Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪ ಅಂಬಿಯಂತೆ ಮಾನವೀಯತೆ ಮೆರೆದ ಮಗ ಅಭಿಶೇಕ್
ಮೈಸೂರು, ನವೆಂಬರ್ 26 : ಕಳೆದ ಎರಡು ದಿನಗಳಿಂದಲೂ ತಂದೆಯ ಅಂಬರೀಶ್ ಪಾರ್ಥೀವ ಶರೀರದ ಪಕ್ಕದಲ್ಲೇ ಇರುವ ಮಗ ಅಭಿಶೇಕ್ ಭಾವೋದ್ವೇಗ ಹೇಳತೀರದು.
ಇನ್ನು ಇಂದು ಬೆಳಗ್ಗಿನವರೆಗೂ ಮಂಡ್ಯದ ಸರ್.ಎಂ.ವಿ ಮೈದಾನದಲ್ಲೇ ಮೊಕ್ಕಾಂ ಹೂಡಿದ್ದ ಅಭಿಶೇಕ್ ಸರಳ ಜೀವಿಯಂತೆ ಕಂಡರು. ತಂದೆಯಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಅಂತಿಮ ದರ್ಶನದ ವೇಳೆ ಕಾಡುತ್ತಿರುವ ಸೆಲ್ಫಿ ಗೀಳು, ರಮ್ಯಾ ಮೇಡಂ ಗೈರು.!
ಸರ್.ಎಂ.ವಿ ಮೈದಾನದಲ್ಲಿ ಅಂತಿಮ ದರ್ಶನದ ವೇಳೆ, ಅಂಬರೀಶ್ ಪಾರ್ಥೀವ ಶರೀರದ ದರ್ಶನ ಪಡೆಯಲು ವಿಕಲಾಂಗನೋರ್ವ ಆಗಮಿಸಿದ್ದರು. ಆದರೇ ನೂಕುನುಗ್ಗಲು ಉಂಟಾದ ಹಿನ್ನೆಲೆ, ತನಗೆ ಅಂಬರೀಶ್ ಪಾರ್ಥಿವ ಶರೀರದ ದರ್ಶನ ಸಿಗೋದಿಲ್ಲ ಅಂತ ವಾಪಸ್ ಆಗುತ್ತಿದದ್ದರು.
ಅಂಬರೀಶ್ ಅಂತಿಮ ದರ್ಶನ ಪಡೆಯಲು ನೂಕುನುಗ್ಗಲು: ಹೊಡೆದಾಡಿಕೊಂಡ ಅಭಿಮಾನಿಗಳು.!
ಇದನ್ನು ಗಮನಿಸಿದ ಅಭಿಶೇಕ್ ಅಂಬರೀಶ್, ವಿಕಲಾಂಗನನ್ನು ಕರೆದು ಪಾರ್ಥೀವ ಶರೀರದ ದರ್ಶನ ಮಾಡಿಸಿದ್ದರು. ಅಂಬರೀಶ್ ಗೆ ವಿಕಲಾಂಗ ಅಂತಿಮ ನಮನ ಸಲ್ಲಿಸಿದರು. ವಿಕಲಾಂಗ ಅಭಿಮಾನಿಯ ಇಚ್ಛೆ ಈಡೇರಿಸಿ ಅಭಿಶೇಕ್ ಮಾನವೀಯತೆ ಮೆರೆದರು.
ಈ ಮಧ್ಯೆ ಭದ್ರತೆಯನ್ನು ಬೇಧಿಸಿ ಹೆಲಿಕಾಪ್ಟರ್ ನತ್ತ ನುಗ್ಗಿ ಓಡಿಬಂದ ಅಭಿಮಾನಿಯೊಬ್ಬನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದ ಘಟನೆಯೂ ನಡೆಯಿತು.