Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ: ಜಗ್ಗೇಶ್ ಕಂಠದಲ್ಲಿ ಸುಮಧುರ ಹಾಡು ಕೇಳಿ, ಬೇಸರ ದೂರ ಓಡಿಸಿ
ಕಲಾವಿದ ಎಲ್ಲಿದ್ದರೂ ಕಲಾವಿದನೇ. ಹಿರಿತೆರೆ-ಕಿರಿತೆರೆ, ರಂಗಭೂಮಿ, ಬೀದಿ ನಾಟಕ ಒಟ್ಟಾರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಕೊಡುವುದೇ ಅವನ ಧ್ಯೇಯ. ಒಳ್ಳೆಯ ಕಲಾವಿದನೊಬ್ಬನ ಮುಖ್ಯ ಲಕ್ಷಣ.
ದಿನವಹಿ ಸಿನಿಮಾಗಳಲ್ಲಿ ನಟಿಸುತ್ತಾ, ರಿಯಾಲಿಟಿ ಶೋ ಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಾ, ಒಂದಲ್ಲಾ ಒಂದು ರೀತಿ ಪ್ರೇಕ್ಷಕ ಪ್ಭುಗಳ ಮನರಂಜನೆ ಮಾಡುತ್ತಿದ್ದ ನವರಸ ನಾಯಕ ಜಗ್ಗೇಶ್ ಅವರು ಕೊರೊನಾ ಲಾಕ್ಡೌನ್ ಕಾರಣದಿಂದ ಎರಡು ವಾರದಿಂದ ಮನೆಯಲ್ಲಿಯೇ ಇದ್ದಾರೆ.
'ನಾವು ಡಂಗೂರ ಹೊಡೆದು ಕೆಲಸ ಮಾಡಲ್ಲ' ಸಮಾಜಸೇವೆ ಪ್ರಶ್ನಿಸಿದವರ ವಿರುದ್ಧ ಜಗ್ಗೇಶ್ ಗರಂ
ಆದರೆ ಮನೆಯಲ್ಲಿ ಸುಮ್ಮನೇ ಸಮಯ ಕಳೆಯುವ ಬದಲಿಗೆ ಸಾಮಾಜಿಕ ಜಾಲತಾಣ ಬಳಸಿಕೊಂಡು ಒಂದಷ್ಟು ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡಿರುವ ಅವರು, ಈಗ ಅದೇ ಸಾಮಾಜಿಕ ಜಾಲತಾಣ ಬಳಸಿಕೊಂಡು ಮನರಂಜನೆ ನೀಡುವ ಕಾರ್ಯವನ್ನು ಮಾಡಿದ್ದಾರೆ.
ಸುಶ್ರಾವ್ಯವಾಗಿ ಹಾಡಿದ ನಟ ಜಗ್ಗೇಶ್
ಖಾಲಿ ಸಮಯದಲ್ಲಿ ತಮ್ಮ ಅಭಿಮಾನಿಗಳ, ಆತ್ಮರ ಬೇಜಾರು ಕಳೆಯಲೆಂದು ಜಗ್ಗೇಶ್ ಅವರು ಕನ್ನಡದ ಹಾಡೊಂದನ್ನು ಹಾಡಿದ್ದು, ಸುಶ್ರಾವ್ಯವಾಗಿ ಹಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ವಿಷ್ಣುವರ್ಧನ್ ಅಭಿನಯದ ಹಾಡು ಹಾಡಿದ ಜಗ್ಗೇಶ್
ವಿಷ್ಣುವರ್ಧನ್ ಅಭಿನಯದ 'ಹೃದಯ ಗೀತೆ' ಸಿನಿಮಾದ 'ಯುಗ ಯುಗಗಳೇ ಸಾಗಲಿ ನಮ ಪ್ರೇಮ ಶಾಶ್ವತ' ಹಾಡನ್ನು ಕ್ಯಾರಿಯೋಕೆ ರೀತಿಯಲ್ಲಿ ಹಾಡಿರುವ ಜಗ್ಗೇಶ್, ತಾವೊಬ್ಬ ಉತ್ತಮ ಹಾಡುಗಾರರೆಂದು ಸಾಬೀತುಪಡಿಸಿದ್ದಾರೆ.
ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು ಮಾರ್ಚ್ 22: ಏನದು?
ವಿಡಿಯೋವನ್ನು ಹಲವಾರು ಮಂದಿ ಲೈಕ್ ಮಾಡಿದ್ದಾರೆ
ಶ್ರುತಿ-ಲಯ-ತಾಳ ತಪ್ಪದೆ, ಮೂಲ ಹಾಡಿನಂತೆಯೇ ಯಥಾವತ್ತು ಏರಿಳಿತದೊಂದಿಗೆ ಜಗ್ಗೇಶ್ ಅವರು ಹಾಡು ಹಾಡಿದ್ದು, ಹಾಡಿನ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಹಲವು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.
ಬೆಳಕು ಯಶಸ್ಸಿನ ಸಂಕೇತ: ಜಗ್ಗೇಶ್
ವಿಡಿಯೋ ಜೊತೆಗೆ ''ಒಬ್ಬ ಕಲಾವಿದನಾಗಿ ಮನೆಯಲ್ಲಿಯೇ ಕೂತು ಬೇಜಾರಾದ ನನ್ನ ಆತ್ಮೀಯ ಮನಗಳ ಕೆಲಕಾಲ ಸಂತೋಷ ಪಡಿಸುವ ನನ್ನ ಸಣ್ಣ ಪ್ರಯತ್ನ.. ನಾನು ಹಾಡುಗಾರನಲ್ಲಾ ತಪ್ಪಿದ್ದರೆ ಕ್ಷಮಿಸಿ.. ನಾಳೆ 9ಘಂಟೆಗೆ 9ನಿಮಿಷಗಳ ಕಾಲ ದೀಪ ಬೆಳಗಿಸುವ!ಬೆಳಕು ಯಶಸ್ಸಿನ ಸಂಕೇತ! ಯುಗ ಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ ಇರಲಿ ಎಂದು ರಾಯರ ಬೇಡುವೆ'' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಮಾತು ಉಳಿಸಿಕೊಂಡ ಜಗ್ಗೇಶ್: ನಿರ್ಭಯಾ ಹಂತಕರ ಹ್ಯಾಂಗ್ ಮ್ಯಾನ್ ಗೆ 1 ಲಕ್ಷ ದೇಣಿಗೆ