Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಮೀರ್ ಮನೆಯಲ್ಲಿ ದರ್ಶನ್, ಇಫ್ತಾರ್ ಕೂಟದಲ್ಲಿ ಭಾಗಿ: ಭಾವೈಕ್ಯತೆ ಮೆರೆದ ನಟ
ನಟ ದರ್ಶನ್, ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ.
ಜಮೀರ್ ಅಹ್ಮದ್, ಅವರ ಪುತ್ರ ಜೈದ್ ಖಾನ್ ಸೇರಿದಂತೆ ಇನ್ನೂ ಕೆಲವರು ಒಟ್ಟಿಗೆ ಸೇರಿ ಇಫ್ತಾರ್ ಕೂಟ ಮಾಡಿದ್ದಾರೆ. ಇಫ್ತಾರ್ ಕೂಟದ ವಿಡಿಯೋವನ್ನು, ಕೆಲವು ಚಿತ್ರಗಳನ್ನು ಜಮೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Darshan 56th Movie: ರಚಿತಾ-ಆಶಿಕಾ ಇವರಿಬ್ಬರಲ್ಲಿ ದರ್ಶನ್ 56ನೇ ಚಿತ್ರಕ್ಕೆ ನಾಯಕಿ ಯಾರು?
Recommended Video
ದರ್ಶನ್ರಿಗೆ ದೊಡ್ಡ ಹೂಗುಚ್ಛ ನೀಡಿ ಸ್ವಾಗತಿಸಿದ ಜಮೀರ್, ಬಳಿಕ ಅವರಿಗೆ ಶಾಲು, ಟೋಪಿ ಹಾಕಿ, ಸಂಪ್ರದಾಯದಂತೆ ಎಲ್ಲರೂ ನೆಲ ಹಾಸಿನ ಮೇಲೆ ಕುಳಿತು ಭೋಜನ ಸವಿದಿದ್ದಾರೆ.
ಜಮೀರ್, ದರ್ಶನ್ ಹಲ ವರ್ಷಗಳಿಂದಲೂ ಆತ್ಮೀಯ ಗೆಳೆಯರಾಗಿದ್ದು, ಬಹುತೇಕ ಪ್ರತಿ ವರ್ಷ ಜಮೀರ್ ಆಯೋಜಿಸುವ ಇಫ್ತಾರ್ ಕೂಟದಲ್ಲಿ ದರ್ಶನ್ ಭಾಗವಹಿಸುತ್ತಾರೆ.
ಇದೀಗ ರಾಜ್ಯದಲ್ಲಿ ಧರ್ಮದ ವಿಷಯವಾಗಿ ಬಹಳ ಸೂಕ್ಷ್ಮ ಪರಿಸ್ಥಿತಿ ಇದೆ. ಧರ್ಮ ಭಾವೈಕ್ಯತೆಯ ಮಾತುಗಳನ್ನಾಡುವುದು ಸಹ ಧರ್ಮ ದ್ರೋಹ, ದೇಶ ದ್ರೋಹ ಎಂದು ಹಣೆಪಟ್ಟಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಹಾ ಸಮಯದಲ್ಲಿ ಗೆಳೆತನಕ್ಕೆ ಬೆಲೆ ಕೊಟ್ಟು ದರ್ಶನ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಾರೆ. ಇಂಥಹಾ ಸೂಕ್ಷ್ಮ ಸಮಯದಲ್ಲಿ ಧರ್ಮ ಭಾವೈಕ್ಯತೆ ಸಾರುವ ಕಾರ್ಯ ಮಾಡಿದ ದರ್ಶನ್ ಅಭಿನಂದನಾರ್ಹರು.
ದರ್ಶನ್ ಪ್ರತಿ ವರ್ಷವೂ ತಪ್ಪದೆ ಮುಸ್ಲಿಂ ಹಬ್ಬಗಳಿಗೆ ಶುಭಾಶಯಗಳನ್ನು ಕೋರುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಹಿಂದು ಹಬ್ಬಗಳಿಗೂ ತಪ್ಪದೆ ಅಭಿಮಾನಿಗಳಿಗೆ ಶುಭಾಶಯ ಹೇಳುತ್ತಾರೆ.
Darshan: ದರ್ಶನ್ಗೆ 'ಪುಷ್ಪ' ಚಿತ್ರದ ಜಾಲಿ ರೆಡ್ಡಿ ಪಾತ್ರ ಮಾಡಿ ಎಂದಿದ್ದ ನಿರ್ದೇಶಕ!
ಇನ್ನು ಮಾಜಿ ಸಚಿವ ಜಮೀರ್ ಪುತ್ರ ಸಹ ನಟನಾಗಲು ಸಜ್ಜಾಗಿದ್ದು, ಅವರ ನಟನೆಯ ಮೊದಲ ಸಿನಿಮಾ 'ಬನಾರಸ್' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ವಾರಣಾಸಿಯಲ್ಲಿ ಚಿತ್ರೀಕರಣಗೊಂಡಿದ್ದು, ಸಿನಿಮಾವನ್ನು ಜಯತೀರ್ಥ ನಿರ್ದೇಶನ ಮಾಡಿದ್ದಾರೆ.
ಇನ್ನು ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಈ ವರ್ಷಾಂತ್ಯಕ್ಕೆ ಮುನ್ನಾ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವು ಶಿಕ್ಷಣ ವ್ಯವಸ್ಥೆಯ ಕತೆಯನ್ನು ಒಳಗೊಂಡಿರಲಿದೆ.