Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಸ್ತಿಗುಡಿ' ಮುಗಿಯೋ ಮುನ್ನ 'ಉಸ್ತಾದ್' ಆದ ದುನಿಯಾ ವಿಜಿ
ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ 'ದನ ಕಾಯೋನು' ಚಿತ್ರದ ಸುದ್ದಿನೇ ಇಲ್ಲ. ಯೋಗರಾಜ್ ಭಟ್ರು ನಿರ್ದೇಶನ ಮಾಡಿರುವ 'ದನ ಕಾಯೋನು' ಅದ್ಯಾವಾಗ ತೆರೆಗೆ ಬರುತ್ತೇ ಅನ್ನೋ ಮಾಹಿತಿ ಕೂಡ ಇಲ್ಲ.
ಈ ನಡುವೆ ದುನಿಯಾ ವಿಜಿ ಅವರು 'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯದಲ್ಲೇ ಇದೀಗ ಹೊಸದಾಗಿ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.[ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!]
ಇಷ್ಟು ದಿನ ಮಾಧ್ಯಮದ ಮುಂದೆ ಕಾಣಿಸಿಕೊಳ್ಳದೇ ಇದ್ದ ದುನಿಯಾ ವಿಜಿ ಅವರು ಇದೀಗ ಹೊಸ ಸಿನಿಮಾದ ಮೂಲಕ ಮಾಧ್ಯಮದ ಮುಂದೆ ಬರಲಿದ್ದಾರೆ. ಅಂದಹಾಗೆ ಈ ದುನಿಯಾ ವಿಜಿ ಅವರ ಹೊಸ ಚಿತ್ರದ ಹೆಸರು 'ಉಸ್ತಾದ್'.
ಚಿತ್ರದ ಟೈಟಲ್ ಹೀಗಿದೆ ಅಂದ ಮೇಲೆ ಕರಿಚಿರತೆ ವಿಜಯ್ ಅವರು ಕೂಡ ಅದೇ ಪಾತ್ರ ಮಾಡುತ್ತಾರೆ ಅಂತಾಯ್ತು. ಚಿತ್ರಕ್ಕೆ ಎಂ.ಎಸ್ ರಮೇಶ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ಇವರಿಬ್ಬರ ಜೋಡಿ 'ಶಂಕರ್ ಐ.ಪಿ.ಎಸ್' ಮತ್ತು 'ತಾಕತ್' ಚಿತ್ರದಲ್ಲಿ ಒಂದಾಗಿತ್ತು. ಇದೀಗ ಮತ್ತೆ 'ಉಸ್ತಾದ್' ಮೂಲಕ ಒಂದಾಗಿದ್ದಾರೆ.[ತಾನು ಸತ್ತರೂ ಅಭಿಮಾನಿಗಳನ್ನು ಬಿಡಲಾರೆ ಎಂದ ದುನಿಯಾ ವಿಜಿ]
ಬರೀ ನಿರ್ದೇಶನ ಮಾತ್ರವಲ್ಲದೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ಬರೆದು ತಮ್ಮ ಎಂ.ಎಸ್.ಆರ್ ಎಂರ್ಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಒಟ್ನಲ್ಲಿ ಇಡೀ ಚಿತ್ರದ ಜವಾಬ್ದಾರಿಯನ್ನು ಎಂ.ಎಸ್ ರಮೇಶ್ ಅವರೇ ಹೊತ್ತಿದ್ದಾರೆ ಎಂದರೆ ತಪ್ಪಾಗ್ಲಿಕ್ಕಿಲ್ಲ.
ದುನಿಯಾ ವಿಜಯ್ ಮತ್ತು ಎಂ.ಎಸ್ ರಮೇಶ್ ಕಾಂಬಿನೇಷನ್ ನ 'ಉಸ್ತಾದ್' ಚಿತ್ರದ ಮುಹೂರ್ತ ಸಮಾರಂಭ ಜೂನ್ 30 ರಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ.