twitter
    For Quick Alerts
    ALLOW NOTIFICATIONS  
    For Daily Alerts

    ಕೆಂಪೇಗೌಡರ ಜಯಂತಿ ಶುಭಾಶಯ ಕೋರಿದ ದರ್ಶನ್ ಮಾಡಿದರೊಂದು ಯಡವಟ್ಟು

    |

    ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ನಾಡಿನೆಲ್ಲೆಡೆ ಸರಳವಾಗಿ ಆಚರಿಸಲಾಗಿದೆ. ಹಲವಾರು ರಾಜಕಾರಣಿಗಳು, ಸೆಲೆಬ್ರಿಟಿಗಳು ಕೆಂಪೇಗೌಡ ಜಯಂತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

    ನಟ ದರ್ಶನ್ ಸಹ ಕೆಂಪೇಗೌಡರ ಜಯಂತಿಯ ದಿನದಂದು ಚಿತ್ರವೊಂದನ್ನು ಪ್ರಕಟಿಸಿ ಶುಭಾಶಯಗಳನ್ನು ಕೋರಿದ್ದಾರೆ, ಆದರೆ ಕೆಂಪೇಗೌಡರ ಚಿತ್ರದ ಬದಲಿಗೆ ವೀರ ಮದಕರಿ ನಾಯಕರ ಚಿತ್ರವನ್ನು ದರ್ಶನ್ ಬಳಸಿದ್ದಾರೆ.

    ನಟ ದರ್ಶನ್ ಪತ್ನಿಗೆ ಕೊರೊನಾ ಪಾಸಿಟಿವ್ ವದಂತಿ: ವಿಜಯಲಕ್ಷ್ಮಿ ಹೇಳಿದ್ದೇನು?ನಟ ದರ್ಶನ್ ಪತ್ನಿಗೆ ಕೊರೊನಾ ಪಾಸಿಟಿವ್ ವದಂತಿ: ವಿಜಯಲಕ್ಷ್ಮಿ ಹೇಳಿದ್ದೇನು?

    ಕೆಂಪೇಗೌಡರ ಹಾಗೂ ವೀರ ಮದಕರಿ ನಾಯಕರ ಚಿತ್ರಗಳು ಬಹುವಾಗಿ ಹೋಲುತ್ತವೆ ಎರಡರಲ್ಲೂ ತುಸುವಷ್ಟೆ ವ್ಯತ್ಯಾಸ ಆದರೆ ಈ ವ್ಯತ್ಯಾಸವನ್ನು ಗುರುತಿಸಲು ವಿಫಲವಾಗಿರುವ ದರ್ಶನ್, ಕೆಂಪೇಗೌಡರ ಜಯಂತಿ ಶುಭಾಶಯ ಕೋರಲು ವೀರ ಮದಕರಿ ನಾಯಕರ ಚಿತ್ರವನ್ನು ಹಾಕಿದ್ದಾರೆ.

    ದರ್ಶನ್ ಹಾಕಿರುವ ಪೋಸ್ಟ್ ಏನು?

    ದರ್ಶನ್ ಹಾಕಿರುವ ಪೋಸ್ಟ್ ಏನು?

    'ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. ಆದಷ್ಟು ಬೇಗ ನಮ್ಮ ಬೆಂಗಳೂರು ಸಹಜ ಸ್ಥಿತಿಗೆ ಮರಳಲಿ' ಎಂದು ಕಾಳಜಿಯುಕ್ತ ಪೋಸ್ಟ್‌ ಅನ್ನೇ ದರ್ಶನ್ ಹಾಕಿದ್ದಾರೆ ಆದರೆ ಚಿತ್ರವನ್ನು ಹಾಕುವಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.

    ಎರಡೂ ಚಿತ್ರದಲ್ಲಿ ಇರುವ ವ್ಯತ್ಯಾಸವೇನು?

    ಎರಡೂ ಚಿತ್ರದಲ್ಲಿ ಇರುವ ವ್ಯತ್ಯಾಸವೇನು?

    ವೀರ ಮದಕರಿ ನಾಯಕರ ಚಿತ್ರ ಹಾಗೂ ಕೆಂಪೇಗೌಡರ ಚಿತ್ರಗಳಲ್ಲಿ ಬಹು ಸಾಮ್ಯತೆ ಇದೆ. ಕೆಂಪೇಗೌಡರ ಚಿತ್ರದಲ್ಲಿನ ಮುಕುಟ ಕೋಡು ನೇರವಾಗಿದ್ದರೆ, ವೀರ ಮದಕರಿ ನಾಯಕರ ಚಿತ್ರದಲ್ಲಿನ ಮುಕುಟ ತುಸು ಓರೆಯಾಗಿರುತ್ತದೆ. ಹಲವು ಚಿತ್ರಗಳು, ವಿಗ್ರಹಗಳಲ್ಲಿ ಕೆಂಪೇಗೌಡರ ಕಿರೀಟಕ್ಕೆ ಕೋಡು ಇರುವುದಿಲ್ಲ. ಹಲವರು ಕೆಂಪೇಗೌಡರ ಹಾಗೂ ವೀರ ಮದಕರಿ ಅವರ ಚಿತ್ರವನ್ನು ಗೊಂದಲ ಮಾಡಿಕೊಳ್ಳುತ್ತಾರೆ.

    ದರ್ಶನ್ ಜೊತೆಗೆ ಊಟ ಮಾಡುತ್ತಿರುವ ಯುವತಿ ಯಾರು?ದರ್ಶನ್ ಜೊತೆಗೆ ಊಟ ಮಾಡುತ್ತಿರುವ ಯುವತಿ ಯಾರು?

    ತಪ್ಪು ಚಿತ್ರ ಹಾಕಿದ್ದಕ್ಕೆ ಅಸಮಾಧಾನ

    ತಪ್ಪು ಚಿತ್ರ ಹಾಕಿದ್ದಕ್ಕೆ ಅಸಮಾಧಾನ

    ಕೆಂಪೇಗೌಡರ ಚಿತ್ರದ ಬದಲಿಗೆ ವೀರ ಮದಕರಿ ನಾಯಕರ ಚಿತ್ರವನ್ನು ದರ್ಶನ್ ಬಳಸಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳೇ ಹೀಗೆ ತಪ್ಪು ಮಾಹಿತಿ ಹಂಚಿಕೊಳ್ಳುವುದು ಥರವಲ್ಲ ಎಂದಿದ್ದಾರೆ ಇನ್ನು ಕೆಲವರು.

    ದರ್ಶನ್ ಪರವಾಗಿಯೂ ಕಮೆಂಟ್‌ ಹಾಕಿದ್ದಾರೆ

    ದರ್ಶನ್ ಪರವಾಗಿಯೂ ಕಮೆಂಟ್‌ ಹಾಕಿದ್ದಾರೆ

    ದರ್ಶನ್ ಅವರ ಪರವಾಗಿಯೂ ಕೆಲವರು ಕಮೆಂಟ್ ಮಾಡಿದ್ದು, 'ಹಲವಾರು ವಿದ್ಯಾವಂತರೇ ಕೆಂಪೇಗೌಡರ ಜಯಂತಿಗೆ ಮದಕರಿ ನಾಯಕರ ಚಿತ್ರ ಬಳಸುತ್ತಾರೆ. ದರ್ಶನ್ ಅವರು ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮನಸ್ಸಿನಿಂದಲೇ ಪೋಸ್ಟ್ ಹಾಕಿದ್ದಾರೆ ಆದರೆ ಕಣ್‌ತಪ್ಪಿ ಚಿತ್ರಗಳನ್ನು ಬಳಸಿದ್ದಾರೆ ಎಂದಿದ್ದಾರೆ.

    ಹೀಗಾಗುತ್ತೆ ಅನ್ನೋದು ಗೊತ್ತಿದ್ರೆ ವೀರ ಮದಕರಿ ನಾಯಕ ಸಿನಿಮಾ ಮಾಡ್ತಿರಲಿಲ್ಲ: ರಾಕ್‌ಲೈನ್ಹೀಗಾಗುತ್ತೆ ಅನ್ನೋದು ಗೊತ್ತಿದ್ರೆ ವೀರ ಮದಕರಿ ನಾಯಕ ಸಿನಿಮಾ ಮಾಡ್ತಿರಲಿಲ್ಲ: ರಾಕ್‌ಲೈನ್

    English summary
    Actor Darshan ysed Veera Madakari Nayaka image instead of Kempegowda image in social media to wish Kempegowda Jayanthi.
    Wednesday, July 8, 2020, 23:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X