Don't Miss!
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಹೇಳಿದ ಆ ಮಾತು ನನಗೆ ದೊಡ್ಡ ಸಹಾಯ ಮಾಡಿತು: ಅಭಿಷೇಕ್
Recommended Video
ಅಂಬರೀಶ್ ಕುಟುಂಬದ ಸದಸ್ಯರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು ಎಂದು ಸ್ವತಃ ಅಂಬಿ, ಸುಮಲತಾ, ಅಭಿಷೇಕ್ ಹಲವು ಬಾರಿ ಹೇಳಿಕೊಂಡಿದ್ದಾರೆ. ದರ್ಶನ್ ಕೂಡ ಅಂಬಿಯನ್ನ ಅಪ್ಪಾಜಿ ಮತ್ತು ಸುಮಲತಾ ಅವರನ್ನ ಅಮ್ಮಾ ಎಂದೇ ಕರೆಯುತ್ತಿದ್ದರು.
ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ನಟ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ಶಕ್ತಿ ಹೆಚ್ಚಿಸಿದೆ.
ದರ್ಶನ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ '' ದರ್ಶನ್ ಅವರು ನನಗೆ ಹಿರಿಯ ಅಣ್ಣ, ಅಪ್ಪಾಜಿ ಮೊದಲ ಸಲ ಸೆಟ್ ಗೆ ಬಂದಾಗ ಭಯ ಆಗಿತ್ತು. ಆಮೇಲೆ ದರ್ಶನ್ ಬಂದ್ಮೇಲೆ ಮತ್ತೆ ಆ ಭಯ ಕಾಣಿಸ್ತು. ಇದನ್ನ ಸ್ವತಃ ಅವರ ಬಳಿಯೂ ಹೇಳಿದೆ ''ನೀವಿದ್ರೆ ಸ್ವಲ್ಪ ಭಯ ಆಗುತ್ತೆ'' ಅಂತ. ಅದಕ್ಕೆ ಅವರೊಂದು ಕಥೆ ಹೇಳಿದ್ರು ಎಂದು ಆ ಕತೆ ಹೇಳಿಕೊಂಡರು.
ಕೊಡವರಿಗೆ ದರ್ಶನ್-ಅಭಿಷೇಕ್ ಕೊಟ್ಟ ಗಿಫ್ಟ್ ಇದು
ಅಂಬರೀಶ್ ಜೊತೆ ದರ್ಶನ್ ಮೊದಲ ಸಿನಿಮಾ ಅಣ್ಣಾವ್ರು ಮಾಡಿದಾಗ ಅಪ್ಪಾಜಿ ಜೊತೆ ಡಿ ಬಾಸ್ ಮೊದಲ ದೃಶ್ಯವಿತ್ತಂತೆ. ಆಗ ದರ್ಶನ್ ನರ್ವಸ್ ಇದ್ರೂ ಚೆನ್ನಾಗಿ ಮಾಡಿದ್ರಂತೆ. ಅದಕ್ಕೆ ಅಪ್ಪಾಜಿ ಕೇಳಿದ್ರಂತೆ 'ಏನೋ ಎಲ್ಲರಿಗೂ ನನ್ನ ಕಂಡ್ರೆ ಒಂಥರಾ ಭಯ. ನೀನು ಕಣ್ಣಲ್ಲಿ ಕಣ್ಣಿಟ್ಟು ಡೈಲಾಗ್ ಹೊಡೆದೆ'' ಎಂದರಂತೆ. ಅದಕ್ಕೆ ದರ್ಶನ್ ಹೇಳಿದ್ರಂತೆ 'ಅಪ್ಪಾಜಿ ಬೇಜಾರಾಗಬೇಡಿ, ಆಕ್ಷನ್ ಅಂತ ಡೈರೆಕ್ಟರ್ ಹೇಳಿದ್ಮೇಲೆ ನೀವು ಆಕ್ಟರೇ, ನಾನು ಆಕ್ಟರ್ ಅಷ್ಟೆ. ದೊಡ್ಡವರಿಲ್ಲ ಸಣ್ಣವರಿಲ್ಲ. ಅದನ್ನೇ ನನಗೂ ಹೇಳಿದ್ರು. ಅದು ನನಗೆ ದೊಡ್ಡ ಸಹಾಯವಾಯಿತು'' ಎಂದು ಅಭಿಷೇಕ್ ನೆನಸಿಕೊಂಡರು.
ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ
''ದರ್ಶನ್ ಅವರಿಗೆ ಅಮರ್ ಸಿನಿಮಾ ತೋರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಅವರು ರಾಬರ್ಟ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಅಮರ್ ಸಿನಿಮಾಗೆ ಅವರ ಡಬ್ಬಿಂಗ್ ಮುಗಿಸಿಕೊಟ್ಟು ಹೋದರು. ಬಹುಶಃ ಸಮಯ ನೋಡಿ ಅವರನ್ನ ಭೇಟಿ ಮಾಡಿ ವ್ಯವಸ್ಥೆ ಮಾಡ್ತೀವಿ'' ಎಂದು ಅಭಿಷೇಕ್ ತಿಳಿಸಿದರು.
ನಾಗಶೇಖರ್ ನಿರ್ದೇಶನ ಮಾಡಿರುವ ಅಮರ್ ಚಿತ್ರವನ್ನ ಸಂದೇಶ್ ನಿರ್ಮಿಸಿದ್ದಾರೆ. ಅಭಿಷೇಕ್, ತಾನ್ಯ ಹೋಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ದರ್ಶನ್, ರಚಿತಾ ರಾಮ್, ನಿರೂಪ್ ಭಂಡಾರಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಮೇ 31 ರಂದು ಅಮರ್ ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.