Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈದ್ಯರ ಮಾತು ಕೇಳದೆ ಗಾಲ್ಫ್ ಆಡಿದ ಮಣಿ ಆಸ್ಪತ್ರೆಗೆ!
ಭಾರತೀಯ ಚಿತ್ರರಂಗದ ಪ್ರಬುದ್ಧ ನಿರ್ದೇಶಕ, ನಟಿ ಸುಹಾಸಿನಿ ಅವರ ಪತಿ ಮಣಿರತ್ನಂ ಅವರಿಗೆ ಮತ್ತೊಮ್ಮೆ ಹೃದಯಾಘಾತವಾಗಿದೆ. ಕಾಶ್ಮೀರಕ್ಕೆ ತೆರಳಿದ್ದ ಮಣಿರತ್ನಂ ಅವರು ವೈದ್ಯರ ಸಲಹೆಯನ್ನು ಮೀರಿದ್ದು ಮತ್ತೊಮ್ಮೆ ಹೃದಯಕ್ಕೆ ಘಾಸಿ ತಂದಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಮಣಿ ಅವರು ಗಾಲ್ಫ್ ಆಡುತ್ತಿದ್ದ ಮಣಿ ಎದೆ ಹಿಡಿದುಕೊಂಡು ಕುಸಿದಿದ್ದಾರೆ. ತಕ್ಷಣವೇ ಶ್ರೀನಗರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಅಲ್ಲಿಂದ ನವದೆಹಲಿಗೆ ಮಣಿರತ್ನಂ ಅವರನ್ನು ಶಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆ ನೀಡಿದ್ದರಿಂದ ಅವರ ಸ್ಥಿತಿ ಸುಧಾರಿಸಿದೆ.
ಗಾಲ್ಫ್ ಆಡಲು ಹೋಗಿದ್ದೇಕೆ?: ಓಕೆ ಕಣ್ಮಣಿ ಯಶಸ್ಸಿನ ನಂತರ ಕೆಲ ಕಾಲ ಬ್ರೇಕ್ ತೆಗೆದುಕೊಂಡು ನಂತರ ಧನುಷ್ ಜೊತೆ ಹಿಂದಿ ಚಿತ್ರದ ಮಾತುಕತೆ ನಡೆಸಲು ನಿರ್ಧರಿಸಿದ ಮಣಿರತ್ನಂ ಅವರು ಶ್ರೀನಗರಾ ಟುಲಿಪ್ ಉದ್ಯಾನದಲ್ಲಿ ವಿಹರಿಸಲು ಇಚ್ಛಿಸಿದ್ದರು.
ಪ್ರಕೃತಿ ಪ್ರಿಯ ಮಣಿರತ್ನಂ ಅವರು ಪ್ರವಾಸ ಕೈಗೊಳ್ಳುವುದು ಮಾಮೂಲಿ. ಅದರೆ, ವೈದ್ಯರ ಸಲಹೆ ಮೀರಿ ಗಾಲ್ಫ್ ಆಡಲು ಹೋಗಿದ್ದು ಅವರಿಗೆ ಮುಳುವಾಗಿದೆ.
ಶ್ರೀನಗರದ ಷೇರ್-ಇ-ಕಾಶ್ಮೀರ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಲಘು ಹೃದಯಾಘಾತವಾಗಿದ್ದು, ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ವಿಶ್ರಾಂತಿ ಪಡೆಯುವಂತೆ ಮಣಿರತ್ನಂಗೆ ವೈದ್ಯರು ಸಲಹೆ ಮಾಡಿದ್ದಾರೆ. ಸುಹಾಸಿನಿ ಅವರು ಕಾಣದ ದೇವರಿಗೆ ಕೈ ಮುಗಿದಿದ್ದಾರೆ.
ಮಣಿರತ್ನಂ ಈಗಾಗಲೇ ಮೂರು ಬಾರಿ ಹೃದಯಾಘಾತವಾಗಿದೆ, 2004ರಿಂದ ಹೃದಯ ಸಂಬಂಧಿ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.