Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ' ಎಂದಿದ್ದೇಕೆ ನಟ ಜಗ್ಗೇಶ್?
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಜ್ಯೋತಿಷ್ಯದ ಬಗ್ಗೆ ಬೇಸರ ಹೊರಹಾಕಿದ್ದಾರೆ. 2020 ತುಂಬಾ ಕೆಟ್ಟ ವರ್ಷ, ಈ ವರ್ಷವನ್ನು ಜೀವನದಿಂದ ಡಿಲೀಟ್ ಮಾಡಬೇಕು ಅಂತ ಎಲ್ಲರೂ ಹೇಳುತ್ತಾರೆ. ನಟ ಜಗ್ಗೇಶ್ ಕೂಡ ಈ ವರ್ಷದ ಮೇಲೆ ತುಂಬಾ ಕೋಪಗೊಂಡಿದ್ದಾರೆ.
ಕೊರೊನಾ ವೈರಸ್ ಇಡೀ ಮನುಕುಲವನ್ನೆ ನಾಶ ಮಾಡುತ್ತಿದೆ. ಅಮಾಯಕರನ್ನು ಬಲಿ ಪಡೆಯುತ್ತಿದೆ. ಇಡೀ ವಿಶ್ವವನ್ನೆ ಆವರಿಸಿರುವ ಕೊರೊನಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 2020ರಲ್ಲಿ ಇಂತಹ ಒಂದು ದೊಡ್ಡ ಸಮಸ್ಯೆ ಬರುತ್ತೆ, ಮನುಕುಲವನ್ನೇ ನಾಶ ಮಾಡುತ್ತೆ ಅಂತ ಯಾವ ಜ್ಯೋತಿಷ್ಯರು ಭವಿಷ್ಯ ಹೇಳಲಿಲ್ಲ ಎಂದು ಜಗ್ಗೇಶ್ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವರಿಗೇ ಇಂಥಹಾ ಸ್ಥಿತಿ: ಜಗ್ಗೇಶ್ ಹಂಚಿಕೊಂಡ ಆಘಾತಕಾರಿ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಜಗ್ಗೇಶ್ ಸಮಾಜದ ಆಗು ಹೋಗುಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಯಾವುದೇ ಸಮಸ್ಯೆ ಕಂಡು ಬಂದರು, ಯಾವುದೇ ಘಟನೆ ಬಗ್ಗೆಯಾದರೂ ಜಗ್ಗೇಶ್ ಮೊದಲು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದೀಗ ಜ್ಯೋತಿಷ್ಯದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
"2020 ಆರಂಭಕ್ಕೆ ಬಹುತೇಕ ಜ್ಯೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಭುತ ಮಳೆಬೆಳೆ. ಕೆಲ ರಾಶಿಗಳಿಗೆ ಶನಿಗುರು ಉತ್ತಮ ಫಲ ಎಂದು ಆನೆ ಕುದುರೆ ಮೇಲೆ ಸವಾರಿ ಮಾಡಿ ಹೇಳಿ ಬಿಟ್ಟರು. ಆದರೆ ಕೊರೊನಾ ವಿಶ್ವ ಮನು ಕುಲಕ್ಕೆ ಹೀಗೆ ಗುಮ್ಮಿ ಅಮಾಯಕರ ಸಾವು, ನೋವು, ನಷ್ಟ ಆಗುತ್ತದೆ ಎಂದು ಹೇಳಲಿಲ್ಲ. ಜ್ಯೋತಿಷ್ಯಕಿಂತ ನಿಮ್ಮ ನೀವು ನಂಬಿ. ನೀವು ಸರಿ ಇದ್ದರೆ ಜೀವ ಜಗ ಸರಿಯಿರುತ್ತದೆ." ಎಂದು ಹೇಳಿದ್ದಾರೆ.
Recommended Video
ಇನ್ನೂ ಇತ್ತೀಚಿಗೆ ಇಹಲೋಕ ತ್ಯಜಿಸಿದ ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಬಗ್ಗೆ ಮಾತನಾಡಿದ್ದ ಜಗ್ಗೇಶ್, ಚೀನಾ ವಿರುದ್ಧ ಹರಿಹಾಯ್ದಿದ್ದರು. ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿಸಿ, ಅಮಾಯಕರ ಪ್ರಾಣ ತೆಗೆಯುತ್ತಿದೆ, ಚೀನಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.