twitter
    For Quick Alerts
    ALLOW NOTIFICATIONS  
    For Daily Alerts

    ಸುಮಲತಾ ಭರ್ಜರಿ ಗೆಲುವು : ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮ

    |

    ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮಟ್ಟಿದೆ. ಭಾರಿ ಕುತೂಹಲದ ಕ್ಷೇತ್ರವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ರಾಜ್ಯದ ಜನರ ಚಿತ್ತ ಸೆಳೆದಿದ್ದ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಗೆಲುವಿನ ಜಯಭೇರಿ ಭಾರಿಸಿದ್ದಾರೆ.

    ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ಜೋಡೆತ್ತುಗಳಾಗಿದ್ದ ದರ್ಶನ್ ಮತ್ತು ಯಶ್ ಅಭಿಮಾನಿಗಳ ಸಂಭ್ರಮ ಕೂಡ ಮುಗಿಲು ಮುಟ್ಟಿದೆ. ಮಂಡ್ಯದಲ್ಲಿ ಸುಮಲತಾ ಪರ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.

    ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?

    ಬೆಳಗ್ಗೆಯಿಂದನೂ ಸಂಜೆಯವರೆಗೂ ಭಾರಿ ರೋಚಕತೆಯ ಕ್ಷೇತ್ರವಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಸುಮಲತಾ ಗೆಲುವಿನ ಸಂಭ್ರಮವನ್ನು ಡಿ ಬಾಸ್ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಮುಂದೆ ಓದಿ..

    ದರ್ಶನ್ ನಿವಾಸದ ಮುಂದೆ ಸಂಭ್ರಮ

    ದರ್ಶನ್ ನಿವಾಸದ ಮುಂದೆ ಸಂಭ್ರಮ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ದರ್ಶನ್ ಮನೆ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಅಷ್ಟೆಯಲ್ಲ ಡಿ ಬಾಸ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ.

    ಸುಮಲತಾಗೆ ಜೋಡೆತ್ತುಗಳ ಬೆಂಬಲ

    ಸುಮಲತಾಗೆ ಜೋಡೆತ್ತುಗಳ ಬೆಂಬಲ

    ಸುಮಲತಾ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಜೋಡೆತ್ತುಗಳ ಬೆಂಬಲ ಕೂಡ ಒಂದು. ದರ್ಶನ್ ಮತ್ತು ಯಶ್ ಇಬ್ಬರು ಸಮಲತಾ ಅವರನ್ನು ಹೇಗಾದರು ಮಾಡಿ ಗೆಲ್ಲಿಸಲೇ ಬೇಕೆಂದು ಪಣತೊಟ್ಟು ನಿಂತಿದ್ದರು. ಸುಮಲತಾ ಚುನಾವಣೆಗೆ ನಿಂತ ಕ್ಷಣದಿಂದನೂ ಕೊನೆಯವರೆಗೂ ಸಮಲತಾ ಬೆನ್ನಿಗೆ ನಿಂತು ಪ್ರತೀ ಹೆಜ್ಜೆಯಲ್ಲೂ ಸುಮಲತಾ ಜೊತೆಯಿದ್ದು ಸಹಾಯ ಮಾಡಿದ್ದರು ದಚ್ಚು ಮತ್ತ ಯಶ್. ವಿರೋಧ ಪಕ್ಷದಿಂದ ಬಂದ ಟೀಕೆಗಳನ್ನು ಸಮಾಧಾನವಾಗಿಯೆ ಸ್ವೀಕರಿಸಿ ಈಗ ಫಲಿತಾಂಶದ ಮೂಲಕ ಉತ್ತರ ನೀಡಿದ್ದಾರೆ.

    ಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದಿದೆ ಈ '10' ಅಸ್ತ್ರಗಳು

    ಮಂಡ್ಯಾದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

    ಮಂಡ್ಯಾದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

    ಬೆಳಗ್ಗೆಯಿಂದಲು ಹಾರ್ಟ್ ಬೀಟ್ ಹೆಚ್ಚಿಸಿಕೊಂಡು ಫಲಿತಾಂಶಕ್ಕಾಗಿ ಕಾದುಕೊಳಿತಿದ್ದರು ಸುಮಲತಾ ಬೆಂಬಲಿಗರು. ಅಂಬರೀಶ್ ಪತ್ನಿ ಗೆಲವು ಸಾಧಿಸುತ್ತಿದ್ದಂತೆ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರು ಸುಮಲತಾ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಸುಮಲತಾ ಪರ ಘೋಷಣೆಗಳನ್ನು ಕೂಗುತ್ತಾ ಕುಣಿದುಕುಪ್ಪಳಿಸುತ್ತಿದ್ದಾರೆ ಅಭಿಮಾನಿಗಳು.

    ಅಂಬಿ ಹುಟ್ಟುಹಬ್ಬಕ್ಕೆ ಸುಮಲತಾ ನೀಡಿದ ಒಲವಿನ ಉಡುಗೊರೆ ಅಂಬಿ ಹುಟ್ಟುಹಬ್ಬಕ್ಕೆ ಸುಮಲತಾ ನೀಡಿದ ಒಲವಿನ ಉಡುಗೊರೆ

    ಸ್ವಾಭಿಮಾನದ ಗೆಲುವು

    ಸ್ವಾಭಿಮಾನದ ಗೆಲುವು

    ಅಭೂತಪೂರ್ವ ಗೆಲುವು ಪಡೆದ ಸುಮಲತಾ ಅವರು ಮಂಡ್ಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ಸುಮಲತಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಗೆಲವು ಸಾಧಿಸಿ ಸಂಸತ್ ಮೆಟ್ಟಿಲು ಹತ್ತುತ್ತಿದ್ದಾರೆ. ಇದೆ ಸಂತಸದಲ್ಲಿ ಸುಮಲತಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡುವ ಮೂಲಕ ಜನತೆಗೆ ಧನ್ಯವಾದ ಹೇಳಿದ್ದಾರೆ. "ಇದು ನನ್ನ ಗೆಲುವಲ್ಲ ಸ್ವಾಭಿಮಾನಿ ಮಂಡ್ಯ ಜನತೆಯ ಗೆಲುವು. ಅಂಬರೀಶ್ ಮೇಲಿನ ಪ್ರೀತಿ ನನ್ನನ್ನು ಜನ ಗೆಲ್ಲಿಸಿದ್ದಾರೆ" ಎಂದು ಹೇಳಿದ್ದಾರೆ.

    English summary
    mandya loksabha election 2019 sumalatha won by over 90,000 votes against nikhil kumar. Actor Darshan fans are celebrating for sumalatha won.
    Thursday, May 23, 2019, 19:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X