Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುತ್ತಪ್ಪ ರೈ ಸಾವಿನ ಬಳಿಕ ಜಯರಾಜ್ ಪುತ್ರನ ಫೇಸ್ಬುಕ್ ಪೋಸ್ಟ್ ವೈರಲ್
ಮುತ್ತಪ್ಪ ರೈ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ನಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಹೋರಾಡಿ ಅಂತಿಮವಾಗಿ ಇಂದು ನಸುಕಿನಲ್ಲಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
Recommended Video
ಆದರೆ ಮುತ್ತಪ್ಪ ರೈ ದೊಡ್ಡ ಡಾನ್ ಆಗಿ ಬೆಳೆಯಲು ಕಾರಣವಾದ ಮೊದಲ ಕೊಲೆ; ಜಯರಾಜ್ ಮರ್ಡರ್ ಹಲವು ಜನರ ನೆನಪಿನಿಂದ ಮಾಸಿಲ್ಲ. ಇಂದಿಗೂ ಅಲ್ಲಲ್ಲಿ ಆ ಘಟನೆ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇರುತ್ತವೆ.
ಮುತ್ತಪ್ಪ ರೈ ಬಗ್ಗೆ ಹೀಗೆ ಹೇಳಿದ್ದರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಜಯರಾಜ್ ಪುತ್ರ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಮುತ್ತಪ್ಪ ರೈ ಹತವಾದ ಬಳಿಕ ಆತನ ಆಜನ್ಮ ವೈರಿಯಾಗಿದ್ದ ಜಯರಾಜ್ ಅವರ ಪುತ್ರ ಹಾಕಿರುವ ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಮೇ 14 ರ ಮಧ್ಯರಾತ್ರಿ ಈ ಪೋಸ್ಟ್ ಅನ್ನು ಜಯರಾಜ್ ಪುತ್ರ ಹಾಕಿದ್ದಾರೆ.
ಅಜಿತ್ ಜಯರಾಜ್ ಫೇಸ್ಬುಕ್ ಪೋಸ್ಟ್
ಜಯರಾಜ್ ಪುತ್ರ ಅಜಿತ್ ಜಯರಾಜ್ ಫೇಸ್ಬುಕ್ನಲ್ಲಿ ಜಯರಾಜ್ ಚಿತ್ರ ಹಂಚಿಕೊಂಡು, 'ಕೆಲವೊಮ್ಮೆ ರಾಜ ಮೂರ್ಖರಿಗೆ ನೆನಪಿಸಬೇಕಾಗುತ್ತದೆ, ತಾನೇಕೆ ರಾಜ ಎಂದು' ಎಂದು ಅಜಿತ್ ಜಯರಾಜ್ ಬರೆದಿದ್ದಾರೆ. ಜೊತೆಗೆ ಅಪ್ಪನ ಚಿತ್ರ ಮತ್ತು ಗರೀಬಿ ಹಟಾವೋ ಪತ್ರಿಕೆಯ ಮುಖಪುಟವನ್ನು ಹಂಚಿಕೊಂಡಿದ್ದಾರೆ.
ಮುತ್ತಪ್ಪ ರೈ ಸಾವಿನ ಬಗ್ಗೆ ಸುಳ್ಳು ಸುದ್ದಿ
ಮುತ್ತಪ್ಪ ರೈ ಮರಣಹೊಂದಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಈ ಪೋಸ್ಟ್ ಅನ್ನು ಅಜಿತ್ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಮುತ್ತಪ್ಪ ರೈ ಸಾವನ್ನು ಉದ್ದೇಶಿಸಿಯೇ ಅಜಿತ್ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದನ್ನು ಅಜಿತ್ ಅಲ್ಲಗಳೆದಿದ್ದಾರೆ.
ಜಯರಾಜ್ ಕುರಿತ ಚಿತ್ರದಲ್ಲಿ ಮುತ್ತಪ್ಪ ರೈ ಇರಲಿದ್ದಾರಾ? ಅಗ್ನಿ ಶ್ರೀಧರ್ ಉತ್ತರ
ಖಾಸಗಿ ಮಾಧ್ಯಮಕ್ಕೆ ಅಜಿತ್ ಸ್ಪಷ್ಟನೆ
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅಜಿತ್ ಜಯರಾಜ್, ಮುತ್ತಪ್ಪ ರೈ ಸಾವಿಗೂ ನನ್ನ ಫೇಸ್ಬುಕ್ ಪೋಸ್ಟ್ಗೂ ಸಂಬಂಧವಿಲ್ಲ. ನಾನು ಅಪ್ಪನ ವಿಡಿಯೋಗಳನ್ನು ನೋಡುತ್ತಿದ್ದೆ. ಅಲ್ಲಿ ಕೆಲವರು ಅಪ್ಪನ ಬಗ್ಗೆ ನೆಗೆಟಿವ್ ಕಮೆಂಟ್ ಹಾಕಿದ್ದರು ಹಾಗಾಗಿ ಈ ಪೋಸ್ಟ್ ಹಾಕಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ನಾನು ಸಿನಿಮಾದಲ್ಲಿ ಭವಿಷ್ಯ ಹುಡುಕುತ್ತಿದ್ದೇನೆ: ಅಜಿತ್ ಜಯರಾಜ್
ಮುತ್ತಪ್ಪ ರೈ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಜಿತ್, 'ಯಾರೇ ಆಗಲಿ ಅದು ಒಂದು ಜೀವ, ಆ ಜೀವ ಮರಳಿ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಬೇಸರದ ಸಂಗತಿಯೇ' ಎಂದು ಅಜಿತ್ ಹೇಳಿದ್ದಾರೆ. ಅಷ್ಟೆ ಅಲ್ಲ, ತಾವು ಸಿನಿಮಾದಲ್ಲಿ ಭವಿಷ್ಯ ಹುಡುಕುತ್ತಿದ್ದೇನೆ, ಇಲ್ಲಿಯೇ ಇರುತ್ತೇನೆ ಎಂದು ಸಹ ಹೇಳಿದ್ದಾರೆ.
'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ?
ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವ ಜಯರಾಜ್ ಪುತ್ರ
ಅಜಿತ್ ಜಯರಾಜ್ ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈಮ್ಸ್ ಚಿತ್ರದಲ್ಲಿ ಅವರು ನಾಯಕರಾಗಿ ಅಭಿಯಿಸಿದ್ದಾರೆ. ತ್ರಾಟಕ ಸಿನಿಮಾದಲ್ಲಿ ಎರಡು ಭಿನ್ನ ಶೇಡ್ನ ಪಾತ್ರದಲ್ಲಿ ಅವರು ಅಭಿಯಿಸಿದ್ದರು. ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ 'ರೈಮ್ಸ್'.