Don't Miss!
- Automobiles Mahindra Thar ಪ್ರೀಯರಿಗೆ ಶಾಕ್: ಬುಕ್ ಮಾಡಿದರೆ ಇಷ್ಟು ಬೇಗ ಕೈ ಸೇರುತ್ತಾ ಈ ಆಫ್ರೋಡ್ ಕಿಂಗ್!
- News ನೇಹಾ ಹತ್ಯೆ ಖಂಡಿಸಿ ಹುಬ್ಬಳ್ಳಿ ಬಂದ್: ಮುಸ್ಲಿಂ ವ್ಯಾಪಾರಸ್ಥರಿಂದ ವ್ಯಾಪಕ ಬೆಂಬಲ
- Finance ಬೆಂಗಳೂರು ಬಳಿ ಇರುವ ಬೇಸಿಗೆ ಪ್ರವಾಸಿ ತಾಣಗಳು ಇವು
- Lifestyle ಮಗನಲ್ಲಿ ಖಾಸಗಿ' ಆ ವಿಷಯ ' ಕೇಳಿದ ಮಲೈಕಾ ಅರೋರಾ: ತಾಯಿಯಾದವರೂ ಕೇಳುವ ಪ್ರಶ್ನೆಯೇ ಎಂದು ಟೀಕೆಗಳ ಸುರಿಮಳೆ
- Sports KKR vs RCB: ಕರ್ಣ್ ಶರ್ಮಗೆ ಸ್ಟ್ರೈಕ್ ಬಿಟ್ಟುಕೊಡದ ದಿನೇಶ್ ಕಾರ್ತಿಕ್; ಆರ್ಸಿಬಿ ಫ್ಯಾನ್ಸ್ ಸಿಡಿಮಿಡಿ!
- Technology OnePlus: ಭಾರತದಲ್ಲಿ ಒನ್ಪ್ಲಸ್ ನಾರ್ಡ್ CE 3 ಬೆಲೆ ಇಳಿಕೆ; ಖರೀದಿಸಲು ಯೋಗ್ಯವೇ...?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರಗೀತೆಗೆ ಎದ್ದು ನಿಲ್ಲದವರಿಗೆ ಚಿತ್ರಮಂದಿರದಲ್ಲೇ ಕ್ಲಾಸ್ ತೆಗೆದುಕೊಂಡ ಕನ್ನಡ ನಟ, ನಟಿ
ಸಿನಿಮಾ ನೋಡುವಾಗ ರಾಷ್ಟ್ರಗೀತೆ ಬರುತ್ತಿದ್ದ ಹಾಗೆ, ಎಲ್ಲರೂ ಎದ್ದು ನಿಂತು ಅದಕ್ಕೆ ಗೌರವ ನೀಡುತ್ತಾರೆ. ಆದರೆ, ಕೆಲವೊಮ್ಮೆ ಕೆಲವರು ರಾಷ್ಟ್ರಗೀತೆ ಬರುತ್ತಿದ್ದರು, ಸೀಟ್ ನಿಂದ ಮೇಲೆ ಏಳುವುದಿಲ್ಲ.
ಈ ರೀತಿ ರಾಷ್ಟ್ರಗೀತೆಗೆ ಅಗೌರವವಾಗಿ ನಡೆದುಕೊಂಡವರ ಮೇಲೆ ಕನ್ನಡದ ನಟ ಹಾಗೂ ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿತ್ರಮಂದಿರದಲ್ಲಿಯೇ ಅಂತಹ ಪ್ರೇಕ್ಷಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಸಾಧುಕೋಕಿಲ ವಿರುದ್ಧ ಅತ್ಯಾಚಾರ ಆರೋಪ: ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್
ನಟ ಅರು ಗೌಡ, ನಟಿ ಐಶ್ವರ್ಯ ಹಾಗೂ ಸ್ನೇಹಿತರು ಬೆಂಗಳೂರಿನ ಪಿವಿಆರ್ ಒಂದರಲ್ಲಿ ಸಿನಿಮಾ ನೋಡಲು ಹೋಗಿದ್ದರು. ಎಂದಿನಂತೆ ರಾಷ್ಟ್ರಗೀತೆ ಬಂತು. ಎಲ್ಲ ಪ್ರೇಕ್ಷಕರು ಎದ್ದು ನಿಂತು ಗೌರವ ನೀಡಿದರೆ, ಐದಾರು ಜನರ ಗ್ಯಾಂಗ್ ಸುಮ್ಮನೆ ಕುಳಿತಿದ್ದರು. ಇದರಿಂದ ಕೋಪಗೊಂಡ ಅರು ಮತ್ತು ಐಶ್ವರ್ಯ ಹೋಗಿ ಅವರಿಗೆ ಪ್ರಶ್ನೆ ಮಾಡಿದರು.
ಅರು ಮತ್ತು ಐಶ್ವರ್ಯ ಪ್ರಶ್ನೆಗೆ ಮೊದಲು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ, ಅವರ ಜೊತೆಗೆ ಮಾತಿನ ಚಕಮಕಿ ಆಗಿದೆ. ನಂತರ ಸಹ ಪ್ರೇಕ್ಷಕರು ಅರು ಹಾಗೂ ಐಶ್ವರ್ಯಗೆ ಸಾಥ್ ನೀಡಿದ್ದಾರೆ. ಕೊನೆಗೆ ಅಲ್ಲಿದ್ದ ಜನರು ಅವರನ್ನು ಚಿತ್ರಮಂದಿರದಿಂದ ಹೊರಗೆ ಕಳುಹಿಸಿದ್ದಾರೆ. ಜೈ ಭಾರತ್ ಮಾತಾಕಿ ಎಂದು ಜೈಕಾರ ಹಾಕಿದ್ದಾರೆ.
ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆ
ಅಂದಹಾಗೆ, ನಟ ಅರು ಗೌಡ 'ಯುವರತ್ನ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಾಟಿ ಕೋಳಿ 'ಮುದ್ದು ಮನಸೇ' ಸಿನಿಮಾಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದರು. ನಟಿ ಐಶ್ವರ್ಯ 'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್' ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು. ಆ ಬಳಿಕ 'ಜಂಗಲ್ ಜಾಕಿ', 'ಪುಣ್ಯತ್ ಗಿತ್ತಿಯರು' ಸಿನಿಮಾದಲ್ಲಿ ನಟಿಸಿದರು.