Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಯಂಬತ್ತೂರಿಗೆ ಹೊರಟು ನಿಂತ ರೆಬೆಲ್ ಸ್ಟಾರ್ ಪುತ್ರ
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಸದ್ಯ ಬೆಂಗಳೂರು ಬಿಟ್ಟು ಕೊಯಂಬತ್ತೂರಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಅರೆ ಅಭಿಷೇಕ್ ಅವರಿಗೆ ಬೆಂಗಳೂರು ಬೋರ್ ಆಯ್ತಾ ಅಂತ ಕೇಳಬೇಡಿ ಏಕೆಂದರೆ ಅಭಿಷೇಕ್ ಕೊಯಂಬತ್ತೂರಿಗೆ ಹೋಗುತ್ತಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ.
ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ಶೂಟಿಂಗ್ ಕೊಯಂಬತ್ತೂರಿಯಲ್ಲಿ ನಡೆಯಲಿದೆ. ಅದೇ ಕಾರಣದಿಂದ ಚಿತ್ರತಂಡ ಇದೇ ತಿಂಗಳು ಅಂದರೆ ಜೂನ್ 28ರಿಂದ ಕೊಯಂಬತ್ತೂರಿಗೆ ಚಿತ್ರೀಕರಣ ಶುರು ಮಾಡಲಿದೆ. 'ಅಮರ್' ಸಿನಿಮಾದಲ್ಲಿ ಅಭಿಷೇಕ್ ಜೊತೆ ತಾನ್ಯ ಹೋಪೆ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.
'ಅಮರ್' ಚಿತ್ರಕ್ಕಾಗಿ ತೆಲುಗಿನ ದೊಡ್ಡ ಸಿನಿಮಾವನ್ನು ಮುಂದಕ್ಕೆ ಹಾಕಿದ ನಾಗಶೇಖರ್
ನಾಗಶೇಖರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 'ಅಮರ್' ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಆಗಿದ್ದು ಪಕ್ಕಾ ಕಮರ್ಷಿಯಲ್ ಚಿತ್ರ.
ಮುಹೂರ್ತ ಹಾಗೂ ಫೋಟೋ ಶೂಟ್ ಮುಗಿಸಿರುವ ಚಿತ್ರತಂಡ ಈ ತಿಂಗಳ ಅಂತ್ಯದಿಂದ ಶೂಟಿಂಗ್ ನಲ್ಲಿ ಬ್ಯೂಸಿ ಆಗಲಿದೆ. ಈ ಹಿಂದೆ ನಾಗಶೇಖರ್ ಚಿತ್ರಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರೇ 'ಅಮರ್' ಸಿನಿಮಾದಲ್ಲಿಯೂ ವರ್ಕ್ ಮಾಡಲಿದ್ದಾರೆ.