Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆಕ್ಟ್-1978' ಸಿನಿಮಾದ ಬೆಂಜಮಿನ್ ಪಾತ್ರಕ್ಕೆ ನಟನನ್ನು ಹುಡುಕಿದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ
ಸ್ಯಾಂಡಲ್ ವುಡ್ ನಲ್ಲಿ ಆಕ್ಟ್-1978 ಸಿನಿಮಾದೆ ಮಾತು. ಕೊರೊನಾ ಲಾಕ್ ಡೌನ್ ಬಳಿಕ ಬಿಡುಗಡೆಯಾದ ಮಾದಲ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತಮ ಸಿನಿಮಾ ಬಂದರೆ ಎಂಥ ಸಮಯದಲ್ಲಾದರು ಪ್ರೇಕ್ಷಕರು ಕೈಬಿಡಲ್ಲ ಎನ್ನುವುದಕ್ಕೆ ಆಕ್ಟ್-1978 ಸಿನಿಮಾನೆ ಉತ್ತಮ ಉದಾಹರಣೆ. ಆಕ್ಟ್ 1978 ಸಿನಿಮಾಗೆ ಪ್ರೇಕ್ಷಕರು ಮತ್ತು ಚಿತ್ರರಂಗದ ಗಣ್ಯರಿಂದ ಮೆಚ್ಚುಗೆಯ ಮಾತುಗಳು ಬರುತ್ತಿದೆ.
ಈ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹೆಚ್ಚು ಕಾಡಿದ ಪಾತ್ರಗಳಲ್ಲಿ ಬೆಂಜಮಿನ್ ಪಾತ್ರ ಕೂಡ ಒಂದು. ಚಿತ್ರಪ್ರಿಯರಿಂದ ಬೆಂಜಮಿನ್ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪಾತ್ರದಲ್ಲಿ ನಿರ್ದೇಶಕ ರಘು ಶಿವಮೊಗ್ಗ ಕಾಣಿಸಿಕೊಂಡಿದ್ದಾರೆ. ಚೂರಿ ಕಟ್ಟೆ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದ ರಘು ಶಿವಮೊಗ್ಗ ಇದೀಗ ಬೆಂಜಮಿನ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಾತ್ರ ಮತ್ತು ಆಯ್ಕೆಯ ಬಗ್ಗೆ ಆಕ್ಟ-1978 ಸಿನಿಮಾದ ಸಂಭಾಷಣೆ ಮತ್ತು ಚಿತ್ರಕಥೆ ಬರೆದ ವೀರೇಂದ್ರ ಮಲ್ಲಣ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..
ಬೆಂಜಮಿನ್ ಪಾತ್ರಕ್ಕೆ ರಘು ಶಿವಮೊಗ್ಗ ಆಯ್ಕೆ ಆಗಿದ್ದು ಹೇಗೆ?
'ಆಕ್ಟ್-1978 ಚಿತ್ರದ ಬೆಂಜಮಿನ್ ಪಾತ್ರಕ್ಕೆ ಸಾಕಷ್ಟು ಜನರ ಮೆಚ್ಚುಗೆ ಸಿಕ್ತಿದೆ. ಆ ಪಾತ್ರಕ್ಕೆ ನಟರನ್ನು ಹುಡುಕುವ ಹಿಂದಿನ ಪಾಡು ಭಯಂಕರ ಇತ್ತು. ನಮ್ಮ "ಆಕ್ಟ್-1978" ಸಿನೆಮಾಗೆ ಪಾತ್ರಧಾರಿಗಳನ್ನೆಲ್ಲಾ ಆಯ್ಕೆ ಮಾಡ್ತಾ ಇದ್ದ ಸಮಯದಲ್ಲಿ ಬಹುತೇಕ ಎಲ್ಲ ಪಾತ್ರಗಳಿಗೂ ಪಾತ್ರಧಾರಿಗಳ ಆಯ್ಕೆ ಆಗಿತ್ತು. ಒಂದಷ್ಟು ಅನಿರೀಕ್ಷಿತ ಬೆಳವಣಿಗೆಗಳು ಮತ್ತು ಬದಲಾವಣೆಗಳ ಕಾರಣಕ್ಕೆ ಶೂಟಿಂಗ್ ಗೆ ಹೋಗಲು ಆರೇಳು ದಿನಗಳು ಬಾಕಿ ಇದ್ದಾಗಲೂ "ಬೆಂಜಮಿನ್" ಪಾತ್ರಕ್ಕೆ ಹುಡುಕಾಟ ನಡೀತಾ ಇತ್ತು. ನನ್ ಫೋನಲ್ಲಾಗ್ಲೀ ಮಂಸೋರೆ ಅವರ ಫೋನಲ್ಲಾಗಲಿ ಇರುವ ಎರಡು ಸಾವಿರಕ್ಕೂ ಅಧಿಕ ಕಾಂಟಾಕ್ಟ್ ನಂಬರ್ ಗಳ ಒಳಗೆ "ACTORS" ಅಂತ ಟೈಪ್ ಮಾಡಿ ಸೂಕ್ತ ಅನ್ಸೋ ಹೆಸರುಗಳಿಗೆಲ್ಲಾ ಕರೆ ಮಾಡಿ ಮಾತಾಡೋದು, ಅಷ್ಟು ಕಡಿಮ ಅವದಿಯಲ್ಲಿ ಡೇಟ್ಸ್ ಹೊಂದಾಣಿಕೆ ಕಷ್ಟವಾಗ್ತಿತ್ತು ಎಲ್ಲರಿಗೂ.'
ಗೂಗಲ್ ಅಂಗಡಿ ಬಳಿ ಹೊಳೆದ ಐಡಿಯಾ
'ನಮಗೆ ಹದಿನೆಂಟು ದಿನಗಳ ಕಾಲ non-stop dates ಬೇಕಿತ್ತು. ಅದೊಂದು ದಿನ almost midnight ಹೊತ್ತಿನಲ್ಲಿ ನಾನು ಮತ್ತು ಮಂಜಣ್ಣ (ಮಂಸೋರೆ) ಇಬ್ರೂ ಕತ್ರಿಗುಪ್ಪೆಯ ಗೂಗಲ್ ಅಂಗಡಿ ಹತ್ರ ಕೂತಿದ್ವಿ. ಕತ್ರಿಗುಪ್ಪೆ-ವಿದ್ಯಾಪೀಠ ರಸ್ತೆಯಲ್ಲಿರೋ ಒಂದು ಅಂಗಡಿಲಿ ನಾವ್ ಕಾಫಿ ಟೀ ಕುಡಿಯಕ್ ಹೋದಾಗ ಅಲ್ಲಿ ಗೂಗಲ್ ಪೇ ಬಳಸ್ತೀವಿ. ಆ ರಸ್ತೆಯಲ್ಲಿ ಮೊದಲು ಗೂಗಲ್ ಪೇ ಸೌಲಭ್ಯ ಶುರು ಮಾಡಿದ ಅಂಗಡಿ ಅದು. ಹಂಗಾಗಿ ಅದನ್ನು ಗೂಗಲ್ ಅಂಗಡಿ ಅಂತ ಕರೀತೀವಿ ನಾವು. ನಮ್ ಟೀಮ್ ನ ಯಾರಿಗಾದರೂ ನಾವು ಹೇಳೋ ಲ್ಯಾಂಡ್ ಮಾರ್ಕುಗಳ ಹೆಸರು ಹೀಗಿರುತ್ತವೆ - ಗೂಗಲ್ ಅಂಗಡಿ, ಲಕ್ಷ್ಮಣ್ ಅಡ್ಡಾ, ಮಂಸೋರೆ ಸರ್ಕಲ್, ರೆಡ್-ಸನ್ ಪಕ್ಕ, ಮಲಯಾಳಿ ಶಾಪ್, ಚಾಯ್ ಪಾಯಿಂಟ್, ಪಾಟೀಲನ್ ಮನೆ, ಈ ಥರದಲ್ಲಿ ನಮ್ ತಂಡ ಮತ್ತು ಗೆಳೆಯರ ಸರ್ಕಲ್ ಒಳಗೆ ಪಾಪ್ಯೂಲರ್ ಆದಂತಹ ಹಲವು ಜಾಗಗಳಿದಾವೆ.'
ಮೂಗಿನ ಮಟ್ಟ ನೀರಿನಲ್ಲಿ ಮುಳುಗಿ ಉಸಿರುಗಟ್ಟಿದ ಅನುಭವ
'ನಾನು ಅಥವ ಮಂಸೋರೆ ಅವರು ಆಕ್ಟ್-1978 ಕುರಿತು ಮುಂದಕ್ಕೆ ಏನೇ ಬರೆದರೂ ಅಥವ ಮಾತನಾಡಿದರೂ ಈ ಜಾಗಗಳ ಹೆಸರು ಮೆನ್ಷನ್ ಆಗಬಹುದು. ಆ ಗೂಗಲ್ ಅಂಗಡಿ ಮುಂದೆ ತಲೆ ಸಿಡಿದೋಗುವಷ್ಟು ಒತ್ತಡದಲ್ಲಿ ಕೂತಿದ್ದಾಗ ನಮ್ಮ ಶೂಟಿಂಗಿಗೆ ಮೂರೇ ದಿನಗಳು ಬಾಕಿ ಇತ್ತಷ್ಟೇ. ಮೂಗಿನ ಮಟ್ಟ ನೀರಿನಲ್ಲಿ ಮುಳುಗಿ ಉಸಿರುಗಟ್ಟಿದ ಅನುಭವ. ಸುಮಾರು 50ಕ್ಕೂ ಹೆಚ್ಚು ನಟ-ನಟಿಯರ ದಿನಾಂಕಗಳನ್ನ ಪಡೆದಾಗಿತ್ತು. ಮೈಸೂರಿನ ಲೇಡಿಸ್ ಕ್ಲಬ್ ಹಾಲ್ ಒಂದರಲ್ಲಿ ನಮ್ಮ ಸಿನೆಮಾದ ಮುಖ್ಯ ಕಥಾ ಭಾಗ ನಡೆಯುವ ಲೊಕೇಷನ್ ಸೆಟ್ ಕೂಡ ಹಾಕಿಯಾಗಿತ್ತು. ಅಷ್ಟೊತ್ತಿಗಾಗಲೇ ಸುಮಾರು 30ಲಕ್ಷ ಬಡ್ಜೆಟ್ ಹೂಡಿಕೆಯಾಗಿತ್ತು.
ಚಿತ್ರಕಲಾ ಪರಿಷತ್ ಭಾಷೆ ಭಾಷೆ ಅರ್ಥವಾಗಿಲ್ಲ
'ಶೂಟಿಂಗ್ ಮುಂದಕ್ ಹಾಕೋ ಹಾಗಿಲ್ಲ, ನಮ್ಮ ಅರ್ಜೆನ್ಸಿಗೆ ಯಾರನ್ನೋ ತಂದು ಆ ಪಾತ್ರ ಮಾಡಿಸುವಂತೂ ಇರಲಿಲ್ಲ. ನಾನೇ ಒಂದ್ ಕ್ಷಣ ಆತಂಕದಿಂದ ಯಾರಾದರೂ ನಟರ ಹೆಸರು ಹೇಳಿ ಮಂಜಣ್ಣ, ಅವರು ಡೇಟ್ಸ್ ಸಿಗುತ್ತೆ, ಹಾಕ್ಕೊಂಡು ಶೂಟಿಂಗ್ ಶುರು ಮಾಡಣ. ಎಷ್ಟೊಂದು ಪಾತ್ರಗಳಿಗೆ ಎಂಥಾ ಘಟಾನುಘಟಿ ನಟರನ್ನ ಆಯ್ಕೆ ಮಾಡ್ಕೊಂಡಿದಿವಿ, ಅಷ್ಟರ ನಡುವೆ ಇದೊಂದು ಪಾತ್ರಕ್ಕೆ ಕಾಂಪ್ರಮೈಸ್ ಆಗೋದ್ ತಪ್ಪಲ್ಲ. ಅಂತಂದಾಗ ಮಂಸೋರೆ "ಹಂಗಲ್ಲ ವೀರಣ್ಣ, ನೀ ಹೇಳ್ತಿರೋ ನಟ ಒಳ್ಳೆ ನಟನೇ, ಆದ್ರೆ ಈ ಪಾತ್ರಕ್ ಸೂಟ್ ಆಗಲ್ಲ. ಇದಕ್ಕೆ ಅದೇನೋ ಬೇಕು..!" ಎಂದು ನನಗೆ ಅರ್ಥವಾಗದ "ಚಿತ್ರಕಲಾ ಪರಿಷತ್ ಭಾಷೆಯಲ್ಲಿ" ಏನೋ ಹೇಳಿ convince ಮಾಡಿನೋ ಅಥವ confuse ಮಾಡ್ಸಿನೋ ನನ್ ತಲೇಲಿದ್ದ "ಕಾಂಪ್ರಮೈಸ್" ಐಡಿಯಾ ಡ್ರಾಪ್ ಮಾಡ್ಸಿದ್ರು.'
ರಾತ್ರಿ ಬೀಟ್ ಪೊಲೀಸರಿಗೆ ದುರ್ಗಾಂಬ ಬಸ್ ಕಥೆ ಕೇಳಿದ ತಂಡ
'ಮತ್ತೊಂದಷ್ಟೊತ್ತು ಅಲ್ಲೇ ಕೂತಿದ್ದಾಗ ನೈಟ್ ಬೀಟ್ ಪೊಲೀಸವ್ರು ಬಂದು "ಯಾರ್ರೀ, ಏನ್ ಮಾಡ್ತಿದಿರ, ಹೋಗಿ ಮನೆಗೆ" ಒಂದು ಅವಾಜ್ ಬಿಟ್ರು. ಮನೆಗೆ ಹೋದ್ರೆ ಟೆನ್ಷನ್ನಿಗೆ ನಿದ್ರೆ ಬರಕಿಲ್ಲ, ನಮ್ ಸಿನೆಮಾ ಕಥೆಗಳಾಗೋದೇ ಹೀಗೆ. ಎಲ್ಲೋ ಟೀ ಅಂಗಡಿ ಮುಂದೆ ಕೂತು ಚರ್ಚೆ ಮಾಡ್ಕೊಂಡು, ಯಾವುದೋ ಒಂದು ರಸ್ತೆಬದಿಯ ಚಿತ್ರಾನ್ನ-ಪಲಾವ್ ಗಾಡಿ ಹತ್ರ ಟ್ವಿಸ್ಟುಗಳು ಹೊಳೆಯೋದು, ಹೀಗೆ ಮಧ್ಯರಾತ್ರಿ ಸದ್ದಿಲ್ಲದ ಹೊತ್ನಲ್ಲಿ ಆಚೆ ಬಂದ್ ಸುತ್ತಾಡಿದಾಗ ಏನೋ thoughts development ಆಗುತ್ತೆ. ಅದಷ್ಟನ್ನೂ ಪೊಲೀಸವ್ರಿಗೆ ಹೇಳಕ್ಕಾಗಲ್ವಲ್ಲ. "ದುರ್ಗಾಂಬ ಬಸ್ಸಲ್ಲಿ ಒಂದು ಪಾರ್ಸೆಲ್ ಬರ್ತಿದೆ ಅದನ್ನ ತಗೊಳಕ್ ಬಂದಿದಿವಿ, ಬಂದ್ ಕೂಡ್ಲೆ ತಗೊಂಡ್ ಹೋಗ್ತೀವಿ" ಎಂದು ಹೇಳ್ದೆ. ನಮ್ ಮನೆದೇವ್ರಾಣೆ "ದುರ್ಗಾಂಬ ಅನ್ನೋ ಬಸ್ ಹೆಸರು ಹೆಂಗ್ ಬಾಯಲ್ಲಿ ಬಂತೋ ಗೊತ್ತಿಲ್ಲ." ಅವರೂ ಏನೂ ಮಾತನಾಡದೆ ಹೋದ್ರು.'
ಕೊನೆಗೆ ಒಬ್ಬ ವ್ಯಕ್ತಿ ಇದ್ದಾನೇ ಅಂದು ಮಂಸೋರೆ
'ಅವರು ಆ ಕಡೆ ಹೋದ್ಮೇಲೆ ಮಂಸೋರೆ ನಲವತ್ತೈದು ಡಿಗ್ರಿ ಕೋನದಲ್ಲಿ ತಲೆನ ತಿರುಗಿಸಿಕೊಂಡು ಏನೋ ಯೋಚನೆ ಮಾಡ್ತಿದ್ರು. "ಏನಾಯ್ತು?" ನನ್ನ ಪ್ರಶ್ನೆಗೆ ಅವರು "ಒಬ್ಬ ವ್ಯಕ್ತಿ ಇದಾರೆ, ಒಳ್ಳೆ ನಟ. ಆ ಪರ್ಸನ್ ಸೂಟಾಗ್ತದೆ ಬೆಂಜಮಿನ್ ಕ್ಯಾರೆಕ್ಟರ್ ಮಾಡಕ್ಕೆ" ಅಂತಂದ್ರು. "ಯಾರದು?" ಅಂತ ಕೇಳಿದ್ದಕ್ಕೆ "ರಾಘು ಶಿವಮೊಗ್ಗ ಅಂತ." ಮಂಸೋರೆ ಉತ್ತರ.'
ಚೂರಿಕಟ್ಟೆ ನಿರ್ದೇಶಕ ರಘು ಶಿವಮೊಗ್ಗ
'ರಘು ಶಿವಮೊಗ್ಗ ಅವರು "ಚೂರಿಕಟ್ಟೆ" ಸಿನೆಮಾದ ನಿರ್ದೇಶಕ ಅಂತ ಮಾತ್ರ ನನಗೆ ಗೊತ್ತಿದ್ದದ್ದು. ನಟ ಅನ್ನೋದ್ರ ಬಗ್ಗೆ ನಯಾಪೈಸ ನಾಲೆಡ್ಜು ನನಗಿರಲಿಲ್ಲ. ಹ್ಞಾಂ. ಚೂರಿಕಟ್ಟೆಗೂ ಮೊದಲು "ಚೌಕಬಾರ" ಅನ್ನೋ ಶಾರ್ಟ್ ಫಿಲ್ಮ್ ನಿರ್ದೇಶನ ಮಾಡಿದ್ದು, ನನಗೆ ನೆನಪಿದ್ದಂತೆ ETA Mallನಲ್ಲಿ ಅದರ screening ಇಟ್ಕೊಂಡಿದ್ರು ಅಲ್ಲಿ ನೋಡಿದ್ದು. ನಾನು ನೋಡಿದವುಗಳಲ್ಲಿ One of the best short films ಅದಾಗಿತ್ತು.'
ಡೈರೆಕ್ಟರ್ ಅಲ್ವಾ? ಆಕ್ಟಿಂಗ್ ಮಾಡ್ತಾರಾ? ಎನ್ನುವ ಅನುಮಾನ
"ಅವರು ಡೈರೆಕ್ಟರ್ ಅಲ್ವಾ. ಆಕ್ಟಿಂಗ್ ಮಾಡ್ತಾರಾ?" ಅಂದಾಗ.. "ಯೋವ್ ನೀನಾಸಂ ಪ್ರತಿಭೆ ಅದು. ಹಂಗಿಂಗಲ್ಲ" ಅಂತಂದು. "ಆದ್ರೆ, ನಾವು ಈ ಟೈಮಲ್ಲಿ ಶೂಟಿಂಗಿಗೆ ಇಷ್ಟು ಹತ್ರದಲ್ಲಿ ಡೇಟ್ ಕೇಳಕ್ಕಾಗತ್ತಾ?" ಅಂತಂದು. "ಸರಿ ಆಗಿದ್ದಾಗ್ಲಿ ಬೆಳಗ್ಗೆ ಕೇಳೇಬಿಡ್ತಿನಿ. ನಡೀ ಈಗ ಮನೆಗೋಗು, ಏನೋ ಒಂದ್ ಆಗತ್ತೆ, ಬೈ ಗುಡ್ ನೈಟ್.!" ಎಂದು ಹೋಗಿಬಿಟ್ರು.'
ಬೆಂಜಮಿನ್ ಪಾತ್ರ ಮಾಡಲು ಒಪ್ಪಿಕೊಂಡ ರಘು ಶಿವಮೊಗ್ಗ
'The very next day ಬೆಳಗ್ಗೆ ಮಂಸೋರೆ ಅವರು ಶರಣು ಹುಲ್ಲೂರು ಅವರ ಮೂಲಕ ರಾಘು ಶಿವಮೊಗ್ಗ ಅವರೊಟ್ಟಿಗೆ ಮಾತನಾಡಿ, ಸಿನೆಮಾದ ಕತೆ ಹೇಳಿ ಮುಗ್ಸಿ. 'ಡೇಟು ಪೇಮೆಂಟು ನೀನ್ ಮಾತಾಡ್ಕೊಳಪ' ಅಂತ ನನಗೆ ಬಿಟ್ರು. ರಾಘು ಶಿವಮೊಗ್ಗ ಅವರು ಪೇಮೆಂಟಿನ ವಿಷ್ಯಕ್ಕೆ ಹೆಚ್ಚು ಏನೂ ಮಾತಾಡಿಲ್ಲ. ಸಮಸ್ಯೆ ಡೇಟ್ಸು. ಅವರು ತಮ್ಮ ಎರಡನೇ ಸಿನೆಮಾದ 'ನಿರ್ದೇಶನಕ್ಕೆ ಅಣಿಯಾಗ್ತಾ ಇದ್ರು. ಅದರ ಕಥೆ-ಚಿತ್ರಕಥೆ, ನಿರ್ಮಾಪಕರ ಜೊತೆಗಿನ ಮಾತುಕತೆ ನಡೀತಾ ಇತ್ತು. ಈ ಟೈಮಲ್ಲಿ ಅಷ್ಟು ದಿನ without break non-stop dates ಕಷ್ಟ ಆಗ್ತಿದೆ ಅಂದ್ರು. "ಒಂದ್ ಅರ್ಧ ಗಂಟೆ ಟೈಮ್ ಕೊಡಿ" ಎಂದು ಹೇಳಿ sharp half an hour ಆದಮೇಲೆ ವಾಪಸ್ ಫೋನ್ ಮಾಡಿ. "ಶೂಟಿಂಗ್ ಗ್ಯಾಪಲ್ಲಿ ಅಥವ ರಾತ್ರಿ ಹೊತ್ತು ನಾನು script work ಮಾಡ್ಕೋತೀನಿ. ನಿಮ್ ಕ್ಯಾರೆಕ್ಟರ್ ದು ನನ್ ಕಾಸ್ಟ್ಯೂಮ್ ರೆಡಿ ಮಾಡ್ಸಿ." ಅಂತಂದು ಫೋನ್ ಇಟ್ರು.'
ಈಯಪ್ಪ ಬರೀ ನಟ ಅಲ್ಲ ಗುರು, ಒಳ್ಳೆ ಟೈಮಿಂಗ್ ಇರೋ ನಟ
'ಶೂಟಿಂಗ್ ಶುರುವಾದ ಮೊದಲ ದಿನ ನಾನು ಸೆಟ್ ಆಚೆ next day shootಗೆ ಬೇಕಾದ ಸಿದ್ಧತೆಗಳನ್ನ ಮಾಡ್ಕೊಂತಾ ಕೂತಿದ್ದೆ. ಒಳಗಿಂದ "ಧಬ್ ಧಬ್" ಎಂದು ಶಬ್ಧ ಬರ್ತಿತ್ತು. ಶೂಟಿಂಗ್ ನಡೆಯೋ ಟೈಮಲ್ಲಿ ಒಳಗೆ ಯಾರೋ ಟೇಬಲ್ ಮೇಲೆ ಕುಟ್ತಾ ಇದಾರಲ್ಲ. Disturb ಆಗಲ್ವಾ? ಅಂದ್ಕೊಂಡು ಒಳಗ್ ಹೋಗಿ ನೋಡಿದ್ರೆ, ಬೆಳಗಿನಿಂದ ಮಧ್ಯರಾತ್ರಿಯ ತನಕ ರಾಘು ಅವರಿಗಿದ್ದ ನಟನೆ "ಒಂದ್ ರಬ್ಬರ್ ಸ್ಟಾಂಪ್ ತಗೊಂಡು ಒಂದು ledger book ಮೇಲೆ ಧಬ್ ಧಬ್ ಅಂತ ಒತ್ತುತ್ತಾ ಇರೋದು." ನಂತರ ಮುಖ್ಯ ಕಥಾಭಾಗದ ಚಿತ್ರೀಕರಣ ಸಾಗಿದಂತೂ ರಾಘು ಅವರ ಬಗ್ಗೆ "ಅವರು ಡೈರೆಕ್ಟರ್ ಅಲ್ವಾ? ಆಕ್ಟಿಂಗ್ ಮಾಡ್ತಾರಾ?" ಅಂತ ನನ್ನ ಮನಸಲ್ಲಿ ಮೂಡಿದ್ದ ಪ್ರಶ್ನೆ ನೆನಪಾಯ್ತು. "ಈಯಪ್ಪ ಬರೀ ನಟ ಅಲ್ಲ ಗುರು, ಒಳ್ಳೆ ಟೈಮಿಂಗ್ ಇರೋ ನಟ.!" ಎಂಬ ಅರಿವಾಯ್ತು.'
ನಿರ್ದೇಶನ ಮಾಡಿ ಇಲ್ಲಾಂದ್ರೆ ಪರ್ಮನೆಂಟ್ ನಟರನ್ನಾಗಿ ಮಾಡಿಬಿಡ್ತೀವಿ
'ಆಕ್ಟ್-1978 ಸಿನೆಮಾಗೋಸ್ಕರ ಅವರು ತಮ್ಮ ನಿರ್ದೇಶನದ ಸಿನೆಮಾ ಕೆಲಸವನ್ನು ಮುಂದಕ್ಕೆ ಹಾಕಿದ್ರು. ಆ ನಂತರ ಕೊರೊನಾ ಬಂದು ಲಾಕ್-ಡೌನ್, ಅವರ ನಿರ್ದೇಶನದ ಕನಸಿಗೆ ಗ್ಯಾಪ್ ಆಗೋ ಪರಿಸ್ಥಿತಿ ಬಂತು. ಆದಷ್ಟು ಬೇಗ ನಿಮ್ಮ ನಿರ್ದೇಶನದ ದ್ವಿತೀಯ ಸಿನೆಮಾದ ಕೆಲಸಗಳು ಶುರುವಾಗಲಿ ಅಣ್ಣ. ಇಲ್ಲಾಂದ್ರೆ ಆಕ್ಟ್-1978 ನಂತರ ನಿಮ್ಮನ್ನ ಪರ್ಮನೆಂಟ್ ನಟರನ್ನಾಗಿ ಮಾಡಿಬಿಡ್ತೀವಿ.'