Don't Miss!
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾರೋಗ್ಯಕ್ಕೆ ತುತ್ತಾಗಿದ್ದ ದಾಸ ದರ್ಶನ್ ನೆಚ್ಚಿನ ಬಸವ ಇನ್ನಿಲ್ಲ
ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ನಟ ದರ್ಶನ್ ಅವರ ಪ್ರಚಾರ ಮೆರವಣಿಗೆಗೆ ಅಡ್ಡಗಟ್ಟಿದ್ದ ಚಾಲೆಂಜಿಗ್ ಸ್ಟಾರ್ ಅವರ ಅಚ್ಚುಮೆಚ್ಚಿನ ಬಸವ ಶುಕ್ರವಾರ ನಸುಕಿನಲ್ಲಿ ಸಾವನ್ನಪ್ಪಿದೆ. ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಬಸವ, ನೀರು, ಆಹಾರ ಸೇವಿಸಲಾಗದೆ ಮಲಗಿದ್ದಲ್ಲಿಂದ ಏಳಲಾಗದ ಸ್ಥಿತಿಗೆ ತಲುಪಿತ್ತು. ಅದು ಮತ್ತೆ ಚೇತರಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ.
Recommended Video
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಪರ ನಟ ದರ್ಶನ್ ಪ್ರಚಾರ ಮಾಡುವ ಸಂದರ್ಭದಲ್ಲಿ ಕೆಆರ್ ನಗರದ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಈ ಬಸವ ರಸ್ತೆಗೆ ಅಡ್ಡಲಾಗಿ ನಿಂತು, ಯಾರೂ ಮುಂದೆ ಹೋಗದಂತೆ ತಡೆದಿತ್ತು. ಜನರು ಅದನ್ನು ಬೆದರಿಸಿ ಓಡಿಸಲು ಪ್ರಯತ್ನಿಸಿದರೂ ಅದು ಜಗ್ಗಿರಲಿಲ್ಲ. ಮುಂದೆ ಓದಿ...
ದರ್ಶನ್ ಸ್ಪರ್ಶಕ್ಕೆ ಸ್ಪಂದಿಸಿದ್ದ ಬಸವ
ಉದ್ದನೆಯ ಕೊಂಬಿನ ಕಟ್ಟುಮಸ್ತಾದ ಗೂಳಿಯನ್ನು ಮುಟ್ಟಲು ಎಲ್ಲರೂ ಭಯಪಟ್ಟಿದ್ದರು. ಇದನ್ನು ಗಮನಿಸಿದ್ದ ನಟ ದರ್ಶನ್, ಪ್ರಚಾರ ವಾಹನದಿಂದ ಇಳಿದು ಬಂದು ಬಸವನ ಮೈಮುಟ್ಟಿದ್ದರು. ಬಸವ ಒಮ್ಮೆ ರೊಚ್ಚಿಗೆದ್ದಂತೆ ಕಂಡರೂ ದರ್ಶನ್ ಸ್ಪರ್ಧಿಸಿದ ನಂತರ ಯಾವುದೇ ಗದ್ದಲವೆಬ್ಬಿಸದೆ ಪಕ್ಕಕ್ಕೆ ನಡೆದಿತ್ತು.
ಬಸವನಿಗೆ ಅನಾರೋಗ್ಯ: ಮತ್ತೆ ದರ್ಶನ್ ಸ್ಪರ್ಶಕ್ಕೆ ಕಾದಿದೆಯಾ ಗೂಳಿ?
ವೈರಲ್ ಆಗಿದ್ದ ವಿಡಿಯೋ
ಬೇರೆ ಯಾವ ಜನರಿಗೂ ಬಗ್ಗದ್ದ ಬಸವ, ದರ್ಶನ್ ಮೈದಡವಿ ಮಾತನಾಡಿಸುತ್ತಿದ್ದಂತೆಯೇ ಅವರಿಗೆ ಗೌರವ ನೀಡಿದಂತೆ ಪಕ್ಕಕ್ಕೆ ಸರಿದು ವಾಹನ ತೆರಳಲು ಅವಕಾಶ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಅಂದಿನಿಂದ ಗ್ರಾಮದಲ್ಲಿ ಈ ಬಸವನಿಗೆ ವಿಶೇಷ ಕಾಳಜಿ ಮಾಡಲಾಗುತ್ತಿತ್ತು.
ಚಿಕಿತ್ಸೆ ನೀಡಿದ್ದರು
ಆದರೆ ಈ ಬಸವನ ಆರೋಗ್ಯ ಕಳೆದ ಒಂದು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಗ್ರಾಮಸ್ಥರು ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಿದರೂ ಅದು ಚೇತರಿಸಿಕೊಂಡಿರಲಿಲ್ಲ. ಹುಲ್ಲು, ನೀರು ಸೇವಿಸದ ಕಾರಣ ಅದರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿತ್ತು. ಇದರಿಂದ ಗ್ರಾಮಸ್ಥರು ದರ್ಶನ್ ಬಂದರೆ ಬಸವ ಸರಿಹೋಗುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದರು.
ದರ್ಶನ್ ಫಾರ್ಮ್ ಹೌಸ್ ನಲ್ಲಿ ದೇವರಾಜ್ ಕುಟುಂಬ: ಫೋಟೋ ವೈರಲ್
ಚಿಕಿತ್ಸೆ ಫಲಿಸದೆ ಸಾವು
ದರ್ಶನ್ ಕೂಡ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಬಸವನ ಚಿಕಿತ್ಸೆಗೆ ನೆರವಾಗಿದ್ದರು. ಆದರೆ ಗ್ರಾಮಕ್ಕೆ ಖುದ್ದಾಗಿ ತೆರಳಿ ಬಸವನನ್ನು ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ನಸುಕಿನಲ್ಲಿ ಬಸವ ಕಾಳಮ್ಮನ ದೇವಸ್ಥಾನದ ಆವರಣದಲ್ಲಿ ಮೃತಪಟ್ಟಿದೆ.