Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ವುಡ್ನಲ್ಲೀಗ ಆ್ಯಕ್ಸಿಡೆಂಟ್ಗಳ ಸೀಸನ್!
ಉಪೇಂದ್ರ ಬಿದ್ದು ಕಾಲು ಮುರಿದುಕೊಂಡರು. ಅದರ ಬೆನ್ನಿಗೇ ಸುದೀಪ್ ಮೊಣಕಾಲಿನ ಲಿಗ್ಮೆಂಟ್ ಕಟ್ಟಾಗಿತ್ತು. ಅವರು ಸುಧಾರಿಸಿಕೊಳ್ಳುತ್ತಿದ್ದಂತೆ ಬಿ.ಸಿ. ಪಾಟೀಲರ ಕಾಲು ಕೈ ಕೊಟ್ಟಿತು. ಅನು ಪ್ರಭಾಕರ್, ಜಯಂತಿ ಪುತ್ರನಿಗೆ ಮನಸೋತದ್ದೂ ಆ್ಯಕ್ಸಿಡೆಂಟೇ. ಅದರ ಮುಂದಿನ ಅಧ್ಯಾಯವೇ ಜಯಂತಿ ಪ್ರಯಾಣ ಮಾಡ್ತಿದ್ದ ಕಾರು ಹಳ್ಳಕ್ಕೆ ಬಿದ್ದಿದ್ದು.
ಇವಿಷ್ಟು ಸಣ್ಣಪುಟ್ಟ ಸಂಗತಿಗಳಾದರೆ, ಪ್ರೇಮಕತೆಗಳು ಸೀರಿಯಲ್ಲಿಗೆ ಕೆಲಸ ಮಾಡುತ್ತಿದ್ದ ನೀರ್ನಳ್ಳಿ ರಾಜು ಎಂಬಾತ ಮಲೇರಿಯಾ ಬಂದು ಆಸ್ಪತ್ರೆ ಸೇರಿದ್ದಾನೆ. ಕಳೆದ ಇಪ್ಪತ್ತು ದಿನಗಳಿಂದ ಕೋಮಾದಲ್ಲಿದ್ದಾನೆ.
ಈ ನಡುವೆ, ಟೆಲಿಸೀರಿಯಲ್ ಮುಗಿಸಿಕೊಂಡು ಮೈಸೂರಿನಿಂದ ಬೆಂಗಳೂರಿಗೆ ಮರಳುತ್ತಿದ್ದ ನಂದಿತಾ ಅವರ ಕಾರು ಅಪಘಾತಕ್ಕೀಡಾಗಿ ನಂದಿತಾ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಪರಮೇಶಿ ಎಂಬಾತನ ಸ್ಥಿತಿ ಗಂಭೀರವಾಗಿದೆ. ಕಲಾವಿದರೆಲ್ಲ ಹೀಗೆ ಅಪಘಾತಕ್ಕೀಡಾಗಿರುವಾಗ ನಾವೇನು ಕಮ್ಮಿ ಅಂದುಕೊಂಡ ಪತ್ರಕರ್ತರ ವ್ಯಾನೂ ಬಳ್ಳಾರಿಯಿಂದ ಬರುವ ಹಾದಿಯಲ್ಲಿ ಅಪಘಾತಕ್ಕೀಡಾಗಿದೆ.
ಪ್ರಾಣ ಮತ್ತು ಮಾನ ಹಾನಿಯಾದ ಬಗ್ಗೆ ವರದಿಯಾಗಿಲ್ಲ!
ಮುಖಪುಟ / ಸ್ಯಾಂಡಲ್ವುಡ್