Don't Miss!
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವದ ಗೆಳೆಯ ಉದಯ್ ಕುಟುಂಬಕ್ಕೆ ಮದುವೆ ಆಮಂತ್ರಣ ನೀಡಿದ ಧ್ರುವ ಸರ್ಜಾ
Recommended Video
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದೆ ತಿಂಗಳು 24ಕ್ಕೆ ಧ್ರುವ ಸರ್ಜಾ, ಗೆಳತಿ ಪ್ರೇರಣ ಶಂಕರ್ ಜೊತೆ ಹಸೆಮಣೆ ಏರುತ್ತಿದ್ದಾರೆ. ತನ್ನ ಮದುವೆ ಸಮಾರಂಭಕ್ಕೆ ಧ್ರುವ ಚಿತ್ರರಂಗದ ಗಣ್ಯರು, ಕುಟುಂಬದವರು ಮತ್ತು ಸ್ನೇಹಿತರಿಗೆ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಖುದ್ದು ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಆಹ್ವಾನ ನೀಡುತ್ತಿದ್ದಾರೆ.
ಇತ್ತೀಚಿಗೆ ಧ್ರುವ ಜೀವದ ಗೆಳೆಯ ಉದಯ್ ಮನೆಗೆ ಹೋಗಿ ಉದಯ್ ಕುಟುಂಬದವರಿಗೆ ಮದುವೆ ಆಹ್ವಾನ ನೀಡಿದ್ದಾರೆ. ಸ್ನೇಹಿತರು ಬಿಟ್ಟು ಹೋದರು, ಆ ಜೀವದ ಸ್ನೇಹಿತರನ್ನು ಧ್ರುವ ಮರೆತಿಲ್ಲ. ಉದಯ್ ಮನೆಗೆ ತೆರಳಿರುವ ಧ್ರುವ, ಉದಯ್ ತಾಯಿ ಮತ್ತು ಸಹೋದರಿಗೆ ಮದುವೆ ಆಮಂತ್ರಣ ನೀಡಿದ್ದಾರೆ.
ಸ್ನೇಹಿತ ಬಿಟ್ಟು ಹೋದರು, ಸ್ನೇಹವನ್ನು ಮರೆಯದ ಧ್ರುವ ಸರ್ಜಾ: ನೆನಪಾಯ್ತು ಆ 'ಕರಾಳ ದಿನ'!
ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಧ್ರುವ ಸರ್ಜಾ. ಈ ಫೋಟೋದಲ್ಲಿ ಉದಯ್ ಮತ್ತು ಮಗುವನ್ನು ಎತ್ತಿಕೊಂಡಿರುವ ಉದಯ್ ಸಹೋದರಿ ಇದ್ದಾರೆ. ಈ ಫೋಟೋ ಕೆಳಗೆ "ಮಿಸ್ ಯು ಮಚಾ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿಗಷ್ಟೆ ಧ್ರುವ ಉದಯ್ ಸಮಾಧಿಗೆ ಭೇಟಿ ನೀಡಿ ಸಮಸ್ಕರಿಸಿ ಬಂದಿದ್ದರು. ನವೆಂಬರ್ 7 ಅನಿಲ್-ಉದಯ್ ದುರಂತ ಅಂತ್ಯ ಕಂಡ ಕರಾಳ ದಿನ. ದ್ರುವ ಮದುವೆಯ ಬ್ಯುಸಿಯ ನಡುವೆಯು ಗೆಳೆಯರ ಸಮಾಧಿಗೆ ಭೇಟಿ ನೀಡಿ ಸಮಸ್ಕರಿಸಿ ಗೆಳೆಯರನ್ನು ನೆನೆದು ಭಾವುಕರಾಗಿದ್ದರು. ಗೆಳೆಯರಿಲ್ಲದಿದ್ದರು ಅವರ ಕುಟುಂಬದವರನ್ನು ಭೇಟಿಯಾಗಿ ಮದುವೆಗೆ ವಿಶೇಷ ಆಹ್ವಾನ ನೀಡಿದ್ದಾರೆ.