Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೇಶ್ ಬಾಬು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ
ಬ್ಲಾಕ್ ಬಸ್ಟರ್ ಸಿನಿಮಾಗಳಿಂದ ಖ್ಯಾತಿ ಗಳಿಸಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ತೆರೆಮೇಲೆ ಮಾತ್ರ ಮಾನವೀಯತೆ ಮೆರೆಯುವುದಿಲ್ಲ, ನಿಜ ಜೀವನದಲ್ಲೂ ಅಷ್ಟೇ ಭಾವುಕ ಜೀವಿ.
ತೆಲುಗು ಸಿನಿ ಅಂಗಳದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹೇಶ್ ಬಾಬು ಚಿತ್ರಜೀವನದ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ, ಮಹೇಶ್ ಬಾಬು ವಾಸ್ತವದಲ್ಲಿ ಹೇಗಿರುತ್ತಾರೆ? ಸಿಗುವ ಕಡಿಮೆ ಸಮಯದಲ್ಲಿ ಏನು ಮಾಡುತ್ತಾರೆ? ಅನ್ನುವ ಸತ್ಯ ಸಂಗತಿ ಯಾರಿಗೂ ಗೊತ್ತಿಲ್ಲ.
ಅಂತಹ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೀಗ ಬಯಲಾಗಿದೆ. ತಮಗೆ ಬರುವ ಸಂಭಾವನೆಯಲ್ಲಿ ವಿಕಲ ಚೇತನ ಮಕ್ಕಳಿಗೆ, ಅನಾಥ ಮಕ್ಕಳಿಗೆ ಮತ್ತು ವೃದ್ಧರಿಗೆ ಮಹೇಶ್ ಬಾಬು ಸದಾ ಸಹಾಯ ಮಾಡುತ್ತಾರೆ. [ವಿಕ್ರಮ್ ಸಂಭಾವನೆಯ ಅರ್ಧ ಮೊತ್ತ ಸೇರಿದ್ದು ಯಾರಿಗೆ?]
ಹೌದು, ತಮ್ಮ ಸಂಭಾವನೆಯ 30% ಭಾಗವನ್ನ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡುತ್ತಾರಂತೆ ಮಹೇಶ್ ಬಾಬು. ಅನೇಕ ಎನ್.ಜಿ.ಓ ಗಳಿಗೆ ಪತ್ನಿ ನಮ್ರತಾ ಕೂಡ ಸಹಾಯ ಹಸ್ತ ಚಾಚುತ್ತಿದ್ದಾರೆ. ಪತ್ನಿಗೆ ಕೈಜೋಡಿಸಿ, ವರ್ಷಕ್ಕೆ 15 ಕೋಟಿ ರೂಪಾಯಿ ಚಾರಿಟಿ ನೀಡುತ್ತಿದ್ದಾರೆ ಮಹೇಶ್. [ನಟ ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ]
ಆ ಮೂಲಕ ಅದೆಷ್ಟೋ ಎನ್.ಜಿ.ಓ ಗಳಿಗೆ ಧನ ಸಹಾಯ ಮಾಡುತ್ತಿದ್ದಾರೆ ಮಹೇಶ್ ಬಾಬು. ''ಎಲ್ಲಾ ಮಕ್ಕಳು ಒಂದೇ. ಪುಟಾಣಿ ಮಕ್ಕಳನ್ನ ನೋಡಿದಾಗ ನನ್ನ ಮಕ್ಕಳು ನೆನಪಾಗುತ್ತಾರೆ. ನನ್ನ ಕೈಯಲ್ಲಾಗಿದ್ದನ್ನ ನಾನು ಮಾಡುತ್ತಿದ್ದೇನೆ'' ಅಂತ ಎನ್.ಜಿ.ಓ ಒಂದಕ್ಕೆ ರಾಯಭಾರಿ ಆಗಿರುವ ಮಹೇಶ್ ಬಾಬು ಹೇಳಿಕೆ ನೀಡಿದ್ದಾರೆ.
ಕೋಟಿ ಕೋಟಿ ದುಡ್ಡು ಹರಿದು ಬರುತ್ತಿದ್ದಂತೆ ಅಮಲು ನೆತ್ತಿಗೇರಿಸಿಕೊಳ್ಳುವ ಅನೇಕರ ನಡುವೆ ಅನಾಥ ಮಕ್ಕಳಿಗೆ ಭವಿಷ್ಯ ಕಲ್ಪಿಸುತ್ತಿರುವ ಮಹೇಶ್ ಬಾಬು ನಿಜಕ್ಕೂ ರಿಯಲ್ 'ಹೀರೋ'. (ಏಜೆನ್ಸೀಸ್)