Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಹೊಸ ಚಿತ್ರದ ಸತ್ಯ ಬಿಚ್ಚಿಟ್ಟ ತರುಣ್ ಸುಧೀರ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಸಿನಿಮಾದಲ್ಲಿ ಅಭಿನಯಿಸಿ ಅದು ತೆರೆ ಮೇಲೆ ಬರುವವರೆಗೂ ಮುಂದೆ ಯಾವ ಚಿತ್ರದಲ್ಲಿ ಅಭಿಯಿಸುತ್ತೇನೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಆದರೆ ದರ್ಶನ್ ಅಭಿನಯಿಸುವ ಮುಂದಿನ ಚಿತ್ರದ ಬಗ್ಗೆ ಒಂದುಷ್ಟು ಮಾಹಿತಿಯನ್ನ ನಿರ್ದೇಶಕ ಹಾಗೂ ನಟ ತರುಣ್ ಸುಧೀರ್ ಬಿಟ್ಟುಕೊಟ್ಟಿದ್ದಾರೆ.
ಶಿವರಾಜ್ ಕುಮಾರ್ ನಡೆಸಿಕೊಡುವ ಯಾರಿ ನಂ 1 ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ತರುಣ್, ಚಿಕ್ಕಣ್ಣ ಹಾಗೂ ಶರಣ್ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ ತರುಣ್. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಾಲೆಂಜಿಂಗ್ ಸ್ಟಾರ್ ಅಭಿನಯದ 51 ನೇ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡಬೇಕಿತ್ತು.
ಪರೋಕ್ಷವಾಗಿ ಅಶ್ವಥ್ ಕುಟುಂಬಕ್ಕೆ ನೆರವಾದರಾ ಡಿ ಬಾಸ್ ?
ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಚೌಕಾ ಸಿನಿಮಾ ಐವತ್ತು ದಿನ ಪೂರೈಸಿದಾಗ ಈ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಸದ್ಯ ದರ್ಶನ್ ಗಾಗಿ ಕಥೆ ಮಾಡಿಕೊಳ್ಳುತ್ತಿರುವ ತರುಣ್ ಸುಧೀರ್ ಸಿನಿಮಾ ಹೇಗಿರಲಿದೆ ಎನ್ನುವುದನ್ನ ತಿಳಿಸಿದ್ದಾರೆ. ದರ್ಶನ್ ಅಭಿಮಾನಿ ಡಿ ಬಾಸ್ ಅವರನ್ನ ತೆರೆ ಮೇಲೆ ಹೇಗೆ ನೋಡಬೇಕು ಎಂದುಕೊಳ್ಳುತ್ತಾನೋ ಅದೇ ರೀತಿಯಲ್ಲಿ ಚಿತ್ರ ಇರಲಿದ್ಯಂತೆ.
ಗೆಳೆಯ ದರ್ಶನ್ ಕಾರಿನ ಮೇಲೆ ಕಣ್ಣು ಹಾಕಿದ ತರುಣ್ ಸುಧೀರ್
ಪಕ್ಕಾ ಕಮರ್ಷಿಯಲ್ ಆಗಿ ಚಿತ್ರದ ತೆರೆ ಮೇಲೆ ಬರಲಿದೆ ತಯಾರಿ ಆಗುತ್ತಿದೆ ಎನ್ನುವ ಮಾತನ್ನ ತಿಳಿಸಿದ್ದಾರೆ ನಿರ್ದೇಶಕ ತರುಣ್. ಒಟ್ಟಾರೆ ದರ್ಶನ್ ಅಕೌಂಟ್ ನಿಂದ ಮತ್ತೊಂದು ಕಮರ್ಷಿಯಲ್ ಸಿನಿಮಾ ತೆರೆ ಮೇಲೆ ಬರುವುದು ಕನ್ಫರ್ಮ್ ಆಗಿದೆ.