Don't Miss!
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವದ ಗೆಳೆಯ ಉದಯ್ ಕುಟುಂಬಕ್ಕೆ ಮದುವೆ ಆಮಂತ್ರಣ ನೀಡಿದ ಧ್ರುವ ಸರ್ಜಾ
Recommended Video
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದೆ ತಿಂಗಳು 24ಕ್ಕೆ ಧ್ರುವ ಸರ್ಜಾ, ಗೆಳತಿ ಪ್ರೇರಣ ಶಂಕರ್ ಜೊತೆ ಹಸೆಮಣೆ ಏರುತ್ತಿದ್ದಾರೆ. ತನ್ನ ಮದುವೆ ಸಮಾರಂಭಕ್ಕೆ ಧ್ರುವ ಚಿತ್ರರಂಗದ ಗಣ್ಯರು, ಕುಟುಂಬದವರು ಮತ್ತು ಸ್ನೇಹಿತರಿಗೆ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಖುದ್ದು ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಆಹ್ವಾನ ನೀಡುತ್ತಿದ್ದಾರೆ.
ಇತ್ತೀಚಿಗೆ ಧ್ರುವ ಜೀವದ ಗೆಳೆಯ ಉದಯ್ ಮನೆಗೆ ಹೋಗಿ ಉದಯ್ ಕುಟುಂಬದವರಿಗೆ ಮದುವೆ ಆಹ್ವಾನ ನೀಡಿದ್ದಾರೆ. ಸ್ನೇಹಿತರು ಬಿಟ್ಟು ಹೋದರು, ಆ ಜೀವದ ಸ್ನೇಹಿತರನ್ನು ಧ್ರುವ ಮರೆತಿಲ್ಲ. ಉದಯ್ ಮನೆಗೆ ತೆರಳಿರುವ ಧ್ರುವ, ಉದಯ್ ತಾಯಿ ಮತ್ತು ಸಹೋದರಿಗೆ ಮದುವೆ ಆಮಂತ್ರಣ ನೀಡಿದ್ದಾರೆ.
ಸ್ನೇಹಿತ ಬಿಟ್ಟು ಹೋದರು, ಸ್ನೇಹವನ್ನು ಮರೆಯದ ಧ್ರುವ ಸರ್ಜಾ: ನೆನಪಾಯ್ತು ಆ 'ಕರಾಳ ದಿನ'!
ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಧ್ರುವ ಸರ್ಜಾ. ಈ ಫೋಟೋದಲ್ಲಿ ಉದಯ್ ಮತ್ತು ಮಗುವನ್ನು ಎತ್ತಿಕೊಂಡಿರುವ ಉದಯ್ ಸಹೋದರಿ ಇದ್ದಾರೆ. ಈ ಫೋಟೋ ಕೆಳಗೆ "ಮಿಸ್ ಯು ಮಚಾ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿಗಷ್ಟೆ ಧ್ರುವ ಉದಯ್ ಸಮಾಧಿಗೆ ಭೇಟಿ ನೀಡಿ ಸಮಸ್ಕರಿಸಿ ಬಂದಿದ್ದರು. ನವೆಂಬರ್ 7 ಅನಿಲ್-ಉದಯ್ ದುರಂತ ಅಂತ್ಯ ಕಂಡ ಕರಾಳ ದಿನ. ದ್ರುವ ಮದುವೆಯ ಬ್ಯುಸಿಯ ನಡುವೆಯು ಗೆಳೆಯರ ಸಮಾಧಿಗೆ ಭೇಟಿ ನೀಡಿ ಸಮಸ್ಕರಿಸಿ ಗೆಳೆಯರನ್ನು ನೆನೆದು ಭಾವುಕರಾಗಿದ್ದರು. ಗೆಳೆಯರಿಲ್ಲದಿದ್ದರು ಅವರ ಕುಟುಂಬದವರನ್ನು ಭೇಟಿಯಾಗಿ ಮದುವೆಗೆ ವಿಶೇಷ ಆಹ್ವಾನ ನೀಡಿದ್ದಾರೆ.