಪಿ ಪಾಕಿಸ್ತಾನದ ಸೈನ್ಯಕ್ಕೆ ಸೆರೆ ಸಿಕ್ಕಿದ್ದಾರೆ. ಇಡೀ ಭಾರತವೇ 'ನಮ್ಮ ಹೀರೋ ವಾಪಸ್ ಬರಬೇಕು' ಎಂದು ಪ್ರಾರ್ಥನೆ ಮಾಡಿದೆ. ಇದರ ನಡುವೆಯೇ ಅಭಿನಂದನ್ ಅವರ ಕಥೆ 'ಕಾಟ್ರು ವೆಲೆಯಾಡು' ಸಿನಿಮಾಗೆ ಹೊಂದುತ್ತಿದೆ.
ತಾನೇ ಕೆಲಸ ಮಾಡಿದ ಸಿನಿಮಾದ ಕತೆಯಂತೆ ಆಗಿದೆ ಮಗನ ಬದುಕು
'ಕಾಟ್ರು ವೆಲೆಯಾಡು' ಮಣಿರತ್ನಂ ನಿರ್ದೇಶನದಲ್ಲಿ 2017ರಲ್ಲಿ ಬಂದ ಸಿನಿಮಾ. ಈ ಸಿನಿಮಾದಲ್ಲಿಯೂ ನಾಯಕ ಪಾಕಿಸ್ತಾನದ ಸೈನ್ಯಕ್ಕೆ ಸೆರೆಯಾಗುತ್ತಾನೆ. ಅಚ್ಚರಿ ವಿಷಯ ಏನೆಂದರೆ, ಈ ಸಿನಿಮಾದ ಕಥೆಗೆ ಕೆಲಸ ಮಾಡಿದ್ದು, ಅಭಿನಂದನ್ ಅವರ ತಂದೆ ವಾರ್ತಮನ್.
ವಾರ್ತಮನ್ ಏರ್ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾರಣ 'ಕಾಟ್ರು ವೆಲೆಯಾಡು' ಸಿನಿಮಾದ ಕಥೆಗೆ ಅವರು ಸಹಾಯ ಮಾಡಿದ್ದರು. ವಿಪರ್ಯಾಸ ಅಂದರೆ, ಚಿತ್ರದ ಕಥೆಯ ರೀತಿಯೇ ಅವರ ಪುತ್ರ ಅಭಿನಂದನ್ ಪಾಕ್ ಸೆರೆಯಲ್ಲಿ ಇದ್ದಾರೆ.
ಅಭಿನಂದನ್ ಅವರ ತಂದೆ ವಾರ್ತಮನ್ ಅವರು ಭಾರತೀಯ ವಾಯು ಸೇನೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದವರು. ಏರ್ ಮಾರ್ಷಲ್ ಅಂತಹ ಉನ್ನತ ಹುದ್ದೆಗಳನ್ನು ನಿಭಾಯಿಸಿ ನಿವೃತ್ತರಾಗಿದ್ದಾರೆ. ಇನ್ನು, ಪಾಕ್ ಕಪಿಮುಷ್ಟಿಯಿಂದ ಭಾರತಾಂಬೆಯ ಈ ಹೆಮ್ಮೆಯ ಪುತ್ರ ಅದಷ್ಟು ಬೇಗ ತಾಯ್ನಾಡಿಗೆ ವಾಪನ್ ಬರಲಿ ಎಂದು ಪ್ರಾರ್ಥಿಸೊಣ.