twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ಸ್ ವಿವಾದದ ನಡುವೆ 'ಕನ್ನಡ ಸ್ಟಾರ್ಸ್'ಗಳ ಮೇಲೆ ಮತ್ತೊಂದು ಆರೋಪ ಮಾಡಿದ ಚೇತನ್

    |

    ಸ್ಯಾಂಡಲ್‌ವುಡ್ನ ನಟ-ನಟಿಯರು-ತಂತ್ರಜ್ಞರು ಡ್ರಗ್ಸ್ ಸೇವಿಸುತ್ತಾರೆ, ಡೀಲರ್‌ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಈಗಾಗಲೇ ಸಿಸಿಬಿ ಪೊಲೀಸರಿಗೆ ತಮ್ಮ ಬಳಿಯಿದ್ದ ಎಲ್ಲ ವಿವರ, ಸಾಕ್ಷ್ಯಗಳನ್ನು ನೀಡಿದ್ದಾರೆ.

    Recommended Video

    ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

    ಇದು ಕೆಲವು ಚಿತ್ರತಾರೆ ಹಾಗೂ ಕಿರುತೆರೆ ಕಲಾವಿದರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ 'ಆ ದಿನಗಳು' ಖ್ಯಾತಿಯ ನಟ ಚೇತನ್ ಕನ್ನಡದ ಕೆಲವು ಕಲಾವಿದರ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ. ಡ್ರಗ್ಸ್ ವಿಚಾರದ ಬೆನ್ನಲ್ಲೆ ಈ ಆರೋಪವೂ ಗಂಭೀರ ಚರ್ಚೆಗೆ ಕಾರಣವಾಗಿದೆ. ಏನದು? ಮುಂದೆ ಓದಿ....

     'ಬೇರೆಯವರ ಬಗ್ಗೆ ಮಾತಾಡಲ್ಲ, ಚಿರು ಹೆಸರು ತಂದಿದ್ದು ಬೇಸರ ಆಯ್ತು': ಡ್ರಗ್ಸ್ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ 'ಬೇರೆಯವರ ಬಗ್ಗೆ ಮಾತಾಡಲ್ಲ, ಚಿರು ಹೆಸರು ತಂದಿದ್ದು ಬೇಸರ ಆಯ್ತು': ಡ್ರಗ್ಸ್ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ

    ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ?

    ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ?

    ಪ್ರಸ್ತುತವಾಗಿ ಎಲ್ಲದ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಸಿನಿಮಾ ಸ್ಟಾರ್ಸ್ ಮತ್ತು ಪ್ರಮುಖ ನಟ-ನಟಿಯರ ಹೆಸರು ಬಹಿರಂಗಪಡಿಸುವುದರ ಮೇಲಿದೆ. ಆದರೆ, ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳನ್ನು ಮಾತ್ರ ಯಾರೂ ಬೆರಳು ಮಾಡಿ ತೋರಿಸುತ್ತಿಲ್ಲ ಏಕೆ ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.

    ಕೇವಲ ಹಣಕ್ಕಾಗಿ ಜಾಹೀರಾತು

    ಕೇವಲ ಹಣಕ್ಕಾಗಿ ಜಾಹೀರಾತು

    ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಲಾ, ಜೂಜು (ರಮ್ಮಿ) ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್‌ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಎಂದು ನಟ ಚೇತನ್ ಟ್ವಿಟ್ಟರ್ ಮೂಲಕ ಕೇಳಿದ್ದಾರೆ.

    ಡ್ರಗ್ಸ್ ವಿವಾದದಲ್ಲಿ ಚಿರು ಸರ್ಜಾ ಹೆಸರು ತಂದಿದ್ದಕ್ಕೆ ಚೇತನ್ ಖಂಡನೆಡ್ರಗ್ಸ್ ವಿವಾದದಲ್ಲಿ ಚಿರು ಸರ್ಜಾ ಹೆಸರು ತಂದಿದ್ದಕ್ಕೆ ಚೇತನ್ ಖಂಡನೆ

    ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆ?

    ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆ?

    ಗುಟ್ಕಾ, ಸೋಡಾ, ಮದ್ಯ ಮಾರಾಟಕ್ಕೆ ಸರ್ಕಾರನೇ ಅನುಮತಿ ಕೊಟ್ಟಿದೆ. ಜಾಹೀರಾತುಗಳು ಕಾನೂನುಬದ್ದವಾಗಿರುತ್ತವೇ. ನೀವು ಸರ್ಕಾರನ ಪ್ರಶ್ನೆ ಮಾಡಬೇಕು ಅಥವಾ ಗುಟ್ಕಾ, ಸೋಡಾ, ಮದ್ಯ ತಯಾರಿಕೆ ಘಟಕಗಳನ್ನು ಮುಚ್ಚಿಕೊಂಡು ಹೋಗಲು ಹೇಳಿ ಎಂದು ನೆಟ್ಟಿಗರು ಚೇತನ್ ಅವರಿಗೆ ತಿಳಿಸಿದ್ದಾರೆ.

    ಇಂತಹ ಜಾಹೀರಾತಿನಿಂದ ಸ್ಟಾರ್ಸ್ ಹಿಂದೆ ಸರಿಯಬೇಕು

    ಇಂತಹ ಜಾಹೀರಾತಿನಿಂದ ಸ್ಟಾರ್ಸ್ ಹಿಂದೆ ಸರಿಯಬೇಕು

    ಸಮಾಜಕ್ಕೆ ಸಿನಿಮಾದವರು ಮಾದರಿಯಾಗಬೇಕೆ ವಿನಹ ಸಮಾಜವನ್ನು ಹಾಳುಮಾಡುವ ಸಮಾಜಕಂಟಕರಾಗಬಾರದು ಎಂದು ಮತ್ತಷ್ಟು ಜನರು ಸಿನಿಮಾ ತಾರೆಯರು ಇಂತಹ ಜಾಹೀರಾತಿನಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.

    English summary
    Actor chethan questions media over targeting sandalwood people involved in drug mafia, why can't you target stars who promote gutka, liquor and gambling.
    Tuesday, September 1, 2020, 23:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X