Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಲುವಿನ ಹೊಸ್ತಿಲಲ್ಲಿ ಸುಮಲತಾ : ಅಭಿಷೇಕ್ ಮೊದಲ ಪ್ರತಿಕ್ರಿಯೆ
ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಅಂತಿಮ ಹಂತಕ್ಕೆ ಬರುತ್ತಿದೆ. ನಟಿ ಸುಮಲತಾ ಅಂಬರೀಶ್ ಗೆಲುವಿನ ಹೊಸ್ತಿಲಲ್ಲಿ ಇದ್ದಾರೆ. ನಿಖಿಲ್ ಕುಮಾರ್ ವಿರುದ್ಧ 50 ರಿಂದ 55 ಸಾವಿರ ಮತಗಳ ಮುನ್ನಡೆಯಲ್ಲಿ ಸುಮಲತಾ ಇದ್ದಾರೆ.
ಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಶತ್ರುಘ್ನ ಸಿನ್ಹಾಗೆ ಹೀನಾಯ ಸೋಲು
ಸುಮಲತಾ ಅವರ ಭಾರಿ ಮುನ್ನಡೆಯ ಬಗ್ಗೆ ಪುತ್ರ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ''ಲೀಡ್ ಜಾಸ್ತಿ ಇದೆ. ಆದರೂ ಇನ್ನು ಮತ ಎಣಿಕೆ ಬಾಕಿ ಇದೆ. ನಮ್ಮ ಹೋರಾಟಕ್ಕೆ ಜನ ಆಶೀರ್ವಾದ ಮಾಡಿದ್ದಾರೆ.'' ಎಂದು ಸಂತಸ ಹಂಚಿಕೊಂಡಿದ್ದಾರೆ.
''ನಮ್ಮ ಕೈಲಾದ ಪ್ರಯತ್ನ ಮಾಡಿದ್ವಿ. ಜನ ಮತ್ತು ದೇವರನ್ನು ನಂಬಿದ್ದೇವು. ಗೆದ್ದರೆ ಸಾಕು ಎಂದುಕೊಂಡಿದ್ವಿ. ಆದರೆ, ಲೀಡ್ ಕೂಡ ಚೆನ್ನಾಗಿದೆ.'' ಎಂದು ತಮ್ಮ ಗೆಲುವನ್ನು ಜನರಿಗೆ ಹಾಗೂ ದೇವರಿಗೆ ಅರ್ಪಿಸಿದ್ದಾರೆ.
ಇಷ್ಟು ಮಾತನಾಡಿದರುವ ಅಭಿಷೇಕ್ ಗೆಲುವು ಅಧಿಕೃತವಾಗಿ ಘೋಷಣೆ ಮಾಡಿದ ನಂತರ ಇನ್ನಷ್ಟು ವಿಚಾರ ಹಂಚಿಕೊಳ್ಳುತ್ತೇನೆ ಎಂದರು. ಈಗಾಗಲೇ ಅಭಿಮಾನಿಗಳು ಹಾಗೂ ಸ್ನೇಹಿತರು ಫೋನ್ ಕರೆ ಮೂಲಕ ಅಭಿಷೇಕ್ ಅವರಿಗೆ ಅಭಿನಂದಿಸುತ್ತಿದ್ದಾರಂತೆ.
ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ ಮಾಡಿದ್ದು, ಸಿ ಎಂ ಪುತ್ರ ನಿಖಿಲ್ ಕುಮಾರ್ ಅವರ ಎದುರಾಳಿ ಆಗಿದ್ದರು.