Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ' ಎಂದ ಅಭಿಮಾನಿಗೆ ಜಗ್ಗೇಶ್ ನೀಡಿದ ಉತ್ತರ
''ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ'' ಎಂದ ಅಭಿಮಾನಿಗೆ ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ''ಸರಿಗಮಪ ಮಹಾ ಸಂಗಮದಲ್ಲಿ ಇದ್ದ ನೀವು ಕಾಮಿಡಿ ಕಿಲಾಡಿಗಳು ಬಂದಾಗ ನೀವು ಅಲ್ಲಿರಬೇಕಿತ್ತು'' ಎಂದು ನಿರಾಸೆ ವ್ಯಕ್ತಪಡಿಸಿದ ಅಭಿಮಾನಿಗೆ ಜಗ್ಗೇಶ್ ಅವರು ತಮ್ಮ ಸಮಯ ಪಾಲನೆ ಬಗ್ಗೆ ತಿಳಿಸಿದ್ದಾರೆ.
''ನಾನು ನನ್ನ ಕಾರ್ಯ ಸಮಯ ಬೆಳಿಗ್ಗೆ 9ರಿಂದ ಸಂಜೆ6ಕ್ಕೆ ಸೀಮಿತ! ಇದು ನನ್ನ 30 ವರ್ಷದ ಪಾಲನೆ ಹಾಗು ನನ್ನ ಹಿರಿಯರು ಕಲಿಸಿದ ಸಮಯಪ್ರಜ್ನೆ!ಎಷ್ಟೇ ಗಳಿಕೆ ಬಂದರು ನನ್ನ ಕಾರ್ಯಸಮಯ ಬದಲಾವಣೆಯಿಲ್ಲಾ! ಕಾರಣ ನನ್ನ ದೈನಂದಿನ ನಿಗದಿತ ದಿನಚರಿ! ಇಂದು ಈ ಶಿಸ್ತು ಎಲ್ಲಾ ಕ್ಷೇತ್ರದಲ್ಲು ಕಣ್ಮರೆ! ಅಂದು ಈ ಕಾರ್ಯಕ್ರಮ ರಾತ್ರಿ 2 ಘಂಟೆವರೆಗೆ ಇತ್ತು!'' ಎಂದು ಉತ್ತರಿಸಿದ್ದಾರೆ.
ವಯಸ್ಸಿನ ಬಗ್ಗೆ ಚಿಂತಿಸುವ ಸ್ನೇಹಿತರಿಗೆ ಜಗ್ಗೇಶ್ ಹಿತನುಡಿ
ಇದಕ್ಕೆ ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿ ''ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ. ಇನ್ನು ಹಲವು IT Professionals ನೈಟ್ ಡ್ಯೂಟಿ ಮಾಡ್ತಾರೆ. ಏಕೆಂದರೆ ಅವರಿಗೆ ಬೇರೆ ದೇಶದ ಕಾರ್ಯಸಮಯ ಕಾಪಾಡಬೇಕು. ಇದೇ ಜೀವನ'' ಎಂದಿದ್ದಾರೆ.
ಇವರ ಪ್ರತಿಕ್ರಿಯೆ ಪುನಃ ಜಗ್ಗೇಶ್ ಅವರು ಟ್ವೀಟ್ ಮಾಡಿ ''ಮನುಷ್ಯನಿಗೆ ತಾಯಿ ಗರ್ಭ ಆ ಗರ್ಭದ ಧರ್ಮ ಅ ಜೀವನಿಗೆ ದೇವರಿಂದ ನಿಯೋಜನೆಯಾದ ಕಾರ್ಯ ಜನ್ಮಾಂತರ ಪಲವಾಗಿ ನಿಗದಿ ಆಗಿರುತ್ತದೆ! ಪಾಲಿಗೆ ಬಂದದ್ದು ದೈವ ಪ್ರಸಾದವೆಂದು ಆ ಕಾರ್ಯ ಆನಂದಿಸಿ ಆಸ್ವಾಧಿಸಿ ಬದುಕಬೇಕು! ಆತ್ಮಸಂತೋಷಕ್ಕೆ ಕ್ರಮವಿದು! ಹೇಳಬೇಕು ಅನ್ನಿಸಿತು ಶುಭಮಸ್ತು!'' ಎಂದಿದ್ದಾರೆ.
Recommended Video
ಜಗ್ಗೇಶ್ ಅವರ ಅಭಿಪ್ರಾಯ ತಲೆದೂಗಿದ ಆ ಅಭಿಮಾನಿ ''ನಿಜವಾದ ಮಾತು ಅಣ್ಣಾ... ಹೊಟ್ಟೆಪಾಡು ಹಾಗೂ ದೈವ ಸಂಕಲ್ಪ. ನಮ್ಮದೇನಿದೆ. ಆಸ್ವಾದಿಸುವುದಷ್ಟೇ. ನಿಮ್ಮ ಮಾತುಗಳು ನಮ್ಮನ್ನು ಪ್ರೋತ್ಸಾಹ ಮಾಡುತ್ತದೆ'' ಎಂದಿದ್ದಾರೆ.