ಗಂಗಾನದಿಯಲ್ಲಿ ಅಂಬರೀಶ್ ಚಿತಾಭಸ್ಮ ವಿಸರ್ಜನೆ
Recommended Video

Ambareesh ; ಗಂಗಾನದಿಯಲ್ಲಿ ಅಂಬರೀಶ್ ಚಿತಾಬಸ್ಮ ವಿಸರ್ಜನೆ | FILMIBEAT KANNADA
ನಟ ಅಂಬರೀಶ್ ಅವರ ಚಿತಾಭಸ್ಮ ಪವಿತ್ರ ನದಿ ಗಂಗಾ ತಾಯಿಯ ಮಡಿಲು ಸೇರಿದೆ. ನಿನ್ನೆ ಅವರ ಚಿತಾಭಸ್ಮವನ್ನು ಅಲ್ಲಿ ವಿಸರ್ಜನೆ ಮಾಡಲಾಗಿದೆ.
ನವೆಂಬರ್ 24 ರಂದು ವಿಧಿವಶರಾಗಿದ್ದ ಅಂಬರೀಶ್ ಅವರ ಅಂತ್ಯಕ್ರಿಯೆ ನವೆಂಬರ್ 26 ರಂದು ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ನಡೆಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತ್ತು.
ನಾಲ್ಕು ದಿನಗಳ ಬಳಿಕ ಹಾಲು ತುಪ್ಪ ಕಾರ್ಯ ಸೇರಿದಂತೆ ವಿಧಿ ವಿಧಾನಗಳು ಕಳೆದ ಬುಧವಾರ ನಡೆದಿತ್ತು. ಅದೇ ದಿನ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಕಾವೇರಿ ನದಿಯಲ್ಲಿ ಅಂಬರೀಶ್ ಚಿತಾಭಸ್ಮ ವಿಸರ್ಜನೆ ಮಾಡಲಾಗಿತ್ತು.

ಅದರ ನಂತರ ನಿನ್ನೆ ಗಂಗಾ ನದಿಯಲ್ಲಿ ಸಹ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಹಿರಿಯ ನಟ ಹಾಗೂ ಅಂಬರೀಶ್ ಆಪ್ತ ದೊಡ್ಡಣ್ಣ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಾಶಿಗೆ ತೆರಳಿ ವಿಧಿ ವಿಧಾನಗಳನ್ನ ಮುಗಿಸಿದ್ದಾರೆ.
More from Filmibeat
English summary
Kannada actor Ambareesh post cremation rituals done in Ganga river.


Click it and Unblock the Notifications











