Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕ್ಕಣ್ಣನನ್ನು ಹೀರೋ ಮಾಡ್ತಿದ್ದಾರೆ 'ಮಾಸ್ಟರ್ ಪೀಸ್' ಡೈರೆಕ್ಟರ್
Recommended Video
ಹಾಸ್ಯ ನಟ ಚಿಕ್ಕಣ್ಣ ಕಳೆದ ವಾರ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹೀರೋ ಆಗುವ ವಿಷಯ ಕೂಡ ಹೊರಬಂತು.
ಚಿಕ್ಕಣ್ಣಗೆ ಸದ್ಯ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀರೋಗಳ ಮಟ್ಟಿಗೆ ಬ್ಯುಸಿ ಇರುವ ಕಲಾವಿದ ಅವರಾಗಿದ್ದಾರೆ. ನಾಯಕ ನಟರ ಜೊತೆಗೆ ಸಿನಿಮಾ ಮಾಡುತ್ತಿದ್ದ ಅವರು ಈಗ ಒಂದು ಸಿನಿಮಾಗೆ ತಾವೇ ಹೀರೋ ಆಗುತ್ತಿದ್ದಾರೆ.
'ವೀಕೆಂಡ್ ವಿತ್ ರಮೇಶ್'ನಲ್ಲಿ ಹಾಸ್ಯ ನಟ ಚಿಕ್ಕಣ್ಣ
'ಮಾಸ್ಟರ್ ಪೀಸ್' ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ಹೆಬ್ಬುಲಿ' ಹಾಗೂ 'ರಾಬರ್ಟ್' ಚಿತ್ರಗಳ ನಿರ್ಮಾಪಕ ಉಮಾಪತಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.
ಮಂಜು ಮಾಂಡವ್ಯ ಜೊತೆಗೆ 'ರಾಜಹುಲಿ' ಸಿನಿಮಾದಲ್ಲಿ ಚಿಕ್ಕಣ್ಣ ನಟಿಸಿದ್ದರು. ಬಳಿಕ ಮಂಜು ನಿರ್ದೇಶನದ 'ಮಾಸ್ಟರ್ ಪೀಸ್' ನಲ್ಲಿ ಚಿಕ್ಕಣ್ಣಗೆ ಒಳ್ಳೆಯ ಪಾತ್ರ ನೀಡಲಾಗಿತ್ತು. ಸದ್ಯ, ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ಕಾಂಬಿನೇಶನ್ ನಲ್ಲಿ 'ಭರತ ಬಾಹುಬಲಿ' ಸಿನಿಮಾ ಬರುತ್ತಿದೆ.
ಈ ಎಲ್ಲ ಸಿನಿಮಾಗಳ ನಂತರವೂ ಇಬ್ಬರು ಜೋಡಿಯ ಚಿತ್ರಗಳು ಮುಂದುವರೆಯುತ್ತಿದೆ. ಚಿಕ್ಕಣ್ಣನನ್ನು ಹೀರೋ ಮಾಡಲು ಮಂಜು ಮಾಂಡವ್ಯ ಪ್ಲಾನ್ ಮಾಡಿದ್ದಾರೆ.