Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಲ್ಲಿ ನಟಿಸಲು ಅಧಿಕಾರಿಗಳಿಗೆ ನಿರ್ಬಂಧ ಸಲ್ಲ : ಅಂಬರೀಶ್
ದಾವಣಗೆರೆ : ಸರಕಾರಿ ಅಧಿಕಾರಿಗಳು ಚಲನಚಿತ್ರಗಳಲ್ಲಿ ನಟಿಸದಂತೆ ನಿರ್ಬಂಧ ಹೇರುವುದು ತರವಲ್ಲ ಎಂದು ಸಂಸತ್ ಸದಸ್ಯ ಹಾಗೂ ಚಿತ್ರನಟ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ. ಸರಕಾರಿ ಅಧಿಕಾರಿಗಳು ಚಲನಚಿತ್ರಗಳಲ್ಲಿ ನಟಿಸದಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರನಟ ಶಿವರಾಮು ಜಿಲ್ಲಾಧಿಕಾರಿಯಾಗಿರುವ ದಾವಣಗೆರೆಯಲ್ಲಿ ಏರ್ಪಡಿಸಲಾಗಿದ್ದ ತಮ್ಮ 49ನೇ ಜನ್ಮದಿನದ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಅಂಬರೀಶ್ ಸೃಜನಶೀಲವಾದ ಕಲೆಗೆ ಯಾವುದೇ ನಿರ್ಬಂಧ ಇರಬಾರದು ಎಂದು ಹೇಳಿದರು.
ಅಂಬರೀಶ್ ಜತೆಗಿದ್ದ ವಿಷ್ಣುವರ್ಧನ್ ಕೂಡ ಅಂಬರೀಶ್ ಅವರ ಅಭಿಪ್ರಾಯವನ್ನು ಅನುಮೋದಿಸಿದರು. ಸರಕಾರಿ ಅಧಿಕಾರಿಗಳು ಚಿತ್ರಗಳಲ್ಲಿ ನಟಿಸಬೇಕೇ ಬೇಡವೇ ಎಂಬುದನ್ನು ಚಿತ್ರ ನೋಡುವ ಮಂದಿ ನಿರ್ಧರಿಸುತ್ತಾರೆ. ಸರಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದರು.
ಈ ಮಧ್ಯೆ ಐಎಎಸ್ ಅಧಿಕಾರಿ ಕಂ ನಾಯಕ ನಟ ಕೆ. ಶಿವರಾಮು ಅವರಿಗೆ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ, ಅವರ ಅಭಿಮಾನಿಗಳು ಪೋಸ್ಟ್ಕಾರ್ಡ್ ಚಳವಳಿಯನ್ನೇ ಆರಂಭಿಸಿದ್ದಾರೆ. ಈ ಸಂಬಂಧ ಅವರು ಸಾವಿರಾರು ಪತ್ರಗಳನ್ನು ಸರಕಾರಕ್ಕೂ ಬರೆದಿದ್ದಾರೆ.
ನಿಮಗೆ
ಮತ್ತೊಂದು
ವಿಷಯ
ಗೊತ್ತೆ?
ನಟ
ಶಿವರಾಮು
ಕೂಡ
ಬಾಲ್ಯದಲ್ಲಿ
'ತಮಗೆ
ಚಲನಚಿತ್ರಗಳಲ್ಲಿ
ನಟಿಸಲು
ಅವಕಾಶ
ಕೊಡಿಸಿ
ಎಂದು
ಕೋರಿ
ಪದ್ಮಭೂಷಣ
ಡಾ.
ರಾಜ್ಕುಮಾರ್
ಹಾಗೂ
ಅಭಿನಯ
ಶಾರದೆ
ಜಯಂತಿ
ಅವರಿಗೆ
ಪತ್ರ
ಬರೆಯುತ್ತಿದ್ದರಂತೆ"
ಆದರೆ,
ರಾಜ್ಕುಮಾರ್
ಅವರಾಗಲೀ,
ಜಯಂತಿ
ಅವರಾಗಲೀ
ಶಿವರಾಮುಗೆ
ಚಲನಚಿತ್ರದಲ್ಲಿ
ನಟಿಸಲು
ಅವಕಾಶ
ಕೊಡಿಸಲಿಲ್ಲ
ಎಂಬುದು
ಬೇರೆ
ಮಾತು.