twitter
    For Quick Alerts
    ALLOW NOTIFICATIONS  
    For Daily Alerts

    ಗಂಗಾನದಿಯಲ್ಲಿ ಅಂಬರೀಶ್ ಚಿತಾಭಸ್ಮ ವಿಸರ್ಜನೆ

    |

    Recommended Video

    Ambareesh ; ಗಂಗಾನದಿಯಲ್ಲಿ ಅಂಬರೀಶ್ ಚಿತಾಬಸ್ಮ ವಿಸರ್ಜನೆ | FILMIBEAT KANNADA

    ನಟ ಅಂಬರೀಶ್ ಅವರ ಚಿತಾಭಸ್ಮ ಪವಿತ್ರ ನದಿ ಗಂಗಾ ತಾಯಿಯ ಮಡಿಲು ಸೇರಿದೆ. ನಿನ್ನೆ ಅವರ ಚಿತಾಭಸ್ಮವನ್ನು ಅಲ್ಲಿ ವಿಸರ್ಜನೆ ಮಾಡಲಾಗಿದೆ.

    ನವೆಂಬರ್ 24 ರಂದು ವಿಧಿವಶರಾಗಿದ್ದ ಅಂಬರೀಶ್ ಅವರ ಅಂತ್ಯಕ್ರಿಯೆ ನವೆಂಬರ್ 26 ರಂದು ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ನಡೆಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತ್ತು.

     ಅಂಬಿ ನಿಧನದ ಸುದ್ದಿ ಕೇಳಿ ಕಣ್ಣೀರಿಟ್ಟ 'ಬಿಗ್ ಬಾಸ್' ಸ್ಪರ್ಧಿಗಳು ಅಂಬಿ ನಿಧನದ ಸುದ್ದಿ ಕೇಳಿ ಕಣ್ಣೀರಿಟ್ಟ 'ಬಿಗ್ ಬಾಸ್' ಸ್ಪರ್ಧಿಗಳು

    ನಾಲ್ಕು ದಿನಗಳ ಬಳಿಕ ಹಾಲು ತುಪ್ಪ ಕಾರ್ಯ ಸೇರಿದಂತೆ ವಿಧಿ ವಿಧಾನಗಳು ಕಳೆದ ಬುಧವಾರ ನಡೆದಿತ್ತು. ಅದೇ ದಿನ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಕಾವೇರಿ ನದಿಯಲ್ಲಿ ಅಂಬರೀಶ್ ಚಿತಾಭಸ್ಮ ವಿಸರ್ಜನೆ ಮಾಡಲಾಗಿತ್ತು.

     actor ambareesh post cremation rituals done in ganga river

    ನಾಡಿನ ಸಮಸ್ತ ಜನತೆಗೆ ಪತ್ರದ ಮೂಲಕ ಧನ್ಯವಾದ ತಿಳಿಸಿದ ಸುಮಲತಾ-ಅಭಿ ನಾಡಿನ ಸಮಸ್ತ ಜನತೆಗೆ ಪತ್ರದ ಮೂಲಕ ಧನ್ಯವಾದ ತಿಳಿಸಿದ ಸುಮಲತಾ-ಅಭಿ

    ಅದರ ನಂತರ ನಿನ್ನೆ ಗಂಗಾ ನದಿಯಲ್ಲಿ ಸಹ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಹಿರಿಯ ನಟ ಹಾಗೂ ಅಂಬರೀಶ್ ಆಪ್ತ ದೊಡ್ಡಣ್ಣ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಾಶಿಗೆ ತೆರಳಿ ವಿಧಿ ವಿಧಾನಗಳನ್ನ ಮುಗಿಸಿದ್ದಾರೆ.

    English summary
    Kannada actor Ambareesh post cremation rituals done in Ganga river.
    Monday, December 3, 2018, 10:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X