Don't Miss!
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಅನುದಾನ ಸಾಗಿಸಿದ ದರ್ಶನ್: ವಿಡಿಯೋ ವೈರಲ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯದ ಮನೋಭಾವದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಷ್ಟ ಎಂದವರ ಪಾಲಿಗೆ ಸದಾ ಸಹಾಯಹಸ್ತ ಚಾಚುವ ದರ್ಶನ್, ಸಾಕಷ್ಟು ಅಭಿಮಾನಿಗಳು ಮತ್ತು ಸ್ನೇಹಿತರ ಕಷ್ಟಕ್ಕೆ ನೆರವಾಗಿದ್ದಾರೆ. ಅಭಿಮಾನಿಗಳು, ಸ್ನೇಹಿತರ ಜೊತೆಗೆ ಪ್ರಾಣಿಗಳು ಅಂದರೂ ದಚ್ಚು ಗೆ ಸಖತ್ ಅಚ್ಚುಮೆಚ್ಚು.
ಸದ್ಯ ದರ್ಶನ್ ಗೋ ಶಾಲೆ ವೊಂದಕ್ಕೆ ಅನುದಾನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಹುಲ್ಲನ್ನು ಸಾಗಿಸಲಾಗಿದೆ. ಚಿತ್ರ ಗೋಶಾಲೆ ಇದಾಗಿದ್ದು ಹುಲ್ಲು ಮಾತ್ರಲ್ಲದೆ ಗೋಶಾಲೆಗೆ ಅಗತ್ಯವಿರುವ ಫುಡ್ ಕೂಡ ರವಾನಿಸಿದ್ದಾರೆ.
ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?
ಟ್ರ್ಯಾಕ್ಟರ್ ಗಳಲ್ಲಿ ಹುಲ್ಲನ್ನು ಸಾಗಿಸುವ ಜೊತೆಗೆ ಸ್ವತಃ ದರ್ಶನ್ ಅವರೆ ಗೋಶಾಲೆಗೆಭೇಟಿ ನೀಡಿ ಗೋವುಗಳನ್ನು ನೋಡಿ, ಅಲ್ಲಿರುವವರ ಜೊತೆ ಮಾತುಕಥೆ ನಡೆಸಿದ್ದಾರೆ. ದರ್ಶನ್ ಭೇಟಿ ನೀಡಿರುವ ಫೋಟೋ ಮತ್ತು ಟ್ರ್ಯಾಕ್ಟರ್ ಗಳ ಮೂಲಕ ಸಾಗುತ್ತಿರುವ ಹುಲ್ಲಿನ ರಾಶಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ದರ್ಶನ್ ಇತ್ತೀಚಿಗೆ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. "ಹುಟ್ಟುಹಬ್ಬಕ್ಕೆ ಹಾರ, ಕೇಕ್, ಗಿಫ್ಟ್ ಗಳನ್ನು ತರುವ ಬದಲು ಅದೆ ಹಣದಲ್ಲಿ ಕೈಲಾದ ಅಕ್ಕಿ, ಬಳೆ, ಸಕ್ಕರೆ ಹಾಗೂ ಇತರ ದವಸ ದಾನ್ಯಗಳನ್ನು ದಾನ ನೀಡಿ ಅದನ್ನು ಒಗ್ಗೂಡಿಸಿ ಸೇರಬೇತಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು" ಎಂದು ಹೇಳಿದ್ದಾರೆ.
ದರ್ಶನ್ ಈ ಮಾತು ಹೇಳುತ್ತಿದ್ದಾರೆ ಅಭಿಮಾನಿಗಳು ಅಕ್ಕಿ, ಬೇಳಿ, ದವಸ ದಾನ್ಯಗಳನ್ನು ತಂದು ದಚ್ಚು ಬಳಿ ನೀಡುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಈಗಾಗಲೆ ಮೂಟೆಗಟ್ಟಲೆ ಅಕ್ಕಿ ಸೇರಿದಂತೆ ಬೇರೆ ಬೇರೆ ಆಹಾರ ಸಾಮಗ್ರಿಗಳನ್ನು ತಂದು ನೀಡುತ್ತಿದ್ದಾರೆ. ಎಲ್ಲವನ್ನು ಒಂದು ಕಡೆ ಸೇರಿಸಿ ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಗುಣಗಳಿಗಾಗಿಯೆ ಅಭಿಮಾನಿಗಳಿಗೆ ದಾಸ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತಿದೆ.