Don't Miss!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಮಶಾನ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸಿಎಂಗೆ ಪತ್ರ ಬರೆದ ನಟ ಚೇತನ್
ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ಸ್ಮಶಾನ ಕಾರ್ಮಿಕರು ಸಹ ಕೋವಿಡ್ ವಾರಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ-ಹಗಲು ಚಿತಗಾರ ಹಾಗೂ ಸ್ಮಶಾನಗಳಲ್ಲಿ ಕೆಲಸ ಮಾಡುವ ಮೂಲಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಕ್ಕೆ ಜೊತೆಯಾಗಿದ್ದಾರೆ.
Recommended Video
ಇಂತಹ ಸ್ಮಶಾನ ಕಾರ್ಮಿಕರ ತಕ್ಷಣದ ಮತ್ತು ದೀರ್ಘಕಾಲದ ಬೇಡಿಕೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ನಟ-ಹೋರಾಟಗಾರ ಚೇತನ್ ಮುಖ್ಯಮಂತ್ರಿ ಹಾಗೂ ಸಮಾಜಕಲ್ಯಾಣ ಸಚಿವರಿಗೆ ಪತ್ರದ ಮುಖಾಂತರ ಮನವಿ ಮಾಡಿದ್ದಾರೆ.
ಪತ್ರದಲ್ಲಿ
ಏನಿದೆ?
ಕರ್ನಾಟಕದಾದ್ಯಂತ
ಸ್ಮಶಾನ
ಕಾರ್ಮಿಕರು
ಈ
ಘೋರ
ಬಿಕ್ಕಟ್ಟಿನ
ಸಂದರ್ಭದಲ್ಲಿ
ನಮ್ಮ
ರಾಜ್ಯದ
ಜನರಿಗೆ
ಮುಂಚೂಣಿಯ
ಕೋವಿಡ್
ಯೋಧರಾಗಿ
ದಣಿವರಿಯದೆ
ಮತ್ತು
ನಿಸ್ವಾರ್ಥವಾಗಿ
ಕೆಲಸ
ಮಾಡುತ್ತಿದ್ದಾರೆ.
ಈ
ಸ್ಮಶಾನ
ಕಾರ್ಮಿಕರು
ತಲೆಮಾರುಗಳಿಂದ
ನಮ್ಮ
ಸಮಾಜದ
ಸಾಮಾಜಿಕ
ಮತ್ತು
ಆರ್ಥಿಕವಾಗಿ
ಅಳಿವಿನಂಚಿನಲ್ಲಿರುವ
ಸದಸ್ಯರು.
ಈ
ಸಾಂಕ್ರಾಮಿಕ
ರೋಗ
ಹರಡುತ್ತಿರುವ
ಸಮಯದಲ್ಲಿ
ಅಸಾಧಾರಣ
ವೈದ್ಯಕೀಯ
ಅಪಾಯಗಳನ್ನು
ಎದುರಿಸುತ್ತಿದ್ದಾರೆ.
ದುರಾದೃಷ್ಟವಶಾತ್,
ಅವರ
ತಕ್ಷಣದ
ಮತ್ತು
ದೀರ್ಘಕಾಲದ
ಅಗತ್ಯಗಳಿಗೆ
ಸಂಬಂಧಿಸಿದ
ಸಮಸ್ಯೆಗಳನ್ನು
ಸರ್ಕಾರಗಳು
ಸತತವಾಗಿ
ನಿರ್ಲಕ್ಷ್ಯಿಸಿದೆ.
ನಮ್ಮ
ಸ್ಮಶಾನ
ಕಾರ್ಮಿಕರಿಗೆ
ಹೆಚ್ಚು
ಅಗತ್ಯವಿರುವ
ಈ
ಬೇಡಿಕೆಗಳನ್ನು
ನೀವು
ವಾಸ್ತವಿಕಗೊಳಿಸಬೇಕೆಂದು
ನಾವು
ಕೇಳುತ್ತೇವೆ...
ಎಲ್ಲಾ
ಸ್ಮಶಾನ/ಶವಗಾರ
ಕಾರ್ಮಿಕರಿಗೆ
ತಕ್ಷಣದ
ಅಗತ್ಯೆಗಳು
-
ವೈದ್ಯಕೀಯ
ವಿಮೆ
-
ಕೋವಿಡ್
ಸಂತ್ರಸ್ಥರಿಗೆ
ಆದ್ಯತೆಯ
ಆಸ್ಪತ್ರೆಯ
ಹಾಸಿಗೆ
ಹಂಚಿಕೆ
-
ಆದ್ಯತೆಯ
ವ್ಯಾಕ್ಸಿನೇಷನ್
-
ಈಗಾಗಲೇ
ಒದಗಿಸಿರುವ
ಪಿಪಿಇ
ಕಿಟ್ಗಳ
ಜೊತೆಗೆ
ಕೈಗವಸುಗಳು
ಮತ್ತು
ಮುಖವಾಡಗಳು
-
ತಮ್ಮ
ಕೆಲಸದ
ಅವಧಿಗಿಂತ
ಹೆಚ್ಚು
ಸಮಯ
ಕೆಲಸ
ಮಾಡಿದರೆ
ಅದಕ್ಕೆ
ಅವರ
ಪಾವತಿಯನ್ನು
ಹೆಚ್ಚಿಸಬೇಕು
-
ಕೆಲಸದ
ಹೊರೆ
ಹೆಚ್ಚಿಗೆಯಾದ
ಕಾಅರಣ
ಅವರನ್ನು
ಸಹಾಯ
ಮಾಡಲು
ಉದ್ಯೋಗಿಗಳ
ಸಂಖ್ಯೆಯನ್ನು
ಹೆಚ್ಚಿಸಬೇಕು.
ಎಲ್ಲಾ
ಸ್ಮಶಾನ
ಕಾರ್ಮಿಕರಿಗೆ
ಶಾಶ್ವತ
ಪರಿಹಾರಗಳು
-
4ನೇ
ದರ್ಜೆಯ,
ಡಿ-ಗ್ರೂಪ್
ಸರ್ಕಾರಿ
ನೌಕರರಾಗಿ
ಶಾಶ್ವತ
ಉದ್ಯೋಗ
ಕಲ್ಪಿಸಬೇಕು.
-
ಇಎಸ್ಐ
ಮತ್ತು
ಪಿಎಸ್ಗೆ
ಅವಕಾಶ
ಕಲ್ಪಿಸಿಕೊಡಬೇಕು.
-
ಸ್ಮಶಾನ/ಶವಾಗರದ
ಆವರಣದ
ಹೊರಗೆ
ವಸತಿ
ಕಲ್ಪಿಸಬೇಕು.
-
ಕೆಲಸದ
ಸಮಯವನ್ನು
8
ಗಂಟೆಗಳ
ಶಿಫ್ಟ್ಗಳಿಗೆ
ಸೀಮಿತಗೊಳಿಸಬೇಕು.
-
ಸ್ಮಶಾನ
ಕಾರ್ಮಿಕರ
ಮಕ್ಕಳಿಗೆ
ಗುಣಮಟ್ಟದ
ಶಾಲೆಗಳಲ್ಲಿ
ಉಚಿತ
ಶಿಕ್ಷಣ
ನೀಡಬೇಕು.
-
ಎಲ್ಲಾ
ಧಾರ್ಮಿಕ
ಸಮುದಾಯಗಳ
(ಹಿಂದೂ,
ಮುಸ್ಲಿಂ
ಕ್ರಿಶ್ಚಿಯನ್,
ಇತರೆ)
ಸ್ಮಶಾನ
ಕಾರ್ಮಿಕರಿಗೆ
ಸರ್ಕಾರದ
ಸೌಲಭ್ಯಗಳು
ದೊರೆಯಬೇಕು.
-
ಸ್ಮಶಾನ
ಕಾರ್ಮಿಕರಿಗೆ
ನಿರ್ದಿಷ್ಟವಾದ
ಸಾಮಾಜಿಕ
ಮತ್ತು
ಶೈಕ್ಷಣಿಕೆ
ಉನ್ನತಿಗಾಗಿ
ಹೊಸ
ನೀತಿಗಳನ್ನು
ಅನುಷ್ಠಾನಗೊಳಿಸಬೇಕು.
ನಮ್ಮ ಸ್ಮಶಾನ ಕಾರ್ಮಿಕರ ಮತ್ತು ಸಾರ್ವಿಜನಿಕರ ಹಿತದೃಷ್ಟಿಯಿಂದ ನಮ್ಮ ಕರ್ನಾಟಕ ಸರ್ಕಾರ ಈ ನೀತಿಗಳನ್ನು ತಕ್ಷಣವೇ ಜಾರಿಗೆ ತರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಚೇತನ್ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ವಿನಂತಿ ಮಾಡಿದ್ದಾರೆ.