Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್ ಸ್ಪೂರ್ತಿ: ಅಂದು ಚಪ್ಪಲಿ ಕಾಯುವ ಕಾಯಕ, ಇಂದು ಆಟೋ ಮಾಲೀಕ
ಸಿನಿಮಾ ನಟರು ಅಂದ್ರೆ ಕೇವಲ ತೆರೆಮೇಲೆ ಮಾತ್ರ ಅಬ್ಬರಿಸಿ ಮನರಂಜಿಸುತ್ತಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರ ಹೀರೋಯಿಸಂ ತೋರಿಸುತ್ತಾರೆ. ತೆರೆಮೇಲೆ ಮಾತ್ರ ಸಾಮಾನ್ಯರಿಗೆ ಮಾದರಿಯಾಗಿರುತ್ತಾರೆ ಎಂಬ ಮಾತಿದೆ. ಆದ್ರೆ, ಈ ವಿಷ್ಯದಲ್ಲಿ ನವರಸ ನಾಯಕ ಜಗ್ಗೇಶ್ ವಿಭಿನ್ನವಾಗಿ ನಿಲ್ಲುತ್ತಾರೆ.[ಏಳು ಬೀಳು ನಡುವಿನ ನಟ ಜಗ್ಗೇಶ್ ಪಯಣ]
ಹೌದು, ಜಗ್ಗೇಶ್ ಅವರ ಸಿನಿಮಾಗಳು ಅದೇಷ್ಟೋ ಜನರಿಗೆ ಸ್ಫೂರ್ತಿಯ ಸೆಲೆಯಾಗಿವೆ. ಸಿನಿಮಾದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಜಗ್ಗೇಶ್, ನಿಜ ಜೀವನದಲ್ಲಿಯೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕೊಂದು ತಾಜಾ ಉದಾಹರಣೆ ಈ ಆಟೋ ಡ್ರೈವರ್ ಕಥೆ.['ವೀಕೆಂಡ್' ವೇದಿಕೆ ಮೇಲೆ ನಿಂತು ಸ್ಯಾಂಡಲ್ ವುಡ್ ಗೆ ಸಂದೇಶ ಕೊಟ್ಟ ಜಗ್ಗೇಶ್!]
ಕೆಲ ವರ್ಷಗಳ ಹಿಂದೆ ಅಣ್ಣಮ್ಮ ದೇವಸ್ಥಾನದ ಎದುರು ಚಪ್ಪಲಿ ಕಾಯುತ್ತಿದ್ದ ವಿಕಲಚೇತನೊಬ್ಬನನ್ನ ಜಗ್ಗೇಶ್ ಭೇಟಿಯಾಗಿದ್ದರಂತೆ. ಅವರ ಪರಿಸ್ಥಿತಿ ನೋಡಿ ಜಗ್ಗೇಶ್, ಅವರಿಗೆ ಚೈತನ್ಯ ತುಂಬಿದ್ದರಂತೆ. ಜಗ್ಗೇಶ್ ಅವರು ಕೊಟ್ಟ ಆ ಸ್ಫೂರ್ತಿಯ ನುಡಿ, ಇಂದು ಆ ವ್ಯಕ್ತಿಯನ್ನ ತನ್ನ ಸ್ವಂತ ಕಾಲಿನ ಮೇಲೆ ತಾನು ನಿಂತು ಜೀವನ ನಡೆಸುವಂತೆ ಮಾಡಿದೆ. ಈ ಸಂತಸದ ಸಂಗತಿಯನ್ನು ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.[ಅವಮಾನ ಸಹಿಸದೆ ನಾನ್ ವೆಜ್ ಮುಟ್ಟಲ್ಲ ಅಂತ ಶಪಥ ಮಾಡಿದ್ದ ಜಗ್ಗೇಶ್.!]
''ಬಹು ವರ್ಷದ ಹಿಂದೆ ಅಣ್ಣಮ್ಮ ದೇವಾಲಯದಲ್ಲಿ ಚಪ್ಪಲಿ ಕಾಯುವ ಕಾಯಕ ಮಾಡುತ್ತಿದ್ದ ಅಂಗವಿಕಲನ ಹುರಿದುಂಬಿಸಿದ್ದೆ ! ಇಂದು ಆತ ಒಬ್ಬ ಆಟೋ ಒಡೆಯ ! ಆಕಸ್ಮಿಕ ಭೇಟಿಯಾದ ! ಸಾರ್ಥಕತೆ ಬದುಕು''....- ಜಗ್ಗೇಶ್, ನಟ