ಸ್ಯಾಂಡಲ್ ವುಡ್ 'ಬಾಸ್' ಯಾರು? ಎಂಬ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಉತ್ತರವಿದು
Recommended Video

ಕನ್ನಡ ಚಿತ್ರರಂಗದ 'ಬಾಸ್' ಯಾರು ಎಂಬ ವಿಚಾರ ಬಹಳ ಚರ್ಚೆ ಆಗಿತ್ತು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ 'ಬಾಸ್' ಪಟ್ಟಕ್ಕಾಗಿ ಜಗಳ ಶುರು ಮಾಡಿದ್ದರು. ಈ ವಿಚಾರವಾಗಿ ನಟ ಅಂಬರೀಶ್ ಮಾತನಾಡಿ ''ಇಲ್ಲಿ ಯಾರಿಗೆ ಯಾರು ಬಾಸ್ ಇಲ್ಲ.'' ಎಂದಿದ್ದರು. ಅದರ ಬಳಿಕ ಈ ಬಗ್ಗೆ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಅಂಬರೀಶ್ ಅವರ ಹೇಳಿಕೆಯ ಸುದ್ದಿಯನ್ನು 'ಫಿಲ್ಮಿಬೀಟ್ ಕನ್ನಡ' ಪ್ರಕಟಿಸಿದ್ದು, ಇದಕ್ಕೆ ಟ್ವಿಟ್ಟರ್ ನಲ್ಲಿ ನಟ ಜಗ್ಗೇಶ್ ಪ್ರತಿ ಉತ್ತರ ನೀಡಿದ್ದಾರೆ.

''ಇಂಥ ಪ್ರಶ್ನೆಗಳಿಗೆ ಉತ್ತರ ಭಗವತ್ ಗೀತೆಯಲ್ಲಿ ಇದೆ. ಸೃಷ್ಟಿಯ ಎಲ್ಲಾ ಯಶಸ್ಸಿಗೆ ಕಾರಣ ದೇವರು..ಮನುಷ್ಯ ನೆಪ ಮಾತ್ರ. ದೇವರು ಕಣ್ಣು ಬಿಟ್ಟರೆ ಭಿಕ್ಷುಕ ಸುಪ್ಪತ್ತಿಗೆಯಲ್ಲಿ. ಅವನು ಕಣ್ಣು ಮಚ್ಚಿದರೆ ಸಿಂಹಾಸನವೆ ಮಾಯ. ಹಾಗಾಗಿ ಎಲ್ಲವನ್ನು ದೇವರ ಮೇಲೆ ಹಾಕಿ ನೆಮ್ಮದಿಯಿಂದ ಬ್ರಾತೃತ್ವದಿಂದ ಬಾಳಲು ಕಲಿಯಬೇಕು. ಹಣ, ಯಶಸ್ಸು ನಶ್ವರ ದೇವರಮುಂದೆ ಜೀವನತತ್ವ.'' ಎಂದು ಜಗ್ಗೇಶ್ ಸಂದೇಶ ನೀಡಿದ್ದಾರೆ.
ನಂಬರ್ 1 ಸ್ಥಾನ, 'ಬಾಸ್' ಪಟ್ಟ ಇವೆಲ್ಲವು ನಶ್ವರ ಎಂದು ಜಗ್ಗೇಶ್ ಸ್ಟಾರ್ ನಟರಿಗೆ ಮತ್ತು ಅವರ ಅಭಿಮಾನಿಗಳಿಗೆ ಹೇಳಿದ್ದಾರೆ.


Click it and Unblock the Notifications











