Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಕ್ರಾಂತಿ ಹಬ್ಬದಂದು ಕಬ್ಬು ಕದ್ದು ತಿಂದ ಸ್ಯಾಂಡಲ್ ವುಡ್ ನಟ
ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ಇದೇ ಸರಿಯಾದ ಸಮಯ ಅಂತ ನಟರೊಬ್ಬರು ಕಬ್ಬು ಕಳ್ಳತನ ಮಾಡಿದ್ದಾರೆ. ಅರೆ ಇವರಿಗ್ಯಾಕೆ ಇಂತ ಬುದ್ದಿ ಬಂತು ಅಂತ ಆಶ್ವರ್ಯ ಪಡಬೇಡಿ. ಹಳ್ಳಿಗಳಲ್ಲಿ ಹಬ್ಬಗಳ ಸಂದರ್ಭದಲ್ಲಿ ಅಕ್ಕ ಪಕ್ಕದ ತೊಟದಲ್ಲಿ ಕಬ್ಬು ಕಿತ್ತು ತಿನ್ನೋದು ಸರ್ವೇ ಸಾಮಾನ್ಯ.
ಅಷ್ಟಕ್ಕೂ ಈ ಕಬ್ಬು ಕದ್ದವರು ಯಾರು ಗೊತ್ತಾ ರಾಮ ರಾಮ ರೇ ಚಿತ್ರದಲ್ಲಿ ಅಭಿನಯಿಸಿದ ನಟ ಧರ್ಮಣ್ಣ. ಚಿತ್ರೀಕರಣದ ಬಿಡುವಿನಲ್ಲಿ ನಟ ಧರ್ಮಣ್ಣ ತಮ್ಮ ಊರಿನಲ್ಲಿ ಹಬ್ಬದ ಆಚರಣೆ ಮಾಡುತ್ತಿದ್ದಾರೆ.
"ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಫ್ರೆಂಡ್ಸ್ ಜೊತೆ ದೇವಿರಮ್ಮನ ಬೆಟ್ಟ ಮತ್ತೆ ಹೊಸಪೇಟೆ ಸಂತೆ, ಹಾಗೂ ಅನ್ನದಾತರ ಹೊಲದಲ್ಲಿ ಕದ್ದ ಕಬ್ಬಿನ ಸಿಹಿ ಚೆನ್ನಾಗಿದೆ" ಎಂದು ಧರ್ಮಣ್ಣ ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ಹಾಗೆಯೇ ಅಭಿಮಾನಿಗಳಿಗೆ ಹಬ್ಬದ ಶುಭಾಶಯವನ್ನೂ ತಿಳಿಸಿದ್ದಾರೆ.
ರಾಮ ರಾಮ ರೇ ಸಿನಿಮಾದ ನಂತರ ಧರ್ಮಣ್ಣ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಅಂಜನಿಪುತ್ರ, ಮುಗಳು ನಗೆಯ ಚಿತ್ರದಲ್ಲಿ ಧರ್ಮಣ್ಣ ಅಭಿನಯಿಸಿದ್ದು ಸದ್ಯ ಕಾಣದಂತೆ ಮಾಯವಾದನು, ಸ್ಟ್ರೈಕರ್, ಲಖನೌ ಟು ಬೆಂಗಳೂರು, ಲಂಬೋದರ, ಅಳಿದು ಉಳಿದು, ಪ್ರದೇಶ ಸಮಾಚಾರ ಹಾಗೂ ಐ ಯಾಮ್ ಪ್ರಗ್ನೆಂಟ್ ಚಿತ್ರಗಳಲ್ಲಿ ಧರ್ಮಣ್ಣ ಅವರ ಅಭಿನಯವಿದೆ.