Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ: ತಾನು ಓದಿದ ಶಾಲೆಯನ್ನು ಉಳಿಸುವಂತೆ ನಟ ಕಿರಣ್ ಮನವಿ
'ಹಾಗೆ ಸುಮ್ಮನೆ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಕಿರಣ್ ಶ್ರೀನಿವಾಸ್ ತಾವು ಓದಿದ ಶಾಲೆಯನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು ಪ್ರೌಢಶಾಲೆ (ಬಿಎಚ್ಎಸ್)ಯು ವಿದ್ಯಾರ್ಥಿಗಳ ದಾಖಲಾತಿ ಇಲ್ಲದ ಕಾರಣ ಮುಚ್ಚುವ ಹಂತಕ್ಕೆ ಬಂದಿದ್ದು, ಶಾಲೆಯನ್ನು ಉಳಿಸುವಂತೆ ಕಿರಣ್ ಮನವಿ ಮಾಡಿದ್ದಾರೆ.
'ನಾನು ಇಂದು ಈ ಹಂತಕ್ಕೆ ಬಂದು ನಿಂತಿರುವುದಕ್ಕೆ ಬಿಎಚ್ಎಸ್ ಶಾಲೆ ಕಾರಣ. ಆ ಶಾಲೆಯಲ್ಲಿಯೇ ನನ್ನ ಹಲವಾರು ಕನಸುಗಳು ಮೊದಲುಗೊಂಡವು. ನನ್ನ ವ್ಯಕ್ತಿತ್ವವನ್ನು ತಿದ್ದಿದ್ದು ಸಹ ಅದೇ ಶಾಲೆ ಹಾಗೂ ಅಲ್ಲಿನ ಶಿಕ್ಷಕರು' ಎಂದಿದ್ದಾರೆ ಕಿರಣ್.
'ಈಗ ಎಂಟು ಮತ್ತು ಒಂಬತ್ತನೇ ತರಗತಿಗೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲವಾದ್ದರಿಂದ ಶಾಲೆಯನ್ನು ಮುಚ್ಚುವ ಯೋಚನೆ ಮಾಡಲಾಗುತ್ತಿದೆ. ಇಂಥಹಾ ಒಂದು ಒಳ್ಳೆಯ ಶಾಲೆ ಮುಚ್ಚುವುದು ಸೂಕ್ತವಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಬಿಎಚ್ಎಸ್ ಶಾಲೆಗೆ ಸೇರಿಸಿ ಎಂದಿದ್ದಾರೆ ಕಿರಣ್.
'ಬಿಎಚ್ಎಸ್ನಲ್ಲಿ ಪಠ್ಯದ ಜೊತೆಗೆ ಇತರೆ ಕ್ರಿಯಾತ್ಮಕ, ಸೃಜನಶೀಲ ಚಟುವಟಿಕೆಗೂ ಸಾಕಷ್ಟು ಪ್ರಾಧಾನ್ಯತೆ ನೀಡುತ್ತಾರೆ ಹಾಗಾಗಿ ಈ ಶಾಲೆಗೆ ಮಕ್ಕಳನ್ನು ಸೇರಿಸಿ. ಹೌದು ನಾವೀಗ ಕೊರೊನಾ ಮಾರಿಯ ನಡುವೆ ಇದ್ದೇವೆ. ಆದರೆ ಯಾರೇ ನಿಮ್ಮ ಸ್ನೇಹಿತರು, ಸಂಬಂಧಿಗಳು ಮಕ್ಕಳನ್ನು ಎಂಟು, ಒಂಬತ್ತನೇ ತರಗತಿಗೆ ಸೇರಿಸುವ ಯೋಚನೆಯಲ್ಲಿದ್ದರೆ ಅವರಿಗೆ ಬಿಎಚ್ಎಸ್ ಶಾಲೆಯ ಬಗ್ಗೆ ಹೇಳಿ ಎಂದಿದ್ದಾರೆ ಕಿರಣ್.
Recommended Video
'ಹಾಗೇ ಸುಮ್ಮನೆ' ಸಿನಿಮಾದಲ್ಲಿ ನಟಿಸಿರುವ ಕಿರಣ್, ಕನ್ನಡ ಮಾತ್ರವಲ್ಲದೆ ಹಿಂದಿ ಸಿನಿಮಾಗಳು, ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.