Don't Miss!
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿ ಬಾಸ್ ದರ್ಶನ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ವಿಲನ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ಆಚರಿಸಿದೆ. ಶಿವರಾತ್ರಿಯ ದಿನ, ಬೆಂಗಳೂರಿನ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಸಿ ಎಂ ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
Recommended Video
ಇನ್ನು ಸಚಿವ ಬೈರತಿ ಬಸವರಾಜ್ ಮತ್ತು ಅಭಿಷೇಕ್ ಅಂಬರೀಶ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಸಮಯದಲ್ಲಿ ಮಾತನಾಡಿದ ಅಭಿಷೇಕ್ ಅಂಬರೀಶ್, ಅಪ್ಪನ ಪರವಾಗಿ ನಾನು ಇಲ್ಲಿ ಬಂದಿದ್ದೀನಿ ಎಂದರು. ಇನ್ನು ಮುನಿರತ್ನ ಬಗ್ಗೆ ಮಾತನಾಡಿದ ಅಭಿ "ನಿಮ್ಮ ಸಿನಿಮಾದಲ್ಲಿ ನಮ್ಮ ಇಡಿ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ, ಕುರುಕ್ಷೇತ್ರದಲ್ಲಿ ಅಪ್ಪ ಮತ್ತು ದರ್ಶನ್ ಅವರಿಗೆ ಅವಕಾಶ ನೀಡಿದ್ರೆ, ಮುಂದಿನ ಸಿನಿಮಾ ಮದಕರಿನಾಯಕ ಚಿತ್ರದಲ್ಲಿ ಅಮ್ಮ ಕೂಡ ಇದ್ದಾರೆ. ಆದರೆ ನನ್ನ ಯಾಕೆ ಬಿಟ್ಟಿದ್ದೀರಿ" ಎಂದು ಕೇಳಿದರು.
ಅಂಬಿ ಪುತ್ರ ಅಭಿಷೇಕ್ ಹಿಂದಿಕ್ಕಿದ ಕೆ ಮಂಜು ಪುತ್ರ ಶ್ರೇಯಸ್
ಇನ್ನು ಮಾತು ಮುಂದುವರೆಸಿದ ಅಭಿ "ನನಗೆ ಅವಕಾಶ ಕೊಡುವುದಾದರೆ ದರ್ಶನ್ ಅವರು ಹೀರೋ ಆಗಿರಬೇಕು, ನನ್ನನ್ನು ವಿಲನ್ ಆಗಿ ಮಾಡಿ" ಎಂದು ಕೇಳಿಕೊಂಡರು. ವಿಲನ್ ಪಾತ್ರದಲ್ಲಿಯೆ ಯಾಕೆ ಮಾಡಬೇಕು ಎನ್ನುವುದನ್ನು ಸಹ ಅಭಿ ವಿವರಿಸಿದರು.
"ಚಿಕ್ಕವನಾಗಿದ್ದಾಗಿನಿಂದಲು ಅಪ್ಪ ಬೈಯುತ್ತಿದ್ದರು. ನನ್ನ ಕಂಟ್ರೋಲ್ ಗೆ ನೀನು ಬರುವುದಿಲ್ಲ ನಿನ್ನ ಅಣ್ಣನ ಹತ್ರ ಹೋಗು ಎಂದು ಹೇಳುತ್ತಿದ್ದರು. ದಿನ ಬೈಯಿಸಿಕೊಂಡು ಅಭ್ಯಾಸ ಆಗಿದೆ. ಹಾಗಾಗಿ ಸ್ಕ್ರೀನ್ ನಲ್ಲಿ ಆದರೆ ನನಗೂ ವರ್ಕೌಟ್, ನಿಮಗೂ ಆಗುತ್ತೆ" ಎಂದು ಹೇಳಿ ನಕ್ಕರು.
ಇನ್ನು ದರ್ಶನ್ ಜೊತೆ ಅಭಿಷೇಕ್, ಮುನಿರತ್ನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮುನಿರತ್ನ ನಿರ್ಮಾಣದ ವಿಂಗ್ ಕಮಾಂಡರ್ ಅಭಿನಂದನ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಕೂಡ ಬಣ್ಣಹಚ್ಚುತ್ತಿದ್ದಾರೆ.