Don't Miss!
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಸ್ಟೈಲ್ ನಲ್ಲಿ ಅಭಿಷೇಕ್ ಡೈಲಾಗ್, ಅಭಿಮಾನಿಗಳು ಫುಲ್ ಖುಷ್
ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಇನ್ನು ಬಂದಿಲ್ಲ. ಈ ನಡುವೆ ಅಂಬರೀಶ್ ಮಗ ಅಭಿಷೇಕ್ ತಮ್ಮ ತಾಯಿಗೆ ಸಾಥ್ ಕೊಡ್ತಿದ್ದಾರೆ.
ಸುಮಲತಾ ಅವರ ಜೊತೆ ಚುನಾವಣಾ ಪ್ರಚಾರ ಮಾಡುತ್ತಿರುವ ಅಭಿಷೇಕ್ ಅಲ್ಲಿನ ಜನರನ್ನ ರಂಜಿಸಲು ದರ್ಶನ್ ಮತ್ತು ಅಂಬರೀಶ್ ಸ್ಟೈಲ್ ನಲ್ಲಿ ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
'ಡಿ ಬಾಸ್ ಯಾರು' ಎಂದು ಕೇಳಿದ್ದ ಸಿಎಂಗೆ ದರ್ಶನ್ ಪ್ರತಿಕ್ರಿಯೆ
ಶ್ರೀರಂಗಪಟ್ಟಣದ ಹಳ್ಳಿಯೊಂದರಲ್ಲಿ ಪ್ರಚಾರ ಮಾಡಬೇಕಾದರೇ, ಅಲ್ಲಿನ ದರ್ಶನ್ ಅಭಿಮಾನಿಗಳು ಅಭಿಷೇಕ್ ಬಳಿ 'ಡಿ ಬಾಸ್ ಅವರ ಡೈಲಾಗ್ ಹೇಳಿ' ಎಂದು ಒತ್ತಾಯಿಸಿದ್ದಾರೆ. ಅಭಿಮಾನಿಗಳ ಕೋರಿಕೆ ಗೌರವಿಸಿದ ಅಭಿಷೇಕ್, ''ಅಮ್ಮ ನಡೆದಿದ್ದೇ ದಾರಿ, ತಾಕತ್ ಇದ್ರೆ ಕಟ್ಟಾಕಿ'' ಎಂದಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರದ ಬಗ್ಗೆ ಸಂಪೂರ್ಣ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
'ಆನೆ ನಡೆದಿದ್ದೇ ದಾರಿ, ತಾಕತ್ ಇದ್ರೆ ಕಟ್ಟಾಕಿ' ಎನ್ನುವುದು ಯಜಮಾನ ಚಿತ್ರದ ಅಸಲಿ ಡೈಲಾಗ್. ಇನ್ನು ಅದೇ ರೀತಿ ಅಂಬರೀಶ್ ಅವರ ಸ್ಟೈಲ್ ನಲ್ಲಿ 'ನೋ ವೇ, ಚಾನ್ಸ್ ಇಲ್ಲ' ಎಂಬ ಮಾತುಗಳು ಕೂಡ ಅಭಿಷೇಕ್ ಬಾಯಲ್ಲಿ ಬಂದವು.
ಒಟ್ನಲ್ಲಿ, ಮಂಡ್ಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲ್ತಾರಾ ಅಥವಾ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ತಾರಾ ಎಂಬ ಚರ್ಚೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.