Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೆಂಕಟೇಶ್ ಕುಟುಂಬಕ್ಕೆ ಚಿರಂಜೀವಿ ಧನ ಸಹಾಯ
ಹದಿನೈದು ದಿನಗಳ ಹಿಂದೆ ಮಹಬೂಬ್ ನಗರ ಜಿಲ್ಲೆ ಪಾಲೆಂ ಬಳಿ ಸಂಭವಿಸಿದ ಭೀಕರ ವೋಲ್ವೋ ಬಸ್ ದುರಂತದಲ್ಲಿ 45ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು. ಈ ಘಟನೆಯಲ್ಲಿ ಅಖಿಲ ಕರ್ನಾಟಕ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ಯಾದವ್ ಸಹ ಸಾವಪ್ಪಿದ್ದರು.
ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಈಗ ವೆಂಕಟೇಶ್ ಕುಟುಂಬಕ್ಕೆ ಧನ ಸಹಾಯ ಮಾಡಿದ್ದಾರೆ. ತಮ್ಮ ಚಾರಿಟಿಬಲ್ ಟ್ರಸ್ಟ್ ಮೂಲಕ ರು.5 ಲಕ್ಷಗಳ ಚೆಕ್ ಕೊಟ್ಟಿದ್ದಾರೆ. ಸೋಮವಾರ (ನ.11) ವೆಂಕಟೇಶ್ ಯಾದವ್ ಅವರ ವೈಕುಂಠ ಸಮಾರಾಧನೆಯ ಕಾರ್ಯಕ್ರಮದಲ್ಲಿ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಭಾಗಿಯಾಗಿದ್ದರು. [ಬಸ್ ದುರಂತದ ಚಿತ್ರಗಳು]
ಇದೇ ಸಂದರ್ಭದಲ್ಲಿ ವೆಂಕಟೇಶ್ ಪುತ್ರಿಯರಿಬ್ಬರಿಗೆ ರು.3 ಲಕ್ಷ, ಪತ್ನಿ ಶಾಂತ, ತಂದೆ ಸುಂದರ ರಾಜ್ ಅವರಿಗೆ ನಟ ರಾಮ್ ಚರಣ್ ತೇಜ, ಅಲ್ಲು ಅರ್ಜುನ್ ತಲಾ ರೂ.1 ಲಕ್ಷ ಡಿಡಿಗಳನ್ನು ನೀಡಿದರು.
ಮದುವೆಯ ಆಹ್ವಾನ ಪತ್ರಿಕೆ ಹಂಚಲು ಹೈದರಾಬಾದ್ಗೆ ತೆರಳಿದ್ದ ನಟ ಚಿರಂಜೀವಿ ಅಭಿಮಾನಿ ಸಂಘದ ಅಧ್ಯಕ್ಷ ಎಸ್.ವೆಂಕಟೇಶ್ ಯಾದವ್ (ಕೋಟೆ) ಹಾಗೂ ಸಹೋದರಿ ಅನಿತಾ ಬಸ್ ದುರಂತದಲ್ಲಿ ಸಾವಪ್ಪಿದ್ದರು.
ಮಕ್ಕಳ ಜತೆ ಮಾತನಾಡಿ ಕಲಾಸಿಪಾಳ್ಯದಲ್ಲಿರುವ ಜಬ್ಬಾರ್ ಟ್ರಾವೆಲ್ಸ್ಗೆ ತೆರಳಿದ ವೆಂಕಟೇಶ್ ಮಂಗಳವಾರ (ಅ.29) ರಾತ್ರಿ 10 ಗಂಟೆ ಸುಮಾರಿಗೆ ಬಸ್ ಹತ್ತಿದ ಬಳಿಕ ಮಕ್ಕಳ ಮೊಬೈಲ್ಗೆ ಕರೆ ಮಾಡಿ, ಬಸ್ ಹತ್ತಿರುವ ವಿಷಯ ತಿಳಿಸಿ ಊಟ ಮಾಡಿ ಮಲಗುವಂತೆ ಹೇಳಿದ್ದರು. ಅದೇ ಅವರ ಕೊನೆಯ ಮಾತು. ಬೆಳಗಾಗುವುದರೊಳಗೆ ಮೊಬೈಲ್ ಸಮೇತ ಅವರು ಜೀವಂತ ಸುಟ್ಟು ಕರಕಲಾಗಿದ್ದರು.