Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯೋ! ಈ ಸಿನಿಮಾದ ರೀತಿಯೇ ಇದೆ ಅಭಿನಂದನ್ ಕಥೆ
ನೈಜ ಘಟನೆಯನ್ನು ಇಟ್ಟುಕೊಂಡು ಭಾರತ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಆದರೆ, ಇಲ್ಲಿ ಸಿನಿಮಾದ ಕಥೆಯೇ ನಿಜವಾಗಿ ನಡೆದು ಹೋಗಿದೆ.
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಪಿ ಪಾಕಿಸ್ತಾನದ ಸೈನ್ಯಕ್ಕೆ ಸೆರೆ ಸಿಕ್ಕಿದ್ದಾರೆ. ಇಡೀ ಭಾರತವೇ 'ನಮ್ಮ ಹೀರೋ ವಾಪಸ್ ಬರಬೇಕು' ಎಂದು ಪ್ರಾರ್ಥನೆ ಮಾಡಿದೆ. ಇದರ ನಡುವೆಯೇ ಅಭಿನಂದನ್ ಅವರ ಕಥೆ 'ಕಾಟ್ರು ವೆಲೆಯಾಡು' ಸಿನಿಮಾಗೆ ಹೊಂದುತ್ತಿದೆ.
ತಾನೇ ಕೆಲಸ ಮಾಡಿದ ಸಿನಿಮಾದ ಕತೆಯಂತೆ ಆಗಿದೆ ಮಗನ ಬದುಕು
'ಕಾಟ್ರು ವೆಲೆಯಾಡು' ಮಣಿರತ್ನಂ ನಿರ್ದೇಶನದಲ್ಲಿ 2017ರಲ್ಲಿ ಬಂದ ಸಿನಿಮಾ. ಈ ಸಿನಿಮಾದಲ್ಲಿಯೂ ನಾಯಕ ಪಾಕಿಸ್ತಾನದ ಸೈನ್ಯಕ್ಕೆ ಸೆರೆಯಾಗುತ್ತಾನೆ. ಅಚ್ಚರಿ ವಿಷಯ ಏನೆಂದರೆ, ಈ ಸಿನಿಮಾದ ಕಥೆಗೆ ಕೆಲಸ ಮಾಡಿದ್ದು, ಅಭಿನಂದನ್ ಅವರ ತಂದೆ ವಾರ್ತಮನ್.
ವಾರ್ತಮನ್ ಏರ್ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾರಣ 'ಕಾಟ್ರು ವೆಲೆಯಾಡು' ಸಿನಿಮಾದ ಕಥೆಗೆ ಅವರು ಸಹಾಯ ಮಾಡಿದ್ದರು. ವಿಪರ್ಯಾಸ ಅಂದರೆ, ಚಿತ್ರದ ಕಥೆಯ ರೀತಿಯೇ ಅವರ ಪುತ್ರ ಅಭಿನಂದನ್ ಪಾಕ್ ಸೆರೆಯಲ್ಲಿ ಇದ್ದಾರೆ.
ಅಭಿನಂದನ್ ಅವರ ತಂದೆ ವಾರ್ತಮನ್ ಅವರು ಭಾರತೀಯ ವಾಯು ಸೇನೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದವರು. ಏರ್ ಮಾರ್ಷಲ್ ಅಂತಹ ಉನ್ನತ ಹುದ್ದೆಗಳನ್ನು ನಿಭಾಯಿಸಿ ನಿವೃತ್ತರಾಗಿದ್ದಾರೆ. ಇನ್ನು, ಪಾಕ್ ಕಪಿಮುಷ್ಟಿಯಿಂದ ಭಾರತಾಂಬೆಯ ಈ ಹೆಮ್ಮೆಯ ಪುತ್ರ ಅದಷ್ಟು ಬೇಗ ತಾಯ್ನಾಡಿಗೆ ವಾಪನ್ ಬರಲಿ ಎಂದು ಪ್ರಾರ್ಥಿಸೊಣ.