Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖಳನಟ ಕಲಾಭವನ್ ಮಣಿ ಹತ್ಯೆಯಲ್ಲಿ ನಟ ದಿಲೀಪ್ ಕೈವಾಡ?
ಮಲಯಾಳಂ ನಟ ದಿಲೀಪ್ ಬಹುಭಾಷಾ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಸುದ್ದಿ ಸಂಚಲನ ಉಂಟುಮಾಡಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ಸಂದರ್ಭದಲ್ಲೇ ನಟ ದಿಲೀಪ್ ಬಗ್ಗೆ ಇನ್ನೊಂದು ಹೊಸ ನ್ಯೂಸ್ ಕೇಳಿಬಂದಿದೆ.
ಬಹುಭಾಷಾ ನಟಿಯ ಲೈಂಗಿಕ ದೌರ್ಜನ್ಯಕ್ಕೆ ಕಾರಣವೇನು? ಸತ್ಯ ಹೊರಬಿತ್ತು..
ದಕ್ಷಿಣ ಭಾರತದ ಖ್ಯಾತ ಖಳನಟ ಕಲಾಭವನ್ ಮಣಿ ರವರ ಹತ್ಯೆಯಲ್ಲಿ ನಟ ದಿಲೀಪ್ ಕೈವಾಡ ಇದೆ ಎಂಬ ಆರೋಪ ಈಗ ಕೇಳಿಬಂದಿದೆ. ಫೆಬ್ರವರಿ 17 ರಂದು ನಡೆದ ಬಹುಭಾಷಾ ನಟಿಯ ಕಿಡ್ನಾಪ್, ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ರೂವಾರಿ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ದಿಲೀಪ್ ವಿರುದ್ಧ ಈಗ ಈ ಒಂದು ಹೊಸ ವಿಷಯ ಹೊರಬಿದ್ದಿದೆ.
ಖಳನಟ ಕಲಾಭವನ್ ಮಣಿ ರವರ ಹತ್ಯೆಯಲ್ಲಿ ದಿಲೀಪ್ ಕೈವಾಡ ಇದೆ ಎಂದು ಅವರ ಸಹೋದರ ರಾಮಕೃಷ್ಣನ್ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದು ಅವರು ಸಿಬಿಐಗೆ ತಿಳಿಸಿರುವುದಾಗಿ ಸುದ್ದಿ ಆಗಿದೆ. ಮಣಿ ರವರು ದಿಲೀಪ್ ಜೊತೆಗೆ ಜಮೀನು ವಿಚಾರವಾಗಿ ವ್ಯವಹಾರ ಹೊಂದಿದ್ದರು. ಆದರೆ ಅವರ ಹತ್ಯೆ ಹಿಂದೆ ಯಾರ ಕೈವಾಡ ಇದೆ ಎಂದು ತಿಳಿದಿಲ್ಲ. ಹತ್ಯೆ ನಂತರ ದಿಲೀಪ್ ಒಮ್ಮೆ ಕುಟುಂಬವನ್ನು ಭೇಟಿ ಆಗಿದ್ದರು. ಆದರೆ ಕಲಾಭವನ್ ರವರ ಹತ್ಯೆಯ ತನಿಖೆಗೆ ದಿಲೀಪ್ ಸಹಕಾರ ನೀಡಿರಲಿಲ್ಲ ಎಂದು ರಾಮಕೃಷ್ಣನ್ ಹೇಳಿದ್ದಾರೆ.
ಕಲಾಭವನ್ ಮಣಿ ರವರು ಕನ್ನಡದಲ್ಲಿ 'ದುರ್ಗಿ', 'ಮೈತ್ರಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕಳೆದ ವರ್ಷ(2016) ಮಾರ್ಚ್ ತಿಂಗಳಲ್ಲಿ ಹತ್ಯೆಯಾದರು.