Don't Miss!
- News "ಅಲ್ಲಾ ಹೋ ಅಕ್ಬರ್" ಕೂಗಬೇಕು ಎಂದು ಮುಸ್ಲಿಂ ಗೂಂಡಾಗಳಿಂದ ಧಮ್ಕಿ ; ನಾವು ಪಾಕಿಸ್ತಾನದಲ್ಲಿ ಇದ್ದೇವಾ - ಆರ್.ಅಶೋಕ್
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ, ಛಾಯಾಗ್ರಾಹಕ ಉದಯ್ ಹುತ್ತಿನಗದ್ದೆ ನಿಧನ
ನಟ, ಜನಪ್ರಿಯ ಛಾಯಾಗ್ರಾಹಕ ಆಗಿದ್ದ ಉದಯ್ ಹುತ್ತಿನಗದ್ದೆ ನಿಧನ ಹೊಂದಿದ್ದಾರೆ. ಉದಯ್ ಕಲರ್ ಲ್ಯಾಬ್ ಮಾಲೀಕರಾಗಿರುವ ಉದಯ್ ಹುತ್ತಿನಗದ್ದೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹುತ್ತಿನಗದ್ದೆಯವರಾಗಿದ್ದರು.
ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ್ದ ಉದಯ್ 1989 ರ ವೇಳೆಗೆ 'ಆರಂಭ' ಹೆಸರಿನ ಸಿನಿಮಾದಲ್ಲಿ ನಟಿಸಿದರು. ಸ್ಪುರಧ್ರೂಪಿ ಆಗಿದ್ದ ಉದಯ್ ಹೊತ್ತಿನಗದ್ದೆ ತಮ್ಮ ಮೊದಲ ಸಿನಿಮಾದಿಂದಲೇ ದೊಡ್ಡ ಮಟ್ಟದಲ್ಲಿ ಮಿಂಚು ಹರಿಸಿದ್ದರು. ಆಗಿನ ಕಾಲಕ್ಕೆ ಭಾರಿ ಪ್ರಚಾರ ನೀಡಲಾಗಿದ್ದ ಸಿನಿಮಾಗಳಲ್ಲಿ ಒಂದಾಗಿತ್ತು 'ಆರಂಭ'. ಬಳಿಕ ಉದಯ್ ಹೊತ್ತಿನಗದ್ದೆ ನಟಿ ಲಲಿತಾಂಬ ಅವರನ್ನು ವಿವಾಹವೂ ಆದರು.
ಹಿರಿಯ ನಟ ಉದಯ್ ಕುಮಾರ್ ಪತ್ನಿ ಕಮಲಮ್ಮ ನಿಧನ
ಸಿನಿಮಾ ವೃತ್ತಿ ಅಷ್ಟಾಗಿ ಕೈ ಹಿಡಿಯದಿದ್ದರೂ ಅವರ ಛಾಯಾಗ್ರಾಹಕ ವೃತ್ತಿ ಅದ್ಭುತವಾಗಿ ಕೈ ಹಿಡಿಯಿತು. ಉದಯ್ ಕಲರ್ ಲ್ಯಾಬ್ ದೊಡ್ಡವನ್ನು ಉದ್ಯಮವಾಗಿ ಉದಯ್ ಬೆಳೆಸಿದರು. ರಾಜ್ಯದ ಹಲವು ನಗರಗಳಲ್ಲಿ ಉದಯ್ ಕಮಲ್ ಲ್ಯಾಬ್ ಪ್ರಾರಂಭಿಸಿದರು.
ರಾಜಾಜಿನಗರದ ನವರಂಗ್ ಟಾಕೀಸಿನ ಬಳಿ ಸಣ್ಣದಾಗಿ ತೆರೆದಿದ್ದ ಉದಯ್ ಸ್ಟುಡಿಯೋವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಿದ್ದರು ಉದಯ್ ಹೊತ್ತಿನಗದ್ದೆ.
ಮಲೆನಾಡ ಬಗ್ಗೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದ ಉದಯ್, ಮಲೆನಾಡಿನ ಹಲವು ಯುವಕರಿಗೆ ಉದ್ಯೋಗ ಕೊಟ್ಟಿದ್ದರು, ಮಾರ್ಗದರ್ಶನ ಮಾಡಿದ್ದರು. ಇವರ ಸೇವೆ ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವ, ಸನ್ಮಾನಗಳನ್ನು ಸಹ ಮಾಡಿವೆ.